<?xml version="1.0" encoding="UTF-8"?><?xml-stylesheet href="yrss.xsl" type="text/xsl" media="screen" ?><rss version="2.0"><channel><title>Yahoo! Kannada</title><link>http://in.kannada.yahoo.com</link><description>Yahoo! Kannada</description><language>kn-in</language><copyright>Copyright (c) 2009 Yahoo! Inc. All rights reserved.</copyright><lastBuildDate>Sat, 07 Nov 2009 15:48:27 GMT</lastBuildDate><item><title>ಜನಪ್ರತಿನಿಧಿಗಳಿಗೆ &apos;ಪಿಂಡ ಪ್ರದಾನ&apos;: ಹೀಗೊಂದು ಪ್ರತಿಭಟನೆ!</title><guid isPermaLink="true">http://kannada.webdunia.com/newsworld/news/regional/0911/07/1091107078_1.htm</guid><link>http://kannada.webdunia.com/newsworld/news/regional/0911/07/1091107078_1.htm</link><description>ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟಿನ ಪ್ರಹಸನಕ್ಕೆ ಜನರು ರೋಸಿ ಹೋಗಿ ವಿವಿಧ ರೀತಿಯ ಪ್ರತಿಭಟನೆಯ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಆ ನಿಟ್ಟಿನಲ್ಲಿ ಶನಿವಾರ ಜೆಡಿಎಸ್ ಯುವ ಘಟಕ ಕ್ಷೇತ್ರದಿಂದ ನಾಪತ್ತೆಯಾಗಿ ಮೋಜಿನಲ್ಲಿ ಕಾಲ ಕಳೆಯುತ್ತಿರುವ ಜನಪ್ರತಿನಿಧಿಗಳಿಗೆ ಪಿಂಡ ಪ್ರಧಾನ ಮಾಡಿದ ವಿನೂತನ ಪ್ರತಿಭಟನೆ ನಡೆಯಿತು.</description><pubDate>Sat, 07 Nov 2009 20:05:44 GMT</pubDate></item><item><title>ಮನನೊಂದು ಗಳಗಳನೆ ಅತ್ತ ಯಡಿಯೂರಪ್ಪ...</title><guid isPermaLink="true">http://kannada.webdunia.com/newsworld/news/regional/0911/07/1091107047_1.htm</guid><link>http://kannada.webdunia.com/newsworld/news/regional/0911/07/1091107047_1.htm</link><description>ನವದೆಹಲಿ: ಪಕ್ಷದೊಳಗೆ ತಲೆದೋರಿದ ಬಿಕ್ಕಟ್ಟಿನಿಂದಾಗಿ ನೆರೆ ಸಂತ್ರಸ್ತರ ಬಗ್ಗೆ ಗಮನಕೊಡಲು ಸಾಧ್ಯವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ದೆಹಲಿಯಲ್ಲಿ ಖಾಸಗಿ ಟಿವಿ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ ವೇಳೆ ಗಳಗಳನೆ ಅತ್ತ ಘಟನೆ ನಡೆಯಿತು.

'ಆ ಕಾರಣಕ್ಕಾಗಿ ನಾನು ನೆರೆ ಸಂತ್ರಸ್ತರ ಕ್ಷಮೆ ಕೋರುವುದಾಗಿ ಹೇಳಿದ ಮುಖ್ಯಮಂತ್ರಿಗಳು, ಈಗಾಗಲೇ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದೇನೆ. ಆದರೆ ಇನ್ನು ಈ ಬಿಕ್ಕಟ್ಟಿಗಾಗಿ ನಾವು ಇನ್ನೂ ಹೆಚ್ಚಿನ ಸಮಯವನ್ನು ಹಾಳು ಮಾಡಲಾರೆ' ಎಂದು ಕಳಕಳಿ ವ್ಯಕ್ತಪಡಿಸಿದರು.</description><pubDate>Sat, 07 Nov 2009 16:49:57 GMT</pubDate></item><item><title>ನಿರ್ಧಾರ ಅಚಲ-ರೆಡ್ಡಿ: ಬಿಕ್ಕಟ್ಟು ಅಂತ್ಯ-ಸಿಎಂ!</title><guid isPermaLink="true">http://kannada.webdunia.com/newsworld/news/regional/0911/07/1091107041_1.htm</guid><link>http://kannada.webdunia.com/newsworld/news/regional/0911/07/1091107041_1.htm</link><description>ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರ ನಡುವಿನ ಜಂಗಿಕುಸ್ತಿ ಮುಂದುವರಿದಿದ್ದರೆ. ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಚಿವ ಜನಾರ್ದನ ರೆಡ್ಡಿ ಪಟ್ಟು ಹಿಡಿದ್ದಾರೆ. ಮತ್ತೊಂದೆಡೆ ಎಲ್ಲ ಬಿಕ್ಕಟ್ಟು ಬಗೆಹರಿದಿರುವುದಾಗಿ ಯಡಿಯೂರಪ್ಪ ಹೇಳಿಕೆ ನೀಡುವ ಮೂಲಕ ರಾಜ್ಯರಾಜಕಾರಣ ತ್ರಿಶಂಕು ಸ್ಥಿತಿಗೆ ತಲುಪಿದೆ.

