<?xml version="1.0" encoding="UTF-8"?><?xml-stylesheet href="yrss.xsl" type="text/xsl" media="screen" ?><rss version="2.0"><channel><title>Yahoo! Kannada: Astrology</title><link>http://kannada.webdunia.com/astrology/</link><description>Yahoo! Kannada</description><language>kn-in</language><copyright>Copyright (c) 2009 Yahoo! Inc. All rights reserved.</copyright><lastBuildDate>Tue, 24 Nov 2009 08:51:49 GMT</lastBuildDate><item><title>2012ರ ಡಿಸೆಂಬರ್ 21ರಂದು ಭೂಮಿ ನಾಶವಾಗುತ್ತಾ?</title><guid isPermaLink="true">http://kannada.webdunia.com/astrology/astro/articles/0911/21/1091121094_1.htm</guid><link>http://kannada.webdunia.com/astrology/astro/articles/0911/21/1091121094_1.htm</link><description>'2012ನೇ ಇಸವಿಗೆ ಪ್ರಳಯವಾಗುತ್ತಾ? ಭೂಮಿಯೇ ನಾಶವಾಗುತ್ತಾ?' ಇಂತಹ ಪ್ರಶ್ನೆಯೀಗ ಅತ್ಯಂತ ಚರ್ಚಿತ ವಿಷಯ. ಎಲ್ಲಿ ಹೋದರೂ, ಜನರಲ್ಲೊಂದು ಇಂತಹ ಆತಂಕ ಮನೆ ಮಾಡಿದೆ. ಹಾಗಾದರೆ ನಿಜವಾಗಿಯೂ ಪ್ರಳಯ ಸಂಭವಿಸುತ್ತಾ? ಭೂಮಿ ಎಂಬ ಗ್ರಹವೇ ನಾಶವಾಗಿ ಹೋಗುತ್ತಾ ಅಂತ ಜ್ಯೋತಿಷಿಗಳ, ವಿಜ್ಞಾನಿಗಳ ಮಾತಲ್ಲೇ ಕೇಳೋಣ.

2012ರ ಡಿಸೆಂಬರ್ 21ರಂದು ಭೂಮಿಯ ಕಥೆ ಮುಗಿದಂತೆ ಎಂಬುದು ಜ್ಯೋತಿಷಿಗಳ ಭವಿಷ್ಯವಾಣಿಯೇ ಆಗಿದ್ದರೂ, ಹಲವು ಜ್ಯೋತಿಷಿಗಳು, ಸಂಖ್ಯಾಶಾಸ್ತ್ರಜ್ಞರು, ವಿಜ್ಞಾನಿಗಳು ಇಂಥದ್ದೊಂದು ಪ್ರಕ್ರಿಯೆ ನಡೆಯುವುದೇ ಇಲ್ಲ ಎಂದಿದ್ದಾರೆ. ಹಲವರು, ಇದೊಂದು ಭಯ ಕಲ್ಪಿಸಲು ಉಂಟುಮಾಡಿದ ಸನ್ನಿವೇಶ ಎಂದೂ ವಿವರಿಸಿದ್ದಾರೆ.</description><pubDate>Sat, 21 Nov 2009 20:36:03 GMT</pubDate></item><item><title>ಕಾಳಸರ್ಪ ಯೋಗದ ಭಯವೇ? ಇಲ್ಲಿದೆ ಪರಿಹಾರ!</title><guid isPermaLink="true">http://kannada.webdunia.com/astrology/astro/articles/0911/12/1091112065_1.htm</guid><link>http://kannada.webdunia.com/astrology/astro/articles/0911/12/1091112065_1.htm</link><description>ಮನುಷ್ಯ ಜೀವನವೇ ಹಾಗೆ. ಸುಖವನ್ನು ಬಯಸುವಂಥದ್ದು. ಅಷ್ಟೇ ಅಲ್ಲ, ಜಿಜ್ಞಾಸೆಯಿಂದಲೇ ಕಾಲ ತಳ್ಳುವ ಜೀವನವದು. ತನ್ನ ಜಾತಕದಲ್ಲಿ ಕಷ್ಟ-ಸುಖ, ಶುಭ- ಅಶುಭಗಳ ಹಿಂದಿರುವ ರಹಸ್ಯ ಹುಡುಕಿಕೊಂಡು ಹೋಗುವ ಮನೋಧರ್ಮ ಕೆಲವರದಾದರೆ, ತನಗೆ ಬಂದ ಕಷ್ಟದ ಮೂಲ ಹುಡುಕಿಕೊಂಡು ಹೋಗಿ ಪರಿಹಾರ ಪಡೆಯಲು ಹವಣಿಸುವುದು ಹಲವರ ಮಾನವ ಸಹಜ ಗುಣ. ಕಷ್ಟ ಪರಿಹರಿಸಿ ಸುಖ ನೆಲೆಯಾಗಲು ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ದಾರಿ ಕಾಣದೆ ಕಂಗಾಲಾಗುವವರೂ ಅನೇಕರು.

ಬಹುತೇಕರು ಸಾಡೇಸಾತ್ ಶನಿಗೆ ಹೆದರಿದರೆ ಇನ್ನೂ ಅನೇಕರು ತಮ್ಮ ಜಾತಕದಲ್ಲಿ ತಮಗೆ ಕಾಳಸರ್ಪ ಯೋಗವಿದೆಯೆಂದು ತಿಳಿದು ಭಯಭೀತರಾಗುತ್ತಾರೆ. ಕಾಳ ಸರ್ಪ ಯೋಗದ ಬಗ್ಗೆ ಜನರಲ್ಲಿ ಭಯವಿರುವ ಜೊತೆಗೇ ಸಾಕಷ್ಟು ತಪ್ಪುತಿಳುವಳಿಕೆಗಳೂ ಇವೆ.</description><pubDate>Thu, 12 Nov 2009 17:41:44 GMT</pubDate></item><item><title>ಸುಖ ದಾಂಪತ್ಯಕ್ಕೆ ಆರು ವಾಸ್ತು ಸೂತ್ರಗಳು</title><guid isPermaLink="true">http://kannada.webdunia.com/astrology/vaastu/article/0910/30/1091030122_1.htm</guid><link>http://kannada.webdunia.com/astrology/vaastu/article/0910/30/1091030122_1.htm</link><description>ಯಶಸ್ವಿ ಮತ್ತು ಸಂತೋಷದ ದಾಂಪತ್ಯವು ಪ್ರತಿಯೊಬ್ಬ ನವದಂಪತಿಯ ಕನಸಾಗಿದೆ. ಸಂತಸದ ಮತ್ತು ಯಶಸ್ವಿ ವಿವಾಹವೂ ಕೆಲವು ಲಕ್ಷಣಗಳನ್ನು ಹೊಂದಿದೆ. ಈ ಕುರಿತ ಕೆಲವು ಅಂಶಗಳನ್ನು ಚರ್ಚಿಸೋಣ.
