<?xml version="1.0" encoding="UTF-8"?><?xml-stylesheet href="yrss.xsl" type="text/xsl" media="screen" ?><rss version="2.0"><channel><title>Yahoo! Kannada: News</title><link>http://kannada.webdunia.com/newsworld/news/</link><description>Yahoo! Kannada</description><language>kn-in</language><copyright>Copyright (c) 2009 Yahoo! Inc. All rights reserved.</copyright><lastBuildDate>Tue, 24 Nov 2009 08:51:48 GMT</lastBuildDate><item><title>ಜನತಾ ಪರಿವಾರ ಮುಗಿದ ಅಧ್ಯಾಯ: ಉಮೇಶ್ ಕತ್ತಿ</title><guid isPermaLink="true">http://kannada.webdunia.com/newsworld/news/regional/0911/24/1091124038_1.htm</guid><link>http://kannada.webdunia.com/newsworld/news/regional/0911/24/1091124038_1.htm</link><description>ಬೆಂಗಳೂರು: ಸಂಕಷ್ಟ ಬಂದಾಗ ಮಾತ್ರ ಜನತಾ ಪರಿವಾರ ಒಂದಾಗಲಿ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅಲವತ್ತುಕೊಳ್ಳುತ್ತಾರೆ ಎಂದು ತೋಟಗಾರಿಕಾ ಸಚಿವ ಉಮೇಶ್ ಕತ್ತಿ ಲೇವಡಿ ಮಾಡಿದ್ದಾರೆ.

ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಕತ್ತಿ, ಬಹಳ ದಿನಗಳ ಹಿಂದೆಯೇ ಜನತಾ ಪರಿವಾರ ಒಂದಾಗಬೇಕೆಂದು ಗೌಡರು ಅರಿತುಕೊಂಡಿದ್ದಿದ್ದರೆ ಇಂದು ಬೇರೆ ಪಕ್ಷ ಅಧಿಕಾರ ನಡೆಸಲು ಸಾಧ್ಯವೇ ಇರತ್ತಿರಲಿಲ್ಲ. ಜೆಡಿಎಸ್‌ಗೆ ಈ ಪರಿಸ್ಥಿತಿ ಬರಲು ಕಾರಣ ಏನು ? ಎಂಬುದನ್ನು ಅವರು ಪುನರ್ ವಿಮರ್ಶೆ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.</description><pubDate>Tue, 24 Nov 2009 13:29:59 GMT</pubDate></item><item><title>ಅಣ್ವಸ್ತ್ರ ಒಯ್ಯುವ ಅಗ್ನಿ-2 ಕ್ಷಿಪಣಿ ಪ್ರಯೋಗ ವಿಫಲ</title><guid isPermaLink="true">http://kannada.webdunia.com/newsworld/news/national/0911/24/1091124037_1.htm</guid><link>http://kannada.webdunia.com/newsworld/news/national/0911/24/1091124037_1.htm</link><description>ಬಾಲಸೋರ್: ಭಾರತದ ಅಣ್ವಸ್ತ್ರ ಒಯ್ಯುವ ಸಾಮರ್ಥ್ಯದ ಮಧ್ಯಗಾಮಿ ವ್ಯಾಪ್ತಿಯ ಅಗ್ನಿ-2 ಕ್ಷಿಪಣಿಯನ್ನು ಸೋಮವಾರ ಸಂಜೆ ಸೂರ್ಯಾಸ್ತದ ಸ್ವಲ್ಪ ಸಮಯದಲ್ಲೇ ಪರೀಕ್ಷಾರ್ಥ ಪ್ರಯೋಗಿಸಲಾಗಿದ್ದು, ನಿರೀಕ್ಷಿತ ಫಲಿತಾಂಶ ಬರುವಲ್ಲಿ ವಿಫಲವಾಗಿದೆ.</description><pubDate>Tue, 24 Nov 2009 13:22:13 GMT</pubDate></item><item><title>'ವಿಚಾರಣೆ ಇಲ್ಲದೆಯೇ ವಾಜಪೇಯಿ ಮೇಲೆ ಆರೋಪ ಹೇಗೆ?'