ಸಹೋದರ ಕರುಣಾಕರ ರೆಡ್ಡಿ ನಿವಾಸದಲ್ಲಿ ಶನಿವಾರ ಜನಾರ್ದನ ರೆಡ್ಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾಗಬೇಕು ಎಂಬ ನಮ್ಮ ನಿರ್ಧಾರ ಅಚಲವಾಗಿದೆ ಎಂದು ಪುನರುಚ್ಚರಿಸಿದರು.</description><pubDate>Sat, 07 Nov 2009 15:27:46 GMT</pubDate></item><item><title>ಶೋಭಕ್ಕ ರಾಜೀನಾಮೆ ನೀಡಿದ್ರೆ ಸಾಯ್ತೇವೆ: ಎಚ್ಚರಿಕೆ</title><guid isPermaLink="true">http://kannada.webdunia.com/newsworld/news/regional/0911/07/1091107028_1.htm</guid><link>http://kannada.webdunia.com/newsworld/news/regional/0911/07/1091107028_1.htm</link><description>ಬೆಂಗಳೂರು: ಬಿಜೆಪಿಯಲ್ಲಿ ಉದ್ಭವಿಸಿರುವ ಭಿನ್ನಮತದ ಜಟಾಪಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ರಾಜೀನಾಮೆ ಪ್ರತಿಭಟನೆ ನಡೆಸಿ, ರಾಜೀನಾಮೆ ನೀಡಿದ್ರೆ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದಾರೆ.</description><pubDate>Sat, 07 Nov 2009 12:50:43 GMT</pubDate></item><item><title>ವಂದೇ ಮಾತರಂ ಹಾಡದಿದ್ರೆ ದೇಶ ಬಿಟ್ಟು ಹೋಗಿ: ಹಂಪನಾ</title><guid isPermaLink="true">http://kannada.webdunia.com/newsworld/news/regional/0911/07/1091107018_1.htm</guid><link>http://kannada.webdunia.com/newsworld/news/regional/0911/07/1091107018_1.htm</link><description>ಮೂಡುಬಿದಿರೆ: 'ವಂದೇ ಮಾತರಂ ಹಾಡುವುದು ಸಾಧ್ಯವಿಲ್ಲ ಎಂದಾದರೆ ಅರಬ್ಬೀ ಸಮುದ್ರ ಇದೆ, ಬಂಗಾಳ ಕೊಲ್ಲಿ ಇದೆ, ಹಿಂದೂಮಹಾಸಾಗರ ಇದೆ, ಹೋಗಿ ಬೀಳಬಹುದು...ಅದೂ ಆಗದಿದ್ದರೆ ವಿಮಾನಗಳಿವೆ ದೇಶ ಬಿಟ್ಟೂ ಹೋಗಬಹುದು' ಇದು ಶುಕ್ರವಾರ ಇಲ್ಲಿನ ವಿದ್ಯಾಗಿರಿಯ ರತ್ನಾಕರ ವರ್ಣಿ ವೇದಿಕೆಯಲ್ಲಿ ಆರಂಭಗೊಂಡ ಆಳ್ವಾಸ್ ನುಡಿಸಿರಿ-2009 ಕನ್ನಡ ನಾಡು ನುಡಿಯ ಆರನೇ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷರ ಕಿಡಿನುಡಿ.