</description><pubDate>Fri, 30 Oct 2009 20:36:37 GMT</pubDate></item><item><title>ನಿಮಗ್ಯಾವ ರೋಗ ಬರಬಹುದು ಗೊತ್ತೇ?</title><guid isPermaLink="true">http://kannada.webdunia.com/astrology/astro/articles/0910/24/1091024069_1.htm</guid><link>http://kannada.webdunia.com/astrology/astro/articles/0910/24/1091024069_1.htm</link><description>'ಎಷ್ಟು ಹಣ ಇದ್ದರೇನು ಪ್ರಯೋಜನ...ಆ ಹಣವನ್ನು ಅನುಭವಿಸಲು ಮನುಷ್ಯನ ಆರೋಗ್ಯವೇ ಸರಿಯಿಲಿಲ್ಲವಾದರೆ ಏನು ಉಪಯೋಗ..?' ಎಂದು ಬಲ್ಲವರು ಹೇಳುತ್ತಾರೆ. ಹೌದು. ಎಲ್ಲಕ್ಕೂ ಆರೋಗ್ಯವೇ ಮೂಲ. ಬಡವರಾಗಲಿ, ಸಿರಿವಂತರಾಗಲೀ, ರೋಗ ಎಂಬುದು ಯಾರ ಮೇಲೂ ಯಾವ ಬೇಧವನ್ನೂ ಮಾಡಿಲ್ಲ. ಆರೋಗ್ಯ ಕಾಪಾಡಿಕೊಳ್ಳದಿದ್ದರೆ ಎಂಥವನನ್ನೂ ರೋಗ ದಾಳಿ ಮಾಡುತ್ತದೆ ಎಂಬುದು ಸಾರ್ವಕಾಲಿಕ ಸತ್ಯ.

ಹಾಗಿದ್ದೂ, ಸಂಖ್ಯಾಶಾಸ್ತ್ರಗಳ ಪ್ರಕಾರ ಪಂಡಿತರು ಮೂಲಾಂಕಗಳ ಪ್ರಕಾರ ಯಾರ‌್ಯಾರಿಗೆ ಯಾವ ಯಾವ ರೋಗಗಳು ಬರುವ ಸಾಧ್ಯತೆ ಹೆಚ್ಚು ಎಂದು ಲೆಕ್ಕಾಚಾರ ಹಾಕಿದ್ದಾರೆ. ದೇಹಾರೋಗ್ಯ ಕಪಾಡಿಕೊಳ್ಳದಿದ್ದರೆ, ಯಾರ‌್ಯಾರು ಎಂತೆಂಥ ರೋಗಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂಬ ವಿವರ ಇಲ್ಲಿದೆ. ಈ ಲೇಖನದಲ್ಲಿ ಮೂಲಾಂಕಗಳಿಗೆ ಅನುಗುಣವಾಗಿ ರೋಗಸಾಧ್ಯತೆಯನ್ನು ವಿವರಿಸಲಾಗಿದೆ. ಆ ಮೂಲಕ ಪ್ರತಿಯೊಬ್ಬರೂ ಅವರವರ ಮೂಲಾಂಕ ಪತ್ತೆಹಚ್ಚಿ ತಮ್ಮ ರೋಗ ಪತ್ತೆ ಹಚ್ಚಬಹುದು.</description><pubDate>Sat, 24 Oct 2009 18:34:02 GMT</pubDate></item><item><title>ಕನ್ಯಾ ರಾಶಿಯವರದ್ದೊಂದು ವಿಶೇಷ ವ್ಯಕ್ತಿತ್ವ!</title><guid isPermaLink="true">http://kannada.webdunia.com/astrology/astro/articles/0910/20/1091020060_1.htm</guid><link>http://kannada.webdunia.com/astrology/astro/articles/0910/20/1091020060_1.htm</link><description>ಈ ಬಾರಿ ಕನ್ಯಾ ರಾಶಿಯಲ್ಲಿ ಜನಿಸಿದ ಮಂದಿಯ ಗುಣಾವಗುಣಗಳನ್ನು ಬರೆಯಲಾಗಿದೆ. ಮಕ್ಕಳು, ಮಹಿಳೆ ಹಾಗೂ ಪುರುಷ ಈ ಮೂರು ವರ್ಗಗಳಲ್ಲಿ ಕನ್ಯಾ ರಾಶಿಯ ಮನುಷ್ಯ ಸಹಜ ಗುಣಗಳು ಹೇಗಿರುತ್ತವೆ ಎಂಬುದು ಇಲ್ಲಿ ಪರಾಮರ್ಶಿಸಲಾಗಿದೆ.

ಮಕ್ಕಳು: ಕನ್ಯಾ ರಾಶಿಯ ಮಗು ತುಂಬ ಮೌನವಾಗಿರುತ್ತದೆ. ಇತರ ಮಕ್ಕಳಿಗಿಂತ ಭಿನ್ನವಾಗಿ ಕಾಣುವ ಈ ರಾಶಿಯ ಮಕ್ಕಳು ತಮ್ಮಷ್ಟಕ್ಕೆ ಯಾರ ತಂಟೆಗೂ ಹೋಗದೆ ಇರುವುದೇ ಹೆಚ್ಚು. ಆದರೆ ಚುರುಕು ಬುದ್ಧಿ, ವಿಷಯವನ್ನು ಬಹುಬೇಗ ಗ್ರಹಿಸಬಲ್ಲ ಚಾಕಚಕ್ಯತೆ ಹಾಗೂ ತುಂಬಾ ಏಕಾಗ್ರತೆ ಹೊಂದಿರುತ್ತಾರೆ. ಈ ಮಕ್ಕಳು ಬೇರೆಯವರು ತಮಗೆ ಉಣಿಸುವುದನ್ನು ಇಷ್ಟಪಡಲಾರರು. ಆದರೆ, ತಾವೇ ಕೈಯಾರೆ ತಿನ್ನುತ್ತೇವೆಂದು ಹೊರಟ ಈ ಮಕ್ಕಳ ಹೊಟ್ಟೆ ಬಿಟ್ಟು ಊಟ ಬೇರೆಡೆ ಇರುವುದಂತೂ ಖಂಡಿತ. ಇದೊಂದನ್ನು ಹೊರತುಪಡಿಸಿದರೆ, ತಂಟೆ ತಕರಾರಿಲ್ಲದ ಮಕ್ಕಳು ಇವರು. ತುಂಬ ಕ್ಲೀನ್ ಹಾಗೂ ನೀಟಾಗಿ ತಮ್ಮ ವಸ್ತುಗಳನ್ನು ಇವರು ಇಟ್ಟುಕೊಳ್ಳುತ್ತಾರೆ.</description><pubDate>Tue, 20 Oct 2009 16:18:01 GMT</pubDate></item><item><title>ಸೂರ್ಯ-ಶನಿಯರ ಸಮಾಗಮ: ಜೀವನದಲ್ಲಿ ಸಂಘರ್ಷ</title><guid isPermaLink="true">http://kannada.webdunia.com/astrology/astro/celebritypredictions/0910/10/1091010078_1.htm</guid><link>http://kannada.webdunia.com/astrology/astro/celebritypredictions/0910/10/1091010078_1.htm</link><description>ಸೂರ್ಯ ಮತ್ತು ಶನಿ ಅಪ್ಪ ಮತ್ತು ಮಗ ಆಗಿದ್ದರೂ ಪರಸ್ಪರ ಶತ್ರುತ್ವ ಹೊಂದಿದ್ದಾರೆ. ಜ್ಞಾನ ವಿಜ್ಞಾನದಲ್ಲಿರುವಂತೆಯೇ ಪಾಸಿಟಿವ್ ಹಾಗೂ ನೆಗೆಟಿವ್‌ಗಳ ಸಮಾಗಮದಿಂದ ಯಾವತ್ತೂ ನೆಗೆಟಿವ್ ಉತ್ತರವಾಗುವಂತೆಯೇ, ಸಾತ್ವಿಕ ಹಾಗೂ ತಾಮಸ ಗುಣಗಳ ಸಮಾಗಮದಲ್ಲಿ ತಾಮಸ ಗುಣವೇ ವೈಭವೀಕರಿಸುತ್ತದೆ. ಇಲ್ಲಿಯೂ ಅಷ್ಟೆ. ಕುಂಡಲಿಯಲ್ಲಿ ಶನಿ ಹಾಗೂ ಸೂರ್ಯನ ಸಮಾಗಮವಾದರೆ ಅಂಥವರ ಜೀವನ ಸಂಘರ್ಷಮಯವಾಗಿರುವುದರಲ್ಲಿ ಸಂಶಯವೇ ಇಲ್ಲ.