</title><guid isPermaLink="true">http://kannada.webdunia.com/newsworld/news/national/0911/24/1091124035_1.htm</guid><link>http://kannada.webdunia.com/newsworld/news/national/0911/24/1091124035_1.htm</link><description>ಚಂಡೀಗಢ:ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿ &quot;ಸೋರಿಕೆ&quot;ಯಾದ ಲಿಬರ್ಹಾನ್ ಆಯೋಗದ ವರದಿಯಲ್ಲಿ ಬಿಜೆಪಿಯ ಇತರ ಮುಖಂಡರೊಂದಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನೂ ಸೇರಿಸಿರುವುದು ವಿಸ್ಮಯ ಮೂಡಿಸಿದೆ ಎಂದು ಲಿಬರ್ಹಾನ್ ಆಯೋಗದ ಮಾಜಿ ವಕೀಲ ಅನುಪಮ್ ಗುಪ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</description><pubDate>Tue, 24 Nov 2009 13:12:59 GMT</pubDate></item><item><title>ನಾನು ಸಿಎಂ ಆಗಿದ್ರೆ ರೆಡ್ಡಿಗಳನ್ನು ಕಿತ್ತೊಗೆಯುತ್ತಿದ್ದೆ: ಸಿದ್ದರಾಮಯ್ಯ
</title><guid isPermaLink="true">http://kannada.webdunia.com/newsworld/news/regional/0911/24/1091124033_1.htm</guid><link>http://kannada.webdunia.com/newsworld/news/regional/0911/24/1091124033_1.htm</link><description>ಮೈಸೂರು: 'ನಾನು ಮುಖ್ಯಮಂತ್ರಿಯಾಗಿದ್ದರೆ ಗಣಿಲೂಟಿ ಮಾಡುತ್ತಿದ್ದ ರೆಡ್ಡಿ ಸಹೋದರರನ್ನು ಕಿತ್ತೊಗೆಯುತ್ತಿದ್ದೆ. ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಅವರಿಗೆ ಇದನ್ನು ಮಾಡಲು ತಾಕತ್ತಿಲ್ಲ. ಇಂಥವರು ಅಧಿಕಾರದಲ್ಲಿದ್ದರೆ ರಾಜ್ಯದ ಜನ ಏನು ನಿರೀಕ್ಷಿಸಲು ಸಾಧ್ಯ' ಎಂದು ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಅವರು ರಾಂಪುರ, ದೊಡ್ಡಹೊಮ್ಮತಗಡೂರು ಗ್ರಾಮಗಳಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಅಧಿಕಾರ ನಡೆಸಲು ಬಾರದವರನ್ನು ಇನ್ನು ಮುಂದೆ ಆಯ್ಕೆ ಮಾಡಬೇಡಿ ಎಂದು ಜನರಿಗೆ ಸಲಹೆ ನೀಡಿದರು.</description><pubDate>Tue, 24 Nov 2009 13:06:04 GMT</pubDate></item><item><title>ಅವಧಿ ಮುನ್ನವೇ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ</title><guid isPermaLink="true">http://kannada.webdunia.com/newsworld/news/international/0911/24/1091124028_1.htm</guid><link>http://kannada.webdunia.com/newsworld/news/international/0911/24/1091124028_1.htm</link><description>ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಮಹೀಂದ ರಾಜಪಕ್ಷ ಸೋಮವಾರ ಅವಧಿಪೂರ್ವ ಚುನಾವಣೆಗೆ ಕರೆ ನೀಡುವ ಆದೇಶಕ್ಕೆ ಸಹಿ ಹಾಕಿದ್ದಾರೆ. ಸುಮಾರು 25 ವರ್ಷಗಳಿಂದ ನಡೆಯುತ್ತಿದ್ದ ಆಂತರ್ಯುದ್ಧಕ್ಕೆ ಕೊನೆ ಹಾಡಿದ ಬಳಿಕ ತಮಗಿರುವ ಜನಪ್ರಿಯತೆ ಲಾಭ ಪಡೆದು 6 ವರ್ಷಗಳ ಅವಧಿಯ ಅಧ್ಯಕ್ಷಾವಧಿಯಲ್ಲಿ ವಿಜಯಿಯಾಗಲು ರಾಜಪಕ್ಷ ನಿರ್ಧರಿಸಿದ್ದಾರೆ.