ಇತ್ತೀಚೆಗಷ್ಟೇ ರಾಷ್ಟ್ರಗೀತೆ ವಂದೇ ಮಾತರಂ ಹಾಡಬಾರದು ಎಂದು ಇಸ್ಲಾಂ ಪಂಡಿತರು ಹೊರಡಿಸಿದ ಫತ್ವಾಕ್ಕೆ ಪ್ರತಿಕ್ರಿಯಿಸಿ ಡಾ.ಹಂಪ ನಾಗರಾಜಯ್ಯಮಾತನಾಡಿದರು.</description><pubDate>Sat, 07 Nov 2009 11:42:39 GMT</pubDate></item><item><title>ರಾಮ್‌ದೇವ್ ಯೋಗ ಬೇಡ: ಮುಸ್ಲಿಮರಿಗೆ ದಾರೂಲ್</title><guid isPermaLink="true">http://kannada.webdunia.com/newsworld/news/national/0911/07/1091107075_1.htm</guid><link>http://kannada.webdunia.com/newsworld/news/national/0911/07/1091107075_1.htm</link><description>ಮುಜಾಫರ್‌ನಗರ: ಯೋಗ ಗುರು ಬಾಬಾ ರಾಮದೇವ್ ಅವರ ಯೋಗ ಶಿಬಿರವು ವಂದೇ ಮಾತರಂನಿಂದ ಆರಂಭಗೊಳ್ಳುವ ಕಾರಣ ಮುಸ್ಲಿಮರು ಈ ಶಿಬಿರದಲ್ಲಿ ಭಾಗವಹಿಸಬಾರದು ಎಂಬುದಾಗಿ ಇಸ್ಲಾಮಿಕ್ ಸಂಸ್ಥೆಯಾಗಿರುವ ದಾರೂಲ್ ಉಲೂಮ್ ನಿರ್ದೇಶನ ನೀಡಿದೆ. ದಿಯೋಬಂದ್‌ನಲ್ಲಿ ನಡೆದ ಇಸ್ಲಾಮಿಕ್ ಸಮಾವೇಶದಲ್ಲಿ ರಾಮದೇವ್ ಅವರು ಪ್ರಾಣಾಯಾಮ ಪ್ರದರ್ಶಿಸಿ, ಹಿಂದೂ ಪುರೋಹಿತ ವೇದಮಂತ್ರವನ್ನು ಘೋಷಿಸಿರುವ ನಾಲ್ಕುದಿನಗಳ ಬಳಿಕ ಈ ನಿರ್ದೇಶನ ಹೊರಬಿದ್ದಿದೆ.</description><pubDate>Sat, 07 Nov 2009 19:45:00 GMT</pubDate></item><item><title>ಚಕ್ರವರ್ತಿಯಿಂದಲೂ ಬೇರ್ಪಟ್ಟಳೇ ಶ್ರುತಿ?</title><guid isPermaLink="true">http://kannada.webdunia.com/entertainment/regionalcinema/newsgossips/0911/07/1091107079_1.htm</guid><link>http://kannada.webdunia.com/entertainment/regionalcinema/newsgossips/0911/07/1091107079_1.htm</link><description>ನಿರ್ದೇಶಕ ಎಸ್.