ವಿಶೇಷವೆಂದರೆ ಈ ಸಮಾಗಮವಾದ ಲಗ್ನ, ಪಂಚಮ, ನವಮ ಅಥವಾ ದಶಮ ಸ್ಥಾನದ್ಲಲಿದ್ದರೆ, ಅಥವಾ ಇನ್ಯಾವುದೋ ಗ್ರಹ ಈ ಇಬ್ಬರು ಸಮಾಗಮಿಗಳ ಕಾರಕನಾಗಿದ್ದರೆ ಜೀವನದಲ್ಲಿ ಎಲ್ಲವೂ ವಿಳಂಬವಾಗಬಹುದು. ಬಹಳ ಕಷ್ಟ, ಪರಿಶ್ರಮದ ನಂತರವಷ್ಟೇ ಫಲ ಕಾಣುವುದು, ತಂದೆ ಹಾಗೂ ಮಗನಲ್ಲಿ ಯಾವತ್ತೂ ಜಗಳವೇ ನಡೆಯುವುದು, ಅಥವಾ ಅಪ್ಪ-ಮಗ ದೂರ ದೂರವಾಗುವುದು ಇಂತಹ ಘಟನೆಗಳು ಜೀವನದಲ್ಲಿ ನಡೆಯಬಹುದು.
</description><pubDate>Sat, 10 Oct 2009 19:37:29 GMT</pubDate></item><item><title>ನಿಮ್ಮ ಕುಂಡಲಿಯಲ್ಲಿ ಶನಿ ದೋಷವಿದೆಯೇ?</title><guid isPermaLink="true">http://kannada.webdunia.com/astrology/astro/articles/0909/29/1090929089_1.htm</guid><link>http://kannada.webdunia.com/astrology/astro/articles/0909/29/1090929089_1.htm</link><description>ಶನಿಯ ರಾಶಿ ಪರಿವರ್ತನೆ ಆಗುತ್ತಿದ್ದಂತೆ ಸಾಮಾನ್ಯವಾಗಿ ಜನರು ಭಯಭೀತರಾಗುತ್ತಾರೆ. ಶನಿದೇವನ ಕಾಟದಿಂದ ಇನ್ನೇನು ತೊಂದರೆಗಳಾಗುತ್ತೋ... ಅಥವಾ ಕಾರ್ಯಗಳಲ್ಲಿ ಏನೇನು ವಿಘ್ನ ಸಂಭವಿಸುತ್ತೋ ಎಂಬ ದುಗುಡ ಹೆಚ್ಚುತ್ತದೆ. ಅದರಲ್ಲೂ ಕೆಲವು ಮಂದಿಗೆ ತಮ್ಮ ರಾಶಿ, ನಕ್ಷತ್ರ, ಜನ್ಮ ಕುಂಡಲಿಯ ಪರಿಚಯವೇ ಇರೋದಿಲ್ಲ. ಯಾವುವೆಂಬುದರ ಗಂಧಗಾಳಿಯೂ ತಿಳಿದಿರುವುದಿಲ್ಲ. ಅಂತಹ ಸಂದರ್ಭ ಹಲವು ಜ್ಯೋತಿಷ್ಯದ ವಿಚಾರಗಳನ್ನು ಓದುವಾಗ ಅಂಥವರಲ್ಲಿ ಭಯ, ದುಗುಡ, ಗೊಂದಲ ಹೆಚ್ಚುವುದು ಸಾಮಾನ್ಯ. 'ತಮಗೆ ಮುಂದೇನು ಕಾದಿದೆಯೋ, ತನ್ನ ರಾಶಿ ಯಾವುದೆಂದೇ ಗೊತ್ತಿಲ್ಲ, ಹಾಗಾಗಿ ಶನಿ ತನ್ನ ರಾಶಿಯಲ್ಲಿ ಯಾವಾಗ ಇರುತ್ತಾನೋ..' ಎಂದೆಲ್ಲ ಭಯ ಇದ್ದೇ ಇರುತ್ತದೆ. ಇಂತಹ ಸಂದರ್ಭ ತಮ್ಮ ನಿತ್ಯ ಜೀವನದಲ್ಲಿ ನಡೆಯುತ್ತಿರುವ ಕೆಲವು ತೀರಾ ಸಾಮಾನ್ಯ ಘಟನೆಗಳಿಂದಲೇ ತಮಗೆ ಶನಿ ದೋಷವಿದೆಯೋ ಎಂದು ಪತ್ತೆಹಚ್ಚಬಹುದು. ಅಂತಹ ಘಟನೆಗಳ ವಿವರ ಇಲ್ಲಿದೆ.

1. ಶರೀರದಲ್ಲಿ ಯಾವಾಗಲೂ ಜಡತ್ವ, ಆಲಸ್ಯ ಅನಿಸುತ್ತಿರುವುದು.