</description><pubDate>Tue, 24 Nov 2009 12:26:52 GMT</pubDate></item><item><title>ಅಕ್ರಮ ಗಣಿ ಪ್ರಕರಣ ಸಿಬಿಐಗೆ ವಹಿಸಿ: ರಾಜ್ಯಕ್ಕೆ ಜೇಠ್ಮಲಾನಿ</title><guid isPermaLink="true">http://kannada.webdunia.com/newsworld/news/regional/0911/24/1091124026_1.htm</guid><link>http://kannada.webdunia.com/newsworld/news/regional/0911/24/1091124026_1.htm</link><description>ಧಾರವಾಡ:ಆಂಧ್ರಪ್ರದೇಶ ಹಾಗೂ ಕರ್ನಾಟಕ ಗಡಿಭಾಗದಲ್ಲಿನ ಗಣಿಧಣಿಗಳಾದ ಜನಾರ್ದನ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ಒಡೆತನದ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿವಾದದ ಕುರಿತು ಕರ್ನಾಟಕ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ತಿಳಿಸಿದ್ದಾರೆ.</description><pubDate>Tue, 24 Nov 2009 11:47:04 GMT</pubDate></item><item><title>ಪಾಕ್‌ಗೆ ಮಿಲಿಟರಿ ನೆರವು ದುರ್ಬಳಕೆ: ಪ್ರಧಾನಿ ಕಳವಳ</title><guid isPermaLink="true">http://kannada.webdunia.com/newsworld/news/international/0911/24/1091124025_1.htm</guid><link>http://kannada.webdunia.com/newsworld/news/international/0911/24/1091124025_1.htm</link><description>ವಾಷಿಂಗ್ಟನ್: ಪಾಕಿಸ್ತಾನಕ್ಕೆ ಅಮೆರಿಕ ನೀಡುವ ಮಿಲಿಟರಿ ಮತ್ತಿತರ ನೆರವನ್ನು ದುರ್ಬಳಕೆ ಮಾಡುತ್ತಿರುವ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಕಳವಳ ವ್ಯಕ್ತಪಡಿಸಿದರು. ಒಬಾಮಾ ಆಡಳಿತ ಅಧಿಕಾರಿಗಳು ಮತ್ತು ಸದಸ್ಯರ ಜತೆ ಸರಣಿ ಸಭೆಗಳಲ್ಲಿ ವಲಯದ ಪರಿಸ್ಥಿತಿ ವಿಶೇಷವಾಗಿ ಪಾಕಿಸ್ತಾನದ ಮತ್ತು ಆಫ್ಘಾನಿಸ್ತಾನದಿಂದ ಹೊಮ್ಮುವ ಭಯೋತ್ಪಾದನೆ ಮುಖ್ಯವಾಗಿ ಚರ್ಚೆಯಾಯಿತು.
</description><pubDate>Tue, 24 Nov 2009 11:35:33 GMT</pubDate></item><item><title>ಯಡಿಯೂರಪ್ಪ ನೈತಿಕತೆ ಕಳೆದುಕೊಂಡಿದ್ದಾರೆ: ಎಚ್‌ಡಿಕೆ</title><guid isPermaLink="true">http://kannada.webdunia.com/newsworld/news/regional/0911/24/1091124023_1.htm</guid><link>http://kannada.webdunia.com/newsworld/news/regional/0911/24/1091124023_1.htm</link><description>ಬೆಂಗಳೂರು: ಬಳ್ಳಾರಿಯ ರೆಡ್ಡಿ ಸಹೋದರರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಕ್ರಮ ಗಣಿಗಾರಿಕೆ ಕುರಿತು ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ರಾಜ್ಯದಲ್ಲಿ ಭಾರಿ ಪ್ರಮಾಣದ ವಿದ್ಯುತ್ ಲೋಡ್‌ಶೆಡ್ಡಿಂಗ್ ಜಾರಿಗೊಳಿಸಿರುವುದನ್ನು ವಿರೋಧಿಸಿ ಪಕ್ಷದ ವತಿಯಿಂದ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ರಾಜ್ಯ ಸರ್ಕಾರ ಜಾಣ ಮೌನ ವಹಿಸಿದೆ ಎಂದು ದೂರಿದರು.