ಮಹೇಂದರ್‌ಗೆ ಕೈಕೊಟ್ಟು ಎರಡೇ ದಿನಗಳಲ್ಲಿ ಚಂದ್ರಚೂಡ್ ಅಲಿಯಾಸ್ ಚಕ್ರವರ್ತಿಯ ಜೊತೆಗೆ ಮದುವೆಯಾಗುತ್ತಿದ್ದೇನೆ ಎಂದು ಭಾರೀ ಸುದ್ದಿಯಾಗಿದ್ದ ಚಿತ್ರನಟಿ ಶ್ರುತಿ ಬಾಳು ಮತ್ತೆ ಅತಂತ್ರವಾಗಿದೆಯೇ? ಈ ಪ್ರಶ್ನೆಗೆ ಕೆಲವು ಮೂಲಗಳ ಪ್ರಕಾರ ಹೌದು ಎಂಬ ಉತ್ತರವೇ ಸಿಗುತ್ತದೆ. ಶ್ರುತಿ ಅವರ ಎರಡನೇ ಪತಿಯಾಗಬೇಕಿದ್ದ ಚಂದ್ರಚೂಡ ಅವರೂ ಈಗ ಶ್ರುತಿ ಬಾಳಿನಿಂದ ಬೇರ್ಪಟ್ಟಿದ್ದಾರೆ, ಹಾಗೂ ಸ್ವತಃ ಶ್ರುತಿ ಅವರೇ ತಮ್ಮ ಮನೆಯಿಂದ ಚಂದ್ರಚೂಡರನ್ನು ಹೊರಹಾಕಿದ್ದಾರೆ ಎಂಬ ಅಂತೆಕಂತೆಗಳೀಗ ಗಾಂಧಿನಗರಿಯಲ್ಲಿ ಗಿರಕಿ ಹೊಡೆಯುತ್ತಿವೆ.</description><pubDate>Sat, 07 Nov 2009 20:08:56 GMT</pubDate></item><item><title>ಹುಡುಗೀರ್ ವಿಚಾರದಲ್ಲಿ ಕೇರ್‌ಫುಲ್: ಯೋಗಿಗೆ ಅಪ್ಪನ ಉಪದೇಶ!</title><guid isPermaLink="true">http://kannada.webdunia.com/entertainment/regionalcinema/newsgossips/0911/07/1091107036_1.htm</guid><link>http://kannada.webdunia.com/entertainment/regionalcinema/newsgossips/0911/07/1091107036_1.htm</link><description>ನೋಡು ಮಗನೆ ನಿಂಗೆ ಪದೇ ಪದೆ ಹೇಳಲ್ಲ. ಹುಡುಗೀರ ವಿಚಾರದಲ್ಲಿ ಜಾಗ್ರತೆ ವಹಿಸು. ಮುಂದೆ ಎಂಥಾ ಸಂದರ್ಭ ಬಂದ್ರೂ ಆಶ್ಚರ್ಯವಿಲ್ಲ. ಬೀ ಕೇರ್ ಫುಲ್! ಹೀಗಂತ ನಿರ್ಮಾಪಕ ಸಿದ್ಧರಾಜು, ತನ್ನ ಮಗ ಲೂಸ್ ಮಾದ ಖ್ಯಾತಿಯ ಯೋಗೀಶ್‌ಗೆ ಹಿಂದೊಮ್ಮೆ ಎಚ್ಚರಿಕೆ ಕೊಟ್ಟಿದ್ದರಾ? ಹೌದು ಎನ್ನುತ್ತದೆ ಅವರ ಹತ್ತಿರದ ಬಳಗ.

ಯಾವಾಗ ಲೂಸ್ ಮಾದ ಎಂಬ ಪುಟ್ಟ ಪಾತ್ರ ದುನಿಯಾದಲ್ಲಿ ಬಾರೀ ಪ್ರಸಿದ್ಧಿ ಪಡೆಯಿತೋ, ಅಂದಿನಿಂದಲೇ ಲೂಸ್ ಮಾದ ಎಂಬ ಈ ಯೋಗೀಶ ಎಂಬ ಈಗಷ್ಟೆ ಮೀಸೆ ಮೂಡಿದ ಹದಿಹರೆಯದ ಹುಡುಗನ ದುನಿಯಾವೇ ಬದಲಾಯಿತು. ಅದಕ್ಕೆ ತಕ್ಕಂತೆ ಖದರ್ರೂ ಬದಲಾಯಿತು. ಅವಕಾಶಗಳು ರಾಶಿ ರಾಶಿ ಸುರಿದವು. ಅವಕಾಶ, ಪ್ರಸಿದ್ಧಿ, ಹಣ ಇವೆಲ್ಲವೂ ಹದಿ ವಯಸ್ಸಿನಲ್ಲೇ ಸಿಕ್ಕಾಗ ಸ್ವರ್ಗಕ್ಕೆ ಮೂರು ಗೇಣೇನು ಬಂತು, ಸ್ವರ್ಗದಲ್ಲೇ ಇದ್ದಂಥ ಅನುಭವ ಯಾರಿಗಾದರೂ ಆದೀತು. ಇವಿಷ್ಟೆಲ್ಲಾ ಆದಾಗ, ಲೂಸ್ ಮಾದನೆಂಬ ಯೋಗೀಶ ಪ್ರಸಿದ್ಧಿಯ ಜೊತೆಗೆ ಹುಡುಗಿಯರ ಪ್ರಪಂಚದ ಸಾಕಷ್ಟು ಗಾಸಿಪ್ಪುಗಳೂ ಸುತ್ತತೊಡಗಿತು.