|
| ಪುತ್ತಿಗೆ ಶ್ರೀಗಳಿಂದ ನೂತನ ಧಾರ್ಮಿಕ ದಾಖಲೆ |
ಹೌದು. ಪುತ್ತಿಗೆ ಶ್ರೀಗಳು ಧಾರ್ಮಿಕ ಆಚರಣೆ, ಕಟ್ಟುಪಾಡುಗಳಿಗೆ ಸಂಬಂಧಿಸಿ ಇದೇ ಮೊದಲ ಬಾರಿಗೆ ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಕ್ರಾಂತಿಕಾರಕ ಬದಲಾವಣೆಗಳಿಗೆ ನಾಂದಿಹಾಡಿದ್ದಾರೆ. ಹಿಂದೂ ಧರ್ಮವು ವಿಶ್ವದೆಲ್ಲೆಡೆ ಪಸರಿಸಬೇಕೆಂದರೆ ಅದು ಸಂಪ್ರದಾಯದ ಬಿಗಿ ಬಂಧನಗಳಿಂದ ಹೊರ ಬಂದಾಗಷ್ಟೇ ಸಾಧ್ಯ ಎಂಬುದನ್ನು ತಮ್ಮ ಅಭಿಪ್ರಾಯ-ಆಚರಣೆಗಳಿಂದ ಸ್ಪಷ್ಟಪಡಿಸಿದ್ದಾರೆ.
ಗುರುವಾರದ ತನಕವೂ ಪುತ್ತಿಗೆ ಶ್ರೀಗಳ ಜೊತೆಗಿದ್ದ ಶಿರೂರು ಮಠದ ಸ್ವಾಮೀಜಿಯವರೂ ಕೊನೇ ಘಳಿಗೆಯಲ್ಲಿ ಇತರ ಆರು ಮಠಗಳ ಜತೆ ಸೇರಿಕೊಂಡಾಗ ಪೀಠಾರೋಹಣಕ್ಕೆ ಸಂಬಂಧಿಸಿ ಪುತ್ತಿಗೆ ಶ್ರೀಗಳು ಅಕ್ಷರಶಃ ಏಕಾಂಗಿಯಾಗುಳಿಯಬೇಕಾಗಿ ಬಂತು. 750 ವರ್ಷಗಳ ಇತಿಹಾಸವಿರುವ ಶ್ರೀಕೃಷ್ಣ ಮಠದಲ್ಲಿ ಇದೇ ಮೊದಲ ಬಾರಿಗೆ ಪೇಜಾವರರೂ ಸೇರಿದಂತೆ ಏಳು ಯತಿಗಳ ಅನುಪಸ್ಥಿತಿಯಲ್ಲಿ ಪರ್ಯಾಯ ಮಹೋತ್ಸವ ನಡೆಯುವಂತಾಯಿತು.
ಇಷ್ಟಾದರೂ ವಿಚಲಿತರಾಗದ ಪುತ್ತಿಗೆ ಶ್ರೀಗಳು ಇದೇ ಮೊದಲ ಬಾರಿಗೆ ಸಂಪ್ರದಾಯ ಮುರಿದು ಶ್ರೀಕೃಷ್ಣನನ್ನು ಮುಟ್ಟಿ ಪೂಜೆ ಮಾಡುವಾಗ ಅದಕ್ಕೆ ಸಾಕ್ಷಿಯಾಗಿದ್ದು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮ. ಈ ದೃಷ್ಟಿಯಿಂದ ಅವರು ಸಂಪ್ರದಾಯದ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನೇ ಸ್ಥಾಪಿಸಿದಂತಾಗಿದೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ಚಿಕಿತ್ಸೆ - ಒತ್ತಡದ ಸಂದರ್ಭದಲ್ಲಿ ನಾವು ಪ್ರಶಾಂತವಾಗಿ, ನಿರಾಳವಾಗಿ ಇರುವುದನ್ನು ಕಲಿಯುವುದರಿಂದ ಸಮಸ್ಯೆ ಸುಲಭವಾಗಿ ಬಗೆಹರಿಯಬಹುದು ಮತ್ತು ಆರೋಗ್ಯಕಾರಿ ಜೀವನಕ್ಕೂ ಸಹಕಾರಿಯಾಗುತ್ತದೆ. |
| |
|
|
|
|
|
|
|
|
|
| ಪ್ರೇಮಗಾಥೆ - ನೀನಂದು ನನ್ನ ಮೊಬೈಲ್ಗೆ ಕರೆ ಮಾಡಿದಾಗ ಕೇಳಲಿಲ್ಲವಾ ಯಾಕೆ ಈ ಹಾಡನ್ನು ಕಾಲರ್ ಟ್ಯೂನ್ ಆಗಿ ಸೆಟ್ ಮಾಡಿದ್ದೀಯಾ ಅಂತ? ನಿನಗೆ ಈ ಹಾಡು ನೆನಪಿದೆಯಾ ಅನು?..ಅಂದು ನಮ್ಮ ಕಾಲೇಜ್ ಡೇಗೆ ನೀನು ನನಗೆ ಡೆಡಿಕೇಟ್ ಮಾಡಿದ್ದು ಈ ಹಾಡನ್ನೇ ಅಲ್ವಾ.. |
| |
|
|
|
|
|
|
|