</description><pubDate>Tue, 24 Nov 2009 11:27:19 GMT</pubDate></item><item><title>ಪತ್ನಿಯನ್ನು ನಿಂದಿಸಿದರೆ ವರದಕ್ಷಿಣೆ ಹಿಂಸೆಯಲ್ಲ: ಹೈಕೋರ್ಟ್</title><guid isPermaLink="true">http://kannada.webdunia.com/newsworld/news/regional/0911/24/1091124022_1.htm</guid><link>http://kannada.webdunia.com/newsworld/news/regional/0911/24/1091124022_1.htm</link><description>ಬೆಂಗಳೂರು: ಮನೆ ಕೆಲಸ ಮಾಡದ, ಅಪರಿಚಿತರೊಂದಿಗೆ ಮಾತನಾಡಿದ ಮತ್ತು ಮನೆ ಸರಂಜಾಮು ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಪತ್ನಿಯನ್ನು ನಿಂದಿಸಿದರೆ ಅದು ಭಾರತೀಯ ದಂಡ ಸಂಹಿತೆಯ(ಐಪಿಸಿ) 498(ಎ) ವ್ಯಾಖ್ಯೆ(ವರದಕ್ಷಿಣೆ ಹಿಂಸೆ)ಗೆ ಒಳಪಡುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಐಪಿಸಿ 498(ಎ)ಅಡಿಯಲ್ಲಿ ತಮ್ಮನ್ನು ಶಿಕ್ಷೆಗೆ ಒಳಪಡಿಸಿದ ಅಧೀನ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಜಿ.ಆರ್.ಲೋಕನಾಥ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಅರಳಿ ನಾಗರಾಜ್ ಅವರಿದ್ದ ಏಕಸದಸ್ಯ ಪೀಠ ಲೋಕನಾಥ್ ಮತ್ತಿತರರನ್ನು ಆರೋಪಮುಕ್ತಗೊಳಿಸಿತು.</description><pubDate>Tue, 24 Nov 2009 11:08:29 GMT</pubDate></item><item><title>ಪ್ರಜಾಪ್ರಭುತ್ವ ವಿರೋಧಿ ಹಾದಿ ಭಾರತ ತುಳಿಯುವುದಿಲ್ಲ&apos;</title><guid isPermaLink="true">http://kannada.webdunia.com/newsworld/news/international/0911/24/1091124016_1.htm</guid><link>http://kannada.webdunia.com/newsworld/news/international/0911/24/1091124016_1.htm</link><description>ವಾಷಿಂಗ್ಟನ್: ಚೀನಾದಿಂದ ಇತ್ತೀಚೆಗೆ ನಿಶ್ಚಿತ ಪ್ರಮಾಣದ ಆಕ್ರಮಣಕಾರಿ ಮನೋಭಾವ ವ್ಯಕ್ತವಾಗಿದ್ದು, ಭಾರತ ಆ ರೀತಿಯ ಪ್ರಜಾಪ್ರಭುತ್ವ ವಿರೋಧಿ ಮಾರ್ಗವನ್ನು ತುಳಿಯುವುದಿಲ್ಲವೆಂದು ಪ್ರಧಾನಿ ಮನಮೋಹರನ್ ಸಿಂಗ್ ಮಂಗಳವಾರ ಉತ್ತರಿಸಿದ್ದಾರೆ. ಚೀನಾದಿಂದ ಕೆಲವು ಪ್ರಚೋದನ್ಮಾತ್ಮಕ ಕ್ರಮಗಳ ಹಿನ್ನೆಲೆಯಲ್ಲಿ ಪ್ರಧಾನಿ ಹೇಳಿಕೆ ಹೊರಬಿದ್ದಿದೆ.

</description><pubDate>Tue, 24 Nov 2009 10:13:22 GMT</pubDate></item><item><title>ಬಾಂಬ್ ಸ್ಫೋಟಕ್ಕೆ ಸೈನಿಕರ ಬಲಿ</title><guid isPermaLink="true">http://kannada.webdunia.com/newsworld/news/international/0911/24/1091124011_1.htm</guid><link>http://kannada.webdunia.com/newsworld/news/international/0911/24/1091124011_1.htm</link><description>ಕಾಬೂಲ್: ಉಗ್ರರು ನಡೆಸಿದ ಸರಣಿ ಬಾಂಬ್ ದಾಳಿಯಲ್ಲಿ ನಾಲ್ವರು ಅಮೆರಿಕ ಸೈನಿಕರ ಸಹಿತ ಇಬ್ಬರು ಅಫಘಾನ್ ಯೋಧರು ಬಲಿಯಾಗಿದ್ದಾರೆ.