</description><pubDate>Sat, 07 Nov 2009 14:05:57 GMT</pubDate></item><item><title>ಏಷ್ಯಾ ಹಾಕಿ ಕಪ್: ಭಾರತ-ಚೀನಾ ಹಣಾಹಣಿ</title><guid isPermaLink="true">http://kannada.webdunia.com/sports/othersports/sportsnews/0911/07/1091107076_1.htm</guid><link>http://kannada.webdunia.com/sports/othersports/sportsnews/0911/07/1091107076_1.htm</link><description>ಬ್ಯಾಂಕಾಕ್: ಭಾರತದ ಮಹಿಳೆಯರ ಹಾಕಿ ತಂಡ ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಸೆಮಿಫೈನಲ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ಭಾರತ ತಂಡ 3-2ಗೋಲುಗಳಿಂದ ದಕ್ಷಿಣ ಕೊರಿಯಾವನ್ನ ಮಣಿಸುವ ಮೂಲಕ ಏಷ್ಯಾ ಕಪ್ ಹಾಕಿ ಟೂರ್ನಿಯ ಫೈನಲ್ ತಲುಪಿದರು.

ಈ ಭರ್ಜರಿ ಗೆಲುವಿನೊಂದಾಗಿ ಭಾರತ ತಂಡ 2010ರಲ್ಲಿ ಅರ್ಜೈಂಟಿನಾದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಆಡಲು ಅರ್ಹತೆ ಪಡೆದುಕೊಂಡಂತಾಗಿದೆ.</description><pubDate>Sat, 07 Nov 2009 19:51:31 GMT</pubDate></item><item><title>ಸ್ವಿಸ್ ಟೂರ್ನಿ: ಜೋಕೊವಿಕ್‌ಗೆ ಗೆಲುವು</title><guid isPermaLink="true">http://kannada.webdunia.com/sports/othersports/sportsnews/0911/07/1091107070_1.htm</guid><link>http://kannada.webdunia.com/sports/othersports/sportsnews/0911/07/1091107070_1.htm</link><description>ಬಾಸೆಲ್: ಸ್ವಿಸ್ ಇಂಡೋರ್ ಟೆನಿಸ್ ಟೂರ್ನ್‌ಮೆಂಟ್‌ನ ಪ್ರಥಮ ಸುತ್ತಿನ ಪಂದ್ಯಾಟದಲ್ಲಿ ನೋವಾಕ್ ಜೋಕೊವಿಕ್ ಎದುರಾಳಿ ಜರ್ಮನಿಯ ಆಂಡ್ರೆಸ್ ಬೆಕ್ ಅವರನ್ನು 6-3, 7-5ಮ್ಯಾಚ್ ಪಾಯಿಂಟ್‌ಗಳ ಅಂತರದಿಂದ ಪರಾಭವಗೊಳಿಸಿದರು.

3ನೇ ಶ್ರೇಯಾಂಕದ ಸೆರ್ಬ್ ಆಟಗಾರ ಜೋಕೊವಿಕ್ ಪ್ರಥಮ ಸುತ್ತಿನ ಹಣಾಹಣಿಯಲ್ಲಿಯೇ ಪಾಯಿಂಟ್‌ಗಳನ್ನು ತನ್ನ ಬಗಲಿಗೆ ಹಾಕಿಕೊಳ್ಳುವ ಮೂಲಕ ಗೆಲುನಿತ್ತ ಧಾವಿಸುವ ಮೂಲಕ ಬೆಕ್‌ನ್ನು ಸೋಲಿಸಿ, ಜಯ ಸಾಧಿಸಿದರು.</description><pubDate>Sat, 07 Nov 2009 19:29:40 GMT</pubDate></item><item><title>ಯಾವ ಪುರುಷಾರ್ಥಕ್ಕೆ ಇವರನ್ನು ಆರಿಸಬೇಕಿತ್ತು?: ಲೋಕಾಯುಕ್ತ</title><guid isPermaLink="true">http://kannada.webdunia.com/newsworld/news/regional/0911/07/1091107052_1.htm</guid><link>http://kannada.webdunia.com/newsworld/news/regional/0911/07/1091107052_1.htm</link><description>ಬೆಂಗಳೂರು: ರಾಜ್ಯದಲ್ಲಿನ ಬಿಜೆಪಿ ರಾಜಕೀಯ ಬೆಳವಣಿಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು, ಯಾವ ಪುರುಷಾರ್ಥಕ್ಕಾಗಿ ಈ ಚುನಾಯಿತ ಪ್ರತಿನಿಧಿಗಳು, ಮಂತ್ರಿಮಂಡಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಹತ್ತಾರು ದಿನಗಳ ಬಿಜೆಪಿ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಮಂತ್ರಿಮಂಡಲದ ಅವಶ್ಯಕತೆ ಇಲ್ಲ ಎಂಬುದು ಸಾಬೀತಾದಂತಾಗಿದೆ ಎಂದು ಹೇಳಿದರು.</description><pubDate>Sat, 07 Nov 2009 17:19:59 GMT</pubDate></item><item><title>ಶೆಟ್ಟರ್ ರಾಜೀನಾಮೆ ಕೊಟ್ಟು ರಾಜಕಾರಣ ಮಾಡ್ಲಿ:ಭೈರೇಗೌಡ</title><guid isPermaLink="true">http://kannada.webdunia.com/newsworld/news/regional/0911/07/1091107050_1.htm</guid><link>http://kannada.webdunia.com/newsworld/news/regional/0911/07/1091107050_1.htm</link><description>ಬೆಂಗಳೂರು: ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಅವರು ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ನಂತರ ರಾಜಕೀಯ ಅಖಾಡಕ್ಕೆ ಇಳಿಯಲಿ ಎಂದು ಶಾಸಕ ಹಾಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಭೈರೇಗೌಡ ಸಲಹೆ ನೀಡಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಹುದ್ದೆಯಲ್ಲಿದ್ದುಕೊಂಡು ರಾಜಕೀಯ ಮಾಡುವುದು, ಆ ಸ್ಥಾನದ ಘನತೆಗೆ ಕುಂದು ತರುವಂತಹದಾಗಿದ್ದು, ಶೆಟ್ಟರ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.</description><pubDate>Sat, 07 Nov 2009 17:03:49 GMT</pubDate></item><item><title>ಸುಖ ದಾಂಪತ್ಯಕ್ಕೆ ಆರು ವಾಸ್ತು ಸೂತ್ರಗಳು</title><guid isPermaLink="true">http://kannada.webdunia.com/astrology/vaastu/article/0910/30/1091030122_1.htm</guid><link>http://kannada.webdunia.com/astrology/vaastu/article/0910/30/1091030122_1.htm</link><description>ಯಶಸ್ವಿ ಮತ್ತು ಸಂತೋಷದ ದಾಂಪತ್ಯವು ಪ್ರತಿಯೊಬ್ಬ ನವದಂಪತಿಯ ಕನಸಾಗಿದೆ. ಸಂತಸದ ಮತ್ತು ಯಶಸ್ವಿ ವಿವಾಹವೂ ಕೆಲವು ಲಕ್ಷಣಗಳನ್ನು ಹೊಂದಿದೆ. ಈ ಕುರಿತ ಕೆಲವು ಅಂಶಗಳನ್ನು ಚರ್ಚಿಸೋಣ.