2. ಸ್ನಾನ ಮಾಡುವುದು, ಬಟ್ಟೆ ಒಗೆಯುವುದರಲ್ಲಿ ಆಸಕ್ತಿಯೇ ಇಲ್ಲದಿರುವುದು ಅಥವಾ ಸ್ನಾನ, ಬಟ್ಟೆ ಒಗೆಯಲು ಸಮಯವೇ ಸಿಗದಿರುವುದು.</description><pubDate>Tue, 29 Sep 2009 19:13:22 GMT</pubDate></item><item><title>ಸಿಂಹ ರಾಶಿಯವರು ಹೀಗಿರ್ತಾರೆ!</title><guid isPermaLink="true">http://kannada.webdunia.com/astrology/astro/articles/0909/23/1090923072_1.htm</guid><link>http://kannada.webdunia.com/astrology/astro/articles/0909/23/1090923072_1.htm</link><description>ಮಕ್ಕಳು: ಸಿಂಹ ರಾಶಿಯ ಮಕ್ಕಳು ಯಾವಾಗಲೂ ಗುಂಪಿನಲ್ಲಿ ನಾಯಕರಾಗಿರುತ್ತಾರೆ. ಅದು ಆಟದ ಮೈದಾನದಲ್ಲಿರಬಹುದು, ಅಥವಾ ತರಗತಿಯಲ್ಲಿರಬಹುದು. ಎಲ್ಲಿದ್ದರೂ ತಂಡಕ್ಕೆ ಸಿಂಹ ರಾಶಿಯ ಮಗುವೇ ಪುಟಾಣಿ ಹೀರೋ/ ಹೀರೋಯಿನ್. ಈ ರಾಶಿಯ ಮಕ್ಕಳು ತುಂಬ ಬುದ್ಧಿವಂತರಾಗಿರುತ್ತಾರೆ. ಖುಷಿಯಿಂದಿರುತ್ತಾರೆ. ಜಗಳದಲ್ಲೂ ಅಷ್ಟೆ, ಸಿಟ್ಟಿಗೆದ್ದ ಸಿಂಹದಂತೆಯೇ ಸಿಂಹ ರಾಶಿಯ ಮಕ್ಕಳು ಕಾದಾಡುತ್ತಾರೆ. ಹಾಗಾಗಿ ಜಗಳಕ್ಕೆ ಇವರನ್ನು ಉತ್ತೇಜಿಸುವುದು ಬೇಡ.

ಈ ಮಕ್ಕಳನ್ನು ತುಂಬ ಕೀಳಾಗಿ ಕಾಣಬೇಡಿ. ಇದರಿಂದ ಅವರಿಗೆ ಮಾನಸಿಕವಾಗಿ ಆಘಾತವಾಗುತ್ತದೆ. ಮಕ್ಕಳ ಗುಂಪಿನಲ್ಲಿ ಬಾಸ್ ಆಗಿ ಬೀಗಿದರೆ ಅದು ಅವರ ಹುಟ್ಟುಗುಣ. ಅದನ್ನು ಏನು ಮಾಡಿದರೂ ಹೋಗಲಾಡಿಸಲು ಸಾಧ್ಯವಾಗೋದಿಲ್ಲ. ಅಗತ್ಯ ಬಂದರೆ, ಬೈಯ್ಯದೆ, ಹೊಡೆಯದೆ, ಹಾಗೆಲ್ಲಾ ಬಾಸ್ ಥರ ಆಡಬಾರದು ಪುಟ್ಟಾ, ಇನ್ನೊಬ್ಬರ ಮೇಲೆ ಡಾಮಿನೇಟ್ ಮಾಡಬಾರದೆಂದು ತಿಳಿಸಿ ಹೇಳಿ.</description><pubDate>Wed, 23 Sep 2009 19:16:16 GMT</pubDate></item><item><title>ಶನಿ ಕಾಟ: ಯಾವ ಯಾವ ರಾಶಿ ಮೇಲೆ ಎಷ್ಟೆಷ್ಟು?</title><guid isPermaLink="true">http://kannada.webdunia.com/astrology/astro/articles/0909/14/1090914078_1.htm</guid><link>http://kannada.webdunia.com/astrology/astro/articles/0909/14/1090914078_1.htm</link><description>ಮೊನ್ನೆ ಮೊನ್ನೆ ಸೆಪ್ಟೆಂಬರ್ 09ರಂದು ಶನಿ ಸಿಂಹರಾಶಿಯ್ನನು ಬಿಟ್ಟು ಕನ್ಯಾ ರಾಶಿಗೆ ಪ್ರವೇಶ ಮಾಡಿದ್ದಾನೆ. ಉತ್ತರ ಫಲ್ಗುಣಿ ನಕ್ಷತ್ರದ ಕನ್ಯಾ ರಾಶಿಯಲ್ಲಿ ಶನಿ ಲೋಹದ ಚಪ್ಪಲಿ ಮೆಟ್ಟಿ ಪ್ರವೇಶ ಮಾಡಿರುವುದರಿಂದ ಶನಿ ಮುಂದಿನ 90 ದಿನಗಳ ಕಾಲ ಸ್ವಲ್ಪ ಪೀಡಾಕಾರಕನಾಗಿರುತ್ತಾನೆ. ವೃಷಭ, ಮಕರ ರಾಶಿ ಕೆಟ್ಟ ದೃಷ್ಟಿಯಿಂದ ಬಚವಾದರೆ, ಕರ್ಕ ರಾಶಿ ಸಾಡೇಸಾತಿಯಿಂದ ಮುಕ್ತಿ ಪಡೆದಿದೆ. ತುಲಾ, ಮಿಥುನ ಹಾಗೂ ಕುಂಭ ರಾಶಿಗೆ ಈಗ ಆರಂಭವಾಗಿದೆ. ಹೀಗೆ ಯಾವ್ಯಾವ ರಾಶಿಗಳಲ್ಲಿ ಜನಿಸಿದವರ ಮೇಲೆ ಶನಿಯ ವಕ್ರದೃಷ್ಟಿ ಬೀರುತ್ತದೆ ಎಂಬ ಬಗ್ಗೆ ನೋಡೋಣ.

ಮೇಷ: ಮೇಷ ರಾಶಿಗೆ ಈಗ ಶನಿ ಸ್ವಾಸ್ಥ್ಯ ನೀಡುತ್ತಾನೆ. ಅಷ್ಟೇ ಅಲ್ಲ, ಧನಲಾಭವನ್ನೂ ಕೂಡಾ. ಆದರೆ ಚಿಂತೆಯನ್ನೂ ಇದೇ ಲಾಭಕಾರಕ ಶನಿ ಈ ರಾಶಿಯವರಿಗೆ ನೀಡುತ್ತಾನೆ. ಕುಟುಂಬ, ಸಂತಾನ ಹಾಗೂ ವ್ಯಾಪಾರ, ನೌಕರಿ ಸಂಬಂಧ ಚಿಂತೆ ಹೆಚ್ಚುತ್ತದೆ.