</description><pubDate>Tue, 24 Nov 2009 09:54:06 GMT</pubDate></item><item><title>ಚೀನಾದಲ್ಲಿ ಭೂಕಪಂಕ</title><guid isPermaLink="true">http://kannada.webdunia.com/newsworld/news/international/0911/24/1091124010_1.htm</guid><link>http://kannada.webdunia.com/newsworld/news/international/0911/24/1091124010_1.htm</link><description>ಬೀಜಿಂಗ್: ನೈರುತ್ಯ ಚೀನಾದಲ್ಲಿ ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆಯ ಭೂಕಂಪವುಂಟಾಗಿದೆಯೆಂದು ಸರ್ವೇಕ್ಷಣ ವಿಭಾಗ ತಿಳಿಸಿದೆ. ಕಳೆದ ವರ್ಷ ಇದೇ ಪ್ರದೇಶದಲ್ಲಿ ನಡೆದ ಭೂಕಂಪದಲ್ಲಿ 87 ಜನರು ಸಾವನ್ನಪ್ಪಿದ್ದರು. ಇದೀಗ ಉಂಟಾದ ಭೂಕಂಪದಲ್ಲಿ ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ.</description><pubDate>Tue, 24 Nov 2009 09:53:24 GMT</pubDate></item><item><title>ಕಬ್ಬಿನ ಬೆಲೆ: ಸರ್ವಪಕ್ಷಗಳ ಸಭೆಯಲ್ಲಿ ಒಮ್ಮತವಿಲ್ಲ</title><guid isPermaLink="true">http://kannada.webdunia.com/newsworld/news/national/0911/24/1091124009_1.htm</guid><link>http://kannada.webdunia.com/newsworld/news/national/0911/24/1091124009_1.htm</link><description>ನವದೆಹಲಿ: ಕಬ್ಬಿನ ಬೆಲೆಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ಹೊಸ ನೀತಿ ಕುರಿತಂತೆ ಸೋಮವಾರ ಕರೆಯಲಾಗಿದ್ದ ಸರ್ವಪಕ್ಷಗಳ ಸಭೆ ಯಾವುದೇ ಒಮ್ಮತದ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಗಿದೆ.</description><pubDate>Tue, 24 Nov 2009 09:46:58 GMT</pubDate></item><item><title>ಒರಿಸ್ಸಾದಲ್ಲಿ 3509 ರೈತರು ಆತ್ಮಹತ್ಯೆ</title><guid isPermaLink="true">http://kannada.webdunia.com/newsworld/news/national/0911/24/1091124008_1.htm</guid><link>http://kannada.webdunia.com/newsworld/news/national/0911/24/1091124008_1.htm</link><description>ಭುವನೇಶ್ವರ: ಒರಿಸ್ಸಾದಲ್ಲಿ ಕಳೆದ 11 ವರ್ಷಗಳಲ್ಲಿ 3509 ರೈತರು ಆತ್ಮಹತ್ಯೆ ಮಾಡಿದ್ದಾರೆ. ಪ್ರತಿ ತಿಂಗಳು ಸರಾಸರಿ 26 ಮಂದಿ ಸಾವಿಗೆ ಶರಣಾದಂತಾಗಿದೆ.</description><pubDate>Tue, 24 Nov 2009 09:46:23 GMT</pubDate></item><item><title>ಕೊನೆಗೂ ಸಂಸತ್‌ನಲ್ಲಿ ಲಿಬರ್ಹಾನ್ ವರದಿ ಮಂಡನೆ</title><guid isPermaLink="true">http://kannada.webdunia.com/newsworld/news/national/0911/24/1091124006_1.htm</guid><link>http://kannada.webdunia.com/newsworld/news/national/0911/24/1091124006_1.htm</link><description>ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕುರಿತ ನ್ಯಾಯಮ‌ೂರ್ತಿ ಮನಮೋಹನ್ ಸಿಂಗ್ ಲಿಬರಾನ್ ಆಯೋಗದ ವರದಿಯನ್ನು ಸಂಸತ್ತಿನಲ್ಲಿ ಮಂಗಳವಾರ ಮಂಡಿಸುವ ಸಂಭವವಿದೆಯೆಂದು ಮ‌ೂಲಗಳು ತಿಳಿಸಿವೆ</description><pubDate>Tue, 24 Nov 2009 09:28:35 GMT</pubDate></item><item><title>ಸಿಎಂ ಕಾರ್ಯದರ್ಶಿ ಹೆಸರಲ್ಲಿ ವಂಚನೆ: ಆರೋಪಿ ಸೆರೆ</title><guid isPermaLink="true">http://kannada.webdunia.com/newsworld/news/regional/0911/23/1091123086_1.htm</guid><link>http://kannada.webdunia.com/newsworld/news/regional/0911/23/1091123086_1.htm</link><description>ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ಕಂಪನಿಗಳಿಗೆ ಟೆಂಡರ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯೊಬ್ಬ ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿ.ಚಂದ್ರಶೇಖರ್ ಅಲಿಯಾಸ್ ವಿಜಯನ್ ಬಂಧಿತ ಆರೋಪಿ. ಈತನಿಂದ ಕೃತ್ಯಕ್ಕೆ ಬಳಸುತ್ತಿದ್ದ ಮರ್ಸಿಡೀಸ್ ಬೆಂಜ್ ಕಾರು ಹಾಗೂ ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.</description><pubDate>Mon, 23 Nov 2009 20:25:38 GMT</pubDate></item><item><title>ವಡ್ಡರಹಳ್ಳಿ ಗಣಿಗಾರಿಕೆ ರದ್ದು: ಹೈಕೋರ್ಟ್ ಆದೇಶ
</title><guid isPermaLink="true">http://kannada.webdunia.com/newsworld/news/regional/0911/23/1091123084_1.htm</guid><link>http://kannada.webdunia.com/newsworld/news/regional/0911/23/1091123084_1.htm</link><description>ಬೆಂಗಳೂರು: ಮಂಡ್ಯ ಜಿಲ್ಲೆಯ ವಡ್ಡರಹಳ್ಳಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ಗುತ್ತಿಗೆಯನ್ನು ರಾಜ್ಯ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ.ಜಿಲ್ಲೆಯ ಪಾಂಡವಪುರ ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ 23ಎಕರೆ ಜಮೀನಿನಲ್ಲಿ ಕಲ್ಲು ಗಣಿಗಾರಿಕೆಗೆ ಗುತ್ತಿಗೆ ನೀಡಲಾಗಿದ್ದನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಗುತ್ತಿಗೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.