</description><pubDate>Fri, 30 Oct 2009 20:36:37 GMT</pubDate></item><item><title>ನಿಮಗ್ಯಾವ ರೋಗ ಬರಬಹುದು ಗೊತ್ತೇ?</title><guid isPermaLink="true">http://kannada.webdunia.com/astrology/astro/articles/0910/24/1091024069_1.htm</guid><link>http://kannada.webdunia.com/astrology/astro/articles/0910/24/1091024069_1.htm</link><description>'ಎಷ್ಟು ಹಣ ಇದ್ದರೇನು ಪ್ರಯೋಜನ...ಆ ಹಣವನ್ನು ಅನುಭವಿಸಲು ಮನುಷ್ಯನ ಆರೋಗ್ಯವೇ ಸರಿಯಿಲಿಲ್ಲವಾದರೆ ಏನು ಉಪಯೋಗ..?' ಎಂದು ಬಲ್ಲವರು ಹೇಳುತ್ತಾರೆ. ಹೌದು. ಎಲ್ಲಕ್ಕೂ ಆರೋಗ್ಯವೇ ಮೂಲ. ಬಡವರಾಗಲಿ, ಸಿರಿವಂತರಾಗಲೀ, ರೋಗ ಎಂಬುದು ಯಾರ ಮೇಲೂ ಯಾವ ಬೇಧವನ್ನೂ ಮಾಡಿಲ್ಲ. ಆರೋಗ್ಯ ಕಾಪಾಡಿಕೊಳ್ಳದಿದ್ದರೆ ಎಂಥವನನ್ನೂ ರೋಗ ದಾಳಿ ಮಾಡುತ್ತದೆ ಎಂಬುದು ಸಾರ್ವಕಾಲಿಕ ಸತ್ಯ.

ಹಾಗಿದ್ದೂ, ಸಂಖ್ಯಾಶಾಸ್ತ್ರಗಳ ಪ್ರಕಾರ ಪಂಡಿತರು ಮೂಲಾಂಕಗಳ ಪ್ರಕಾರ ಯಾರ‌್ಯಾರಿಗೆ ಯಾವ ಯಾವ ರೋಗಗಳು ಬರುವ ಸಾಧ್ಯತೆ ಹೆಚ್ಚು ಎಂದು ಲೆಕ್ಕಾಚಾರ ಹಾಕಿದ್ದಾರೆ. ದೇಹಾರೋಗ್ಯ ಕಪಾಡಿಕೊಳ್ಳದಿದ್ದರೆ, ಯಾರ‌್ಯಾರು ಎಂತೆಂಥ ರೋಗಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂಬ ವಿವರ ಇಲ್ಲಿದೆ. ಈ ಲೇಖನದಲ್ಲಿ ಮೂಲಾಂಕಗಳಿಗೆ ಅನುಗುಣವಾಗಿ ರೋಗಸಾಧ್ಯತೆಯನ್ನು ವಿವರಿಸಲಾಗಿದೆ. ಆ ಮೂಲಕ ಪ್ರತಿಯೊಬ್ಬರೂ ಅವರವರ ಮೂಲಾಂಕ ಪತ್ತೆಹಚ್ಚಿ ತಮ್ಮ ರೋಗ ಪತ್ತೆ ಹಚ್ಚಬಹುದು.</description><pubDate>Sat, 24 Oct 2009 18:34:02 GMT</pubDate></item><item><title>ಎಲ್ಲಾ ರೈಲ್ವೇ ನೇಮಕಾತಿ ಮಂಡಳಿ ಮುಖ್ಯಸ್ಥರ ವಜಾ</title><guid isPermaLink="true">http://kannada.webdunia.com/newsworld/business/businessnews/0911/07/1091107068_1.htm</guid><link>http://kannada.webdunia.com/newsworld/business/businessnews/0911/07/1091107068_1.htm</link><description>ನವದೆಹಲಿ: ಮಾಜಿ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಆಡಳಿತಕ್ಕೆ ಮತ್ತೊಂದು ಗುದ್ದು ನೀಡಿರುವ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಅವರು ಎಲ್ಲಾ ರೈಲ್ವೇ ನೇಮಕಾತಿ ಮಂಡಳಿ(ಆರ್ಆರ್‌ಬಿ)ಯ ಅಧ್ಯಕ್ಷರನ್ನು ತೆಗೆದು ಹಾಕಿದ್ದು ಹೊಸ ಅಧ್ಯಕ್ಷರನ್ನು ನೇಮಿಸಿದ್ದಾರೆ.