ವೃಷಭ: ಸಮಸ್ಯೆಗಳಿಂದ ಮುಕ್ತಿ ದೊರೆತರೂ, ಸ್ತ್ರೀ ಪುತ್ರರ ಸ್ವಾಸ್ಥ್ಯಕ್ಕೆ ಕಷ್ಟ ಸಾಧ್ಯತೆಗಳಿವೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಂದರ್ಭವೂ ತುಂಬ ಯೋಚಿಸಿ ಮುಂದುವರಿಯುವುದು ಉತ್ತಮ.</description><pubDate>Mon, 14 Sep 2009 19:55:06 GMT</pubDate></item><item><title>09/09/09!: ಅತಿ ವಿಶೇಷ ದಿನ ಒಂಭತ್ತರ ಮಹಿಮೆ!</title><guid isPermaLink="true">http://kannada.webdunia.com/astrology/astro/articles/0909/09/1090909041_1.htm</guid><link>http://kannada.webdunia.com/astrology/astro/articles/0909/09/1090909041_1.htm</link><description>ಇಂದಿನ ವಿಶೇಷತೆಯೇನು? ಅಂಥದ್ದೇನು ಇಲ್ಲವಲ್ಲ ಎಂದು ಲೆಕ್ಕಾಚಾರ ಮಾಡಿ ಕಣ್ಣು ಪಿಳಿಪಿಳಿ ಮಾಡಬೇಡಿ. ಇಂದಿನ ದಿನ ಭಾರತೀಯ ಪುರಾಣದ ಪ್ರಕಾರ ಮಹತ್ವದ ದಿನ. ಯಾವುದೇ ಹಬ್ಬ ಹರಿದಿನದಿಂದ ಇದು ಮಹತ್ವ ಪಡೆಯದಿದ್ದರೂ, ಇಂದು ತಾರೀಕು ಒಂಭತ್ತು ಎಂಬುದಕ್ಕೇ ವಿಶೇಷ. ಒಭತ್ತರಲ್ಲಿ ಏನ್ನಪ್ಪಾ ವಿಶೇಷ ಅಂತೀರಾ? ಇಂದು ಸಾಮಾನ್ಯ ಒಂಭತ್ತಲ್ಲ, 2009ನೇ ಇಸವಿಯ ಒಂಭತ್ತನೇ ತಿಂಗಳ ಒಂಭತ್ತನೇ ತಾರೀಕು, ಅರ್ಥಾತ್ 09/09/09!

ಒಂಭತ್ತು ಸಂಖ್ಯೆ ಭಾರತೀಯ ಪುರಾಣದಲ್ಲಿ ಮಹತ್ವ ಪಡೆದ ಸಂಖ್ಯೆ. ಹಿಂದೂ ಧರ್ಮದ ಪ್ರಕಾರ, ಒಂಭತ್ತು ಸಂಖ್ಯೆಯ ಅಧಿಪತಿ ಮಂಗಳ. ಹನುಮಂತನ ಸಂಖ್ಯೆಯೂ ಒಂಭತ್ತೇ.

ಆದಿ ಶಂಕರಾಚಾರ್ಯರು ಒಂಭತ್ತರ ಮಹತ್ವವನ್ನು ಹಿಂದೆಯೇ ಸೌಂದರ್ಯ ಲಹರಿಯಲ್ಲಿ ಹೇಳಿದ್ದರು. ಶಂಕರಾಚಾರ್ಯರ ಪ್ರಕಾರ, ನಾಲ್ಕು ಶಿವ ಚಕ್ರ, ಐದು ಶಕ್ತಿ ಚಕ್ರಗಳು ಸೇರಿ ಒಂಭತ್ತು ಮೂಲ ಪ್ರಕೃತಿಗಳಾಗಿವೆ</description><pubDate>Wed, 09 Sep 2009 12:50:40 GMT</pubDate></item><item><title>ಜೆನಿಲಿಯಾಗೆ 2012ರಲ್ಲಿ ವಿವಾಹಯೋಗವಂತೆ!</title><guid isPermaLink="true">http://kannada.webdunia.com/astrology/astro/celebritypredictions/0909/07/1090907091_1.htm</guid><link>http://kannada.webdunia.com/astrology/astro/celebritypredictions/0909/07/1090907091_1.htm</link><description>ದಕ್ಷಿಣ ಭಾರತದ ಪ್ರಸಿದ್ಧ ನಟಿ, ಮುದ್ದುಮುಖದ ಚೆಲುವೆ ಜೆನಿಲಿಯಾ ಡಿಸೋಜಾ ಇಮ್ರಾನ್ ಖಾನ್ ಜತೆ ಜಾನೇ ತೂ... ಸಿನಿಮಾದಲ್ಲಿ ಕಾಣಿಸಿಕೊಂಡದ್ದೇ ತಡ ಬಾಲಿವುಡ್ಡಿನಲ್ಲಿ ಆಕೆಯೀಗ ಅತಿ ಬೇಡಿಕೆಯ ನಟಿಯಾಗಿ ಭಡ್ತಿ ಪಡೆದಿದ್ದಾಳೆ. 1987ರ ಆಗಸ್ಟ್ ಐದರಂದು ಜನಿಸಿದ ಜೆನಿಲಿಯಾಳದ್ದು ಕುಂಡಲಿಯ ಅನುಸಾರ ಕರ್ಕ ಲಗ್ನ ಹಾಗೂ ಮಕರ ರಾಶಿ.