</description><pubDate>Mon, 23 Nov 2009 20:10:01 GMT</pubDate></item><item><title>ಗೆಟ್ ಲಾಸ್ಟ್: ಪತ್ರಕರ್ತರ ವಿರುದ್ಧ ಲಿಬರ್ಹಾನ್ ಕೆಂಡಾಮಂಡಲ</title><guid isPermaLink="true">http://kannada.webdunia.com/newsworld/news/national/0911/23/1091123080_1.htm</guid><link>http://kannada.webdunia.com/newsworld/news/national/0911/23/1091123080_1.htm</link><description>ನವದೆಹಲಿ: &apos;ಏನ್ ನಿಮ್ಮ ಮಾತಿನ ಅರ್ಥ, ನಾನು ಯಾವ ಪ್ರಶ್ನೆಗೂ ಉತ್ತರ ಕೊಡಲಾರೆ ಗೆಟ್ ಲಾಸ್ಟ್ ಫ್ರಮ್ ದಿ ಪ್ರಿಮೈಸಸ್&apos; ಹೀಗೆ ಮಾಧ್ಯಮದವರ ವಿರುದ್ಧ ಕಿಡಿಕಾರಿದವರು ರಾಷ್ಟ್ರದಾದ್ಯಂತ ವಿವಾದದ ಕಿಡಿ ಹೊತ್ತಿಸಿದ್ದ ಬಾಬರಿ ಮಸೀದಿ ಧ್ವಂಸ ಪ್ರಕರಣದ ಕುರಿತು ತನಿಖೆ ನಡೆಸಿದ್ದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಆಯೋಗದ ಮುಖ್ಯಸ್ಥ ಎಂ.ಎಸ್.ಲಿಬರ್ಹಾನ್.</description><pubDate>Mon, 23 Nov 2009 19:38:26 GMT</pubDate></item><item><title>ಗಣಿ ಗುಟ್ಟು ಅಧಿವೇಶನದಲ್ಲಿ ಬಹಿರಂಗಪಡಿಸುವೆ: ಸಿಎಂ</title><guid isPermaLink="true">http://kannada.webdunia.com/newsworld/news/regional/0911/23/1091123079_1.htm</guid><link>http://kannada.webdunia.com/newsworld/news/regional/0911/23/1091123079_1.htm</link><description>ಬೆಂಗಳೂರು: ಗಣಿ ಹಗರಣ ಹಾಗೂ ತಾನು ವಹಿಸಿರುವ ರಾಜಕೀಯ ಮೌನ ಸೇರಿದಂತೆ ಎಲ್ಲ ವಿಚಾರಗಳನ್ನು ಡಿ.14ರಿಂದ ಆರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಬಹಿರಂಗಪಡಿಸುವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಈಗಾಗಲೇ ಎಲ್ಲ ಹೇಳಿದರೆ, ವಿಧಾನಸಭಾ ಅಧಿವೇಶನದಲ್ಲಿ ಪ್ರತಿಪಕ್ಷದವರಿಗೆ ಹೇಳಲು ಏನೂ ಉಳಿಯಲಿಲ್ಲ. ಹೀಗಾಗಿ ಅಧಿವೇಶನದಲ್ಲಿ ಎಲ್ಲಾ ವಿಚಾರವನ್ನು ಬಹಿರಂಗಪಡಿಸುವೆ ಎಂದು ಹೇಳಿದರು.</description><pubDate>Mon, 23 Nov 2009 19:15:45 GMT</pubDate></item><item><title>ಟಾಯ್ಲೆಟ್‌ನ ಕಪಾಟಿನಲ್ಲಿ ಡಾರ್ವಿನ್ ಪುಸ್ತಕ ಪತ್ತೆ</title><guid isPermaLink="true">http://kannada.webdunia.com/newsworld/news/international/0911/23/1091123072_1.htm</guid><link>http://kannada.webdunia.com/newsworld/news/international/0911/23/1091123072_1.htm</link><description>ಲಂಡನ್:ಚಾರ್ಲ್ಸ್ ಡಾರ್ವಿನ್ ಅವರ 'ಜೀವಿಗಳ ಮ‌ೂಲ' ಎಂಬ ಅಪರೂಪದ ಪ್ರಥಮ ಸಂಚಿಕೆಯು ದಕ್ಷಿಣ ಇಂಗ್ಲೆಂಡ್‌ನ ಕುಟುಂಬವೊಂದರ ಅತಿಥಿ ಶೌಚಾಲಯದಲ್ಲಿ ಸಿಕ್ಕಿದ್ದು, ಅದನ್ನು ಹರಾಜು ಹಾಕುವುದಾಗಿ ಹರಾಜು ಸಂಸ್ಥೆಯೊಂದು ತಿಳಿಸಿದೆ. 1859ರಲ್ಲಿ ಮೊಟ್ಟಮೊದಲು ಮುದ್ರಣವಾದ 1250 ಪ್ರತಿಗಳಲ್ಲಿ ಒಂದಾದ ಪುಸ್ತಕವು ಆಕ್ಸ್‌ಫರ್ಡ್ ಮನೆಯೊಂದರ ಟಾಯ್ಲೆಟ್‌ನಲ್ಲಿನ ಪುಸ್ತಕದ ಕಪಾಟಿನಲ್ಲಿ ಸಿಕ್ಕಿರುವುದಾಗಿ ಕ್ರಿಸ್ಟೀ ಹರಾಜು ಮನೆ ತಿಳಿಸಿದೆ.
</description><pubDate>Mon, 23 Nov 2009 18:06:52 GMT</pubDate></item></channel></rss>