</description><pubDate>Sat, 07 Nov 2009 19:17:40 GMT</pubDate></item><item><title>ಭಾರತಕ್ಕೆ ಚೀನ ಕಾರು ತರಲು ಜಿಎಂ ಮಾತುಕತೆ</title><guid isPermaLink="true">http://kannada.webdunia.com/newsworld/business/businessnews/0911/07/1091107067_1.htm</guid><link>http://kannada.webdunia.com/newsworld/business/businessnews/0911/07/1091107067_1.htm</link><description>ನವದೆಹಲಿ: ಅಮೆರಿಕದ ಅಟೊಮೋಬೈಲ್ ದಿಗ್ಗಜ ಸಂಸ್ಥೆಯಾಗಿರುವ ಜನರಲ್ ಮೋಟಾರ್ಸ್(ಜಿಎಂ), ಚೀನಾ ನಿರ್ಮಿತ ಕಾರನ್ನು ಭಾರತಕ್ಕೆ ತರುವ ಪ್ರಸ್ತಾಪವನ್ನು ಹೊಂದಿದೆ ಎಂಬುದಾಗಿ ಶನಿವಾರದ ವರದಿಯೊಂದು ಹೇಳಿದೆ.</description><pubDate>Sat, 07 Nov 2009 19:13:28 GMT</pubDate></item><item><title>ಸೂಚ್ಯಂಕ, ನಿಫ್ಟಿ ಶೇ.2 ಏರಿಕೆ</title><guid isPermaLink="true">http://kannada.webdunia.com/newsworld/business/sensex/0911/07/1091107065_1.htm</guid><link>http://kannada.webdunia.com/newsworld/business/sensex/0911/07/1091107065_1.htm</link><description>ಮುಂಬೈ: ವರ್ಷಾಂತ್ಯದಲ್ಲಿ ವಿದೇಶಿ ಹೂಡಿಕೆದಾರರು ಹಿಂತೆಗೆದುಕೊಳ್ಳುವ ಸಾಧ್ಯತೆ ಮಧ್ಯೆ, ಜಾಗತಿಕ ಮಾರುಕಟ್ಟೆಗಳು ಚಟುವಟಿಕೆಯ ಮೇಲೆ ಪ್ರಭಾವ ಬೀರುವ ನಿರೀಕ್ಷೆಯಿಂದ ಮುಂಬೈ ಷೇರುಪೇಟೆಯಲ್ಲಿ ವಾರಾಂತ್ಯದಲ್ಲಿ ಮುಖ್ಯಷೇರುಗಳ ಸೂಚ್ಯಂಕ ಮತ್ತು ನಿಫ್ಟಿ ಶೇ.2.0 ಏರಿಕೆಯಾಗಿದೆ. 
</description><pubDate>Sat, 07 Nov 2009 19:02:46 GMT</pubDate></item><item><title>ಪ್ರಚಾರಕ್ಕೂ ನಿಜಕ್ಕೂ ತಾಳೆಯಾಗದ &apos;ಯೋಗಿ&apos;</title><guid isPermaLink="true">http://kannada.webdunia.com/entertainment/regionalcinema/review/0910/31/1091031038_1.htm</guid><link>http://kannada.webdunia.com/entertainment/regionalcinema/review/0910/31/1091031038_1.htm</link><description>ಕೆಲವೊಮ್ಮೆ ಹೀಗಾಗುತ್ತೆ. ಉತ್ಪನ್ನವೊಂದರ ಪ್ಯಾಕಿಂಗ್, ಅದರ ರ‌್ಯಾಪರ್, ರ‌್ಯಾಪರ್‌ನ ಬಣ್ಣ, ಅದರಲ್ಲಿ ಮಿಳಿತವಾಗಿರುವ ವಿನ್ಯಾಸಗಳು, ವಿಶಿಷ್ಟ ವಿನ್ಯಾಸದ ಅಕ್ಷರಗಳು ಇವನ್ನೆಲ್ಲಾ ನೋಡಿ ಮರುಳಾಗಿ ಅದನ್ನು ಖರೀದಿಸಿಬಿಡುತ್ತೇವೆ. ಅದನ್ನು ಬಳಸಿದಾಗಲೇ ಗೊತ್ತಾಗೋದು ಅದರ  ಗುಣಮಟ್ಟ ಎಂಥಾದ್ದು ಅಂತ!!.</description><pubDate>Sat, 31 Oct 2009 13:56:04 GMT</pubDate></item></channel></rss>