ಕರ್ಕ ಲಗ್ನದಲ್ಲಿ ಜನಿಸಿದವರು ಭಾವುಕರಾಗಿರುತ್ತಾರೆ, ಸ್ನೇಹಪರತೆ, ಕಲೆಯ ಮೇಲೆ ಪ್ರೀತಿ ಇವರ ಇನ್ನಿತರ ಪ್ರಮುಖ ಗುಣನಡತೆಗಳು. ಲಗ್ನದಲ್ಲಿ ಚಂದ್ರನಿರಿಸಿದ ದೃಷ್ಟಿ ಬಲ ಇದ್ದೇ ಇದೆ. 12ನೇ ಸ್ಥಾನದ ಶುಕ್ರ ಸುಖ ಸಂಪನ್ನತೆಯಿಂದ ತುಂಬಿದ ಜೀವನ ನೀಡುತ್ತಾನೆ.</description><pubDate>Mon, 07 Sep 2009 19:24:44 GMT</pubDate></item><item><title>ಅದೃಷ್ಟ ತರುವ ಸಸ್ಯಗಳು</title><guid isPermaLink="true">http://kannada.webdunia.com/astrology/vaastu/article/0909/04/1090904081_1.htm</guid><link>http://kannada.webdunia.com/astrology/vaastu/article/0909/04/1090904081_1.htm</link><description>ಫೆಂಗ್‌ಶುಯಿ ದೃಷ್ಟಿಕೋನದಿಂದ ಸಸ್ಯಗಳು ಶುಭಕರವೆನಿಸಿವೆ. ಮನೆಯಲ್ಲಿ ಸಸ್ಯಗಳನ್ನು ನೆಡುವುದು ಸದಾ ಒಳ್ಳೆಯದು. ಕಚೇರಿಯಲ್ಲಿ ಸಸ್ಯಗಳಿದ್ದರೆ ಅವು ನಿಮ್ಮ ವೃತ್ತಿಜೀವನದಲ್ಲೂ ಅದೃಷ್ಟ ತರಬಲ್ಲದು</description><pubDate>Fri, 04 Sep 2009 19:23:27 GMT</pubDate></item><item><title>ಕರ್ಕ ರಾಶಿಯ ಮಂದಿ ಹೀಗಿರುತ್ತಾರೆ ನೋಡ್ರಿ..!</title><guid isPermaLink="true">http://kannada.webdunia.com/astrology/astro/articles/0908/31/1090831041_1.htm</guid><link>http://kannada.webdunia.com/astrology/astro/articles/0908/31/1090831041_1.htm</link><description>ಕರ್ಕ ರಾಶಿಯಲ್ಲಿ ಜನಿಸಿದವರ ಗುಣಾವಗುಣಗಳು ಆ ರಾಶಿಯನ್ನು ಅವಲಂಬಿಸಿರುತ್ತದೆ. ಇಲ್ಲಿ ಮಕ್ಕಳು, ಸ್ತ್ರೀಯರು ಹಾಗೂ ಪುರುಷರೆಂಬ ವಿಭಾಗಗಳಲ್ಲಿ ಕರ್ಕ ರಾಶಿಯಲ್ಲಿ ಜನಿಸಿದವರ ಸ್ವಭಾವವನ್ನು ವಿವರಿಸಲಾಗಿದೆ. ಕರ್ಕ ರಾಶಿಯ ಮಕ್ಕಳ ಮೂಡ್ ಆಗಾಗ ಬದಲಾಗುತ್ತಲೇ ಇರುತ್ತದೆ. ಈಗ ನಗುತ್ತಾ ಇದ್ದರೆ ಇನ್ನು ಸ್ವಲ್ಪ ಹೊತ್ತಿನಲ್ಲೇ ಪುಟ್ಟ ಕಾರಣಕ್ಕೆ ಮೂತಿ ಉದ್ದ ಮಾಡುವ ಗುಣ ಇವರದ್ದು. ಇವರು ಇನ್ನೊಬ್ಬರನ್ನು ನೋಡಿ ಕಲಿಯೋದು ಜಾಸ್ತಿ. ನೆನಪೂ ಜಾಸ್ತಿಯೇ. ತುಂಬ ಎಮೋಶನಲ್ ಆಗಿರುವ ಈ ಮಕ್ಕಳು ಕೆಲವೊಮ್ಮೆ ಒಬ್ಬರೇ ಇರಲು ಇಷ್ಟಪಡುತ್ತಾರೆ. ಕರ್ಕ ರಾಶಿಯ ಪುರುಷ ತುಂಬಾ ನಾಚಿಕೆಯ ಮನುಷ್ಯರಾಗಿರುತ್ತಾರೆ. ಮಾತು ಕಡಿಮೆ ದುಡಿಮೆ ಹೆಚ್ಚು ಎಂಬ ಗಾದೆ ಮಾತಿಗೆ ತಲೆಬಾಗುವವರು ಇವರು. ತಾನಾಯಿತು ತನ್ನ ಕೆಲಸವಾಯಿತು ಅಂತ ಮಾತನಾಡದೆ ಸುಮ್ಮನಿದ್ದುಬಿಡುತ್ತಾರೆ. ಇವರು ಇನ್ನೊಬ್ಬರ ಜತೆಗೆ ಸಲಿಗೆಯಿಂದ ವರ್ತಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಕರ್ಕ ರಾಶಿಯ ಸ್ತ್ರೀಯರು ಎಂದಾದರೂ ಭೇಟಿಯಾಗಿದ್ದೀರಾ? ಹಾಗಾದರೆ ನಿಮಗೆ ಆಕೆಯ ಬಗ್ಗೆ ಸ್ವಲ್ಪ ಕನ್ಫೂಷನ್ ಆಗಿರುವುದು ಸಹಜ. ಆಕೆಯ ಸ್ವಭಾವವೇ ಹಾಗೆ, ಆಕೆ ಗಂಭೀರವೋ, ತಿಕ್ಕಲುತನವೋ, ಅಥವಾ ಏಕಾಂಗಿಯೋ... ಒಂದೂ ನಿಮಗೆ ಅರ್ಥವಾಗಲಾರದು. ಆದರೆ, ನಿಜಕ್ಕೂ ಕರ್ಕ ರಾಶಿಯ ಸ್ತ್ರೀ ತುಂಬ ಸೆನ್ಸಿಟಿವ್, ಭಾವುಕ, ದಯೆಯುಳ್ಳವಳು.</description><pubDate>Mon, 31 Aug 2009 13:47:31 GMT</pubDate></item><item><title>ನಿಮ್ಮ ಮನೆಗೆ ಕೆಲವು ಫೆಂಗ್‌ಶುಯಿ ಟಿಪ್ಸ್‌ಗಳು</title><guid isPermaLink="true">http://kannada.webdunia.com/astrology/vaastu/tips/0908/18/1090818071_1.htm</guid><link>http://kannada.webdunia.com/astrology/vaastu/tips/0908/18/1090818071_1.htm</link><description>1.ನಿಮ್ಮ ಮನೆಯ ಮುಖ್ಯ ಬಾಗಿಲಿನ ಹೊರಗೆ ಬೂಟುಗಳು ಮತ್ತು ಚಪ್ಪಲಿಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಬೇಡಿ. ಮುಖ್ಯದ್ವಾರದ ಹೊರಗಿನ ಜಾಗ ಮುಕ್ತವಾಗಿರಬೇಕು. ಚಿ(ಶಕ್ತಿ) ಗಾಳಿಯ ಜತೆ ಚಲಿಸುತ್ತದೆ ಮತ್ತು ಬೂಟುಗಳು ಮತ್ತು ಚಪ್ಪಲಿಗಳ ವಾಸನೆಯನ್ನು ಗಾಳಿಯ ಜತೆ ಒಯ್ದು ಅಸ್ವಸ್ಥತೆ ಉಂಟುಮಾಡುತ್ತದೆ.
</description><pubDate>Tue, 18 Aug 2009 18:15:38 GMT</pubDate></item><item><title>ರಾಖಿ ಸಾವಂತ್‌ಗೆ 2012ರಲ್ಲಿ ವಿವಾಹ ಯೋಗ!</title><guid isPermaLink="true">http://kannada.webdunia.com/astrology/astro/celebritypredictions/0908/14/1090814031_1.htm</guid><link>http://kannada.webdunia.com/astrology/astro/celebritypredictions/0908/14/1090814031_1.htm</link><description>ಮೊನ್ನೆ ಮೊನ್ನೆ ಸ್ವಯಂವರದಲ್ಲಿ ಮದುವೆಯಾಗುತ್ತೇನೆಂದು ಸುದ್ದಿ ಮಾಡಿ ದೇಶದೆಲ್ಲೆಡೆ ಜಗಜ್ಜಾಹೀರಾಗಿ ಸುದ್ದಿ ಮಾಡಿದ ಐಟಂ ಗರ್ಲ್ , ಮಾಡೆಲ್, ಬಾಲಿವುಡ್ ನಟಿ, ಟಿವಿ ನಿರೂಪಕಿ  ರಾಖಿ ಸಾವಂತ್ ಹುಟ್ಟಿದ್ದು ವೃಷ್ಚಿಕ ಲಗ್ನದ ಕನ್ಯಾ ರಾಶಿಯಲ್ಲಿ. ಲಗ್ನದಲ್ಲಿ ಬುಧ, ಸೂರ್ಯ, ಮಂಗಳರಿದ್ದಾರೆ. ಸ್ವರಾಶಿಯಲ್ಲಿ ಮಂಗಳನಿರುವುದರಿಂದ ಇಂಥವರು ತುಂಬ ಸಾಹಸಿಗಳಾಗಿರುತ್ತಾರೆ. ಸೂರ್ಯ- ಮಂಗಳ ಜತೆಯಾಗಿರುವುದರಿಂದ ತುಂಬ ಯೋಚಿಸದೆ ನೇರವಾಗಿ ಮಾತನಾಡುವವರು ಇಂಥವರಾಗಿರುತ್ತಾರೆ. ರಾಖಿಯಲ್ಲೂ ಇದೇ ಗುಣಗಳು ಕಾಣುತ್ತವೆ.ರಾಖಿಗೆ ವಿವಾಹಯೋಗವಿರುವುದು 2012ರಿಂದ 2013ರವರೆಗೆ. ಇದಕ್ಕಿಂತ ಮೊದಲು ಆಕೆ ಯಾರಿಂದ ಪ್ರಭಾವಿತಳಾದರೂ, ಕುಂಡಲಿಯ ಪ್ರಕಾರ ವಿವಾಹವಾಗಲು ಸಾಧ್ಯವಿಲ್ಲ. ಹಾಗಾಗಿ ಈ ಸ್ವಯಂವರ ಪಬ್ಲಿಸಿಟಿ ಸ್ಟಂಟ್ ಆಗಿ ರೂಪುಗೊಂಡಿತಷ್ಟೇ ಅಲ್ಲದೆ ಬೇರೇನೂ ಸಾಧಿಸಲಾಗಲಿಲ್ಲ.</description><pubDate>Fri, 14 Aug 2009 13:11:03 GMT</pubDate></item><item><title>ಜಟಿಲ ನಿಯಮಗಳ ಚೀನಾ ಫೆಂಗ್‌ಶುಯಿ ಕಲೆ</title><guid isPermaLink="true">http://kannada.webdunia.com/astrology/vaastu/article/0908/08/1090808089_1.htm</guid><link>http://kannada.webdunia.com/astrology/vaastu/article/0908/08/1090808089_1.htm</link><description>ಫೆಂಗ್ ಶ್ಯು ಪ್ರಾಚೀನ ಕಲೆ ಮತ್ತು ವಿಜ್ಞಾನವಾಗಿದ್ದು, ಚೀನದಲ್ಲಿ 3000 ವರ್ಷಗಳ ಹಿಂದೆ ಹುಟ್ಟಿದೆ. ಯಾವುದೇ ಸ್ಥಳದ ಶಕ್ತಿಗಳಲ್ಲಿ ಸಮತೋಲನ ಸಾಧಿಸುವ ಮ‌ೂಲಕ ಆರೋಗ್ಯ ಮತ್ತು ಅದೃಷ್ಟವನ್ನು ಗಳಿಸುವ ಜ್ಞಾನವೆಂದು ಫೆಂಗ್‌ಶ್ಯುವನ್ನು ಬಣ್ಣಿಸಲಾಗಿದೆ.

</description><pubDate>Sat, 08 Aug 2009 21:02:27 GMT</pubDate></item><item><title>ನಿಮ್ಮದು ಮಿಥುನ ರಾಶಿಯೇ?</title><guid isPermaLink="true">http://kannada.webdunia.com/astrology/astro/articles/0908/05/1090805094_1.htm</guid><link>http://kannada.webdunia.com/astrology/astro/articles/0908/05/1090805094_1.htm</link><description>ಮಿಥುನ ರಾಶಿಯಲ್ಲಿ ಜನಿಸಿದವರ ಮೂಲ ಸ್ವಭಾವ ಹೆಚ್ಚು ಕಡಿಮೆ ರಾಶಿಯ ಗುಣಸ್ವಭಾವಕ್ಕೆ ಹೊಂದಿಕೊಂಡಿರುತ್ತದೆ. ಕಾಲಕ್ರಮೇಣ ಪರಿಸರಕ್ಕೆ ತಕ್ಕಂತೆ ಈ ರಾಶಿಯವರು ಬದಲಾದರೂ, ಮೂಲಸ್ವಭಾವ ಎಲ್ಲೋ ಹುದುಗಿಕೊಂಡ ಸ್ಥಿತಿಯಲ್ಲಿ ಇದ್ದೇ ಇರುತ್ತದೆ. ಪುರುಷ- ಯಾವಾಗಲೂ ಪ್ರೀತಿಯ ಮಳೆ ಸುರಿಸುತ್ತಲೇ ತನ್ನ ಜತೆಗೇ ಇರಬೇಕೆಂದು ಹಪಹಪಿಸುವ ಹುಡುಗಿಯರು ಮಿಥುನ ರಾಶಿಯ ಹುಡುಗರ ಕಡೆಗೆ ವಾಲದಿರುವುದೇ ಉತ್ತಮ. ಕಾರಣ ಮಿಥುನ ರಾಶಿಯ ಪುರುಷರು ಸ್ವಲ್ಪ ಕಾಲ ಪ್ರೀತಿಯ ಮಳೆ ಸುರಿಸಿದರೂ ಕೆಲವು ಕಾಲ ಮಳೆಯೇ ಇಲ್ಲದೆ ಬೆಂಗಾಡಾಗಬಲ್ಲರು. ಇವರಿಗೆ ಸ್ವಲ್ಪ ಸಹನೆ ಕಡಿಮೆಯೇ. ಅತಿ ಬೇಗನೆ ಕೋಪ ನೆತ್ತಿಗೇರುವ, ಉದ್ರಿಕ್ತರಾಗುವ ಸ್ವಭಾವ ಇವರದ್ದು. ಸ್ವಲ್ಪ ಸಂದೇಹವೂ ಹೆಚ್ಚು.</description><pubDate>Wed, 05 Aug 2009 19:58:31 GMT</pubDate></item><item><title>ಏಳು ದೈವಾಜ್ಞೆಗಳನ್ನು ನಿಷ್ಠರಾಗಿ ಪಾಲಿಸಿ</title><guid isPermaLink="true">http://kannada.webdunia.com/astrology/vaastu/article/0907/25/1090725110_1.htm</guid><link>http://kannada.webdunia.com/astrology/vaastu/article/0907/25/1090725110_1.htm</link><description>2009ರಲ್ಲಿ ಗುರು ಕಟಕದಲ್ಲಿ ಪ್ರವೇಶಿಸಿ ದುರ್ಬಲಗೊಳ್ಳುತ್ತದೆ. ಅಪರಾಧ ಮತ್ತು ಹಿಂಜರಿತ ಮುಂದುವರಿಯಲಿದ್ದು, ಜನರ ಮಾನಸಿಕ, ದೈಹಿಕ ಆರೋಗ್ಯಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ನಮ್ಮನ್ನು ರಕ್ಷಣೆ ಮಾಡುವ, ಆರೋಗ್ಯ ಮತ್ತು ಸಾಮರಸ್ಯ ಉಂಟುಮಾಡುವ ಮುಖ್ಯ ವಾಸ್ತು ಮಾರ್ಗದರ್ಶಿಕೆಗಳ ಕಡೆ ನಾವು ಗಮನವಹಿಸೋಣ.</description><pubDate>Sat, 25 Jul 2009 20:04:57 GMT</pubDate></item><item><title>ವೃಷಭ ರಾಶಿಯವರು ಹೀಗಿರ್ತಾರೆ!</title><guid isPermaLink="true">http://kannada.webdunia.com/astrology/astro/articles/0907/25/1090725099_1.htm</guid><link>http://kannada.webdunia.com/astrology/astro/articles/0907/25/1090725099_1.htm</link><description>ವೃಷಭ ರಾಶಿಯ ಪುರುಷ, ಮಹಿಳೆ, ಮಕ್ಕಳು ಹೀಗೆ ಮೂರು ವರ್ಗದಲ್ಲೂ ರಾಶಿಯ ಗುಣ ಅವರ ಜನ್ಮಜಾತ ಗುಣವಾಗಿರುತ್ತದೆ. ಆದರೆ ಇದು ಕಾಲಕ್ರಮೇಣ ಪರಿಸರಕ್ಕೆ ತಕ್ಕಂತೆ ಬದಲಾಗುತ್ತಾ ಹೋಗಬಹುದು. ಆದರೆ, ಮೂಲ ಸ್ವಭಾವ ಮಾತ್ರ ಇದ್ದೇ ಇರುತ್ತದೆ. ಕೆಲವೊಮ್ಮೆ ಮಾತ್ರ ಅದು ಗೌಣವಾಗುತ್ತದೆ. ವೃಷಭ ರಾಶಿಯ ಗುಣಾವಗುಣಗಳು ಇಲ್ಲಿವೆ.

ಪುರುಷ- ವೃಷಭ ರಾಶಿಯ ಪುರುಷ ಶಾಂತಚಿತ್ತದ, ಸಮಾಧಾನದ ವಿನಯ ಶೀಲ ವ್ಯಕ್ತಿಯಾಗಿರುತ್ತಾನೆ. ಅಷ್ಟೇ ಪ್ರಾಕ್ಟಿಕಲ್ ಕೂಡಾ. ಇವರು ಮೊದಲ ನೋಟದಲ್ಲೇ ಪ್ರೇಮಕ್ಕೆ ಬಿದ್ದುಬಿಡುವಂಥವರಲ್ಲ. ತನಗೆ ಪರಿಚಯವಾದವರು ಎಂಥವರು ಎಂದು ತಿಳಿದ ಮೇಲಷ್ಟೇ ಇವರು ಅವರೊಂದಿಗೆ ಸ್ನೇಹ ಹೊಂದುತ್ತಾರೆ. ಮಹಿಳೆ- ವೃಷಭ ರಾಶಿಯ ಮಹಿಳೆಯರಿಗೆ ಮಾನಸಿಕ ಸಾಮರ್ಥ್ಯ ಅಧಿಕ. ಎಂಥಾ ಕಷ್ಟ ಬಂದರೂ ಒಂದು ತೊಟ್ಟು ಕಣ್ಣೀರು ಹರಿಸದೆ, ಜಗ್ಗದೆ ನಿಲ್ಲುವವರು ಇವರು. ಆದರೆ ಬೇಗ ಕೋಪಗೊಳ್ಳುವ ಇವರು ಅಷ್ಟೇ ಬೇಗ ತಣ್ಣಗಾಗುವವರು ಕೂಡಾ. ಸ್ತ್ರೀಸಹಜ ಮನೋಧರ್ಮ ಇವರಲ್ಲಿ ಎದ್ದು ಕಾಣುತ್ತದೆ.</description><pubDate>Sat, 25 Jul 2009 19:29:43 GMT</pubDate></item><item><title>ಸೂರ್ಯಂಗೂ ನಿಮ್ ಹೃದಯಕ್ಕೂ ಏನ್ ಸಂಬಂಧ?</title><guid isPermaLink="true">http://kannada.webdunia.com/astrology/astro/articles/0907/22/1090722042_1.htm</guid><link>http://kannada.webdunia.com/astrology/astro/articles/0907/22/1090722042_1.htm</link><description>ಜುಲೈ 22ರಂದು ಈ ಶತಮಾನದ ಸುದೀರ್ಘವಾದ ಖಗ್ರಾಸ ಸೂರ್ಯ ಗ್ರಹಣದ ದಿನ. ಈ ಹಿನ್ನೆಲೆಯಲ್ಲಿ ಬನರಾಸ್ ವಿವಿ ಪಂಡಿತರು ಅಧ್ಯಯನವೊಂದನ್ನು ನಡೆಸಿ, ದೇಹದ ಮೇಲೆ ಗ್ರಹಗಳು ಯಾವ ರೀತಿ ಪ್ರಭಾವ ಬೀರುತ್ತವೆ ಎಂದು ಕೆಲವೊಂದು ರೋಗಿಗಳನ್ನು ತಪಾಸಣೆಗೊಳಪಡಿಸಿ ತಿಳಿದುಕೊಂಡಿದ್ದಾರೆ. ಅವರೀಗ ಈ ವರದಿಯನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ಗೆ ಸಲ್ಲಿಸಿದ್ದಾರೆ.</description><pubDate>Wed, 22 Jul 2009 15:22:41 GMT</pubDate></item></channel></rss>