|
| ತಟಸ್ಥ ಸ್ಥಳದಲ್ಲಿ ರಣಜಿ: ಸಚಿನ್ ವಿರೋಧ |
| ನವದೆಹಲಿ, 6 ಜನವರಿ 2009 ( 13:09 IST ) | |
ಬಹಳ ಅಪರೂಪವಾಗಿ ರಣಜಿ ಟ್ರೋಪಿಯಲ್ಲಿ ಪಾಲ್ಗೊಂಡು, ಅದಾಗ್ಯೂ, ಅತಿ ಕಡಮೆ ಪ್ರೇಕ್ಷಕರನ್ನು ಆಕರ್ಷಿಸಿದ ಮುಂಚೂಣಿಯ ಬ್ಯಾಟ್ಸ್ಮನ್ ಸಚಿನ್ ತೆಂಡುಲ್ಕರ್, ಟೂರ್ನಿಗಾಗಿ ತಟಸ್ಥ ಸ್ಥಳಗಳನ್ನು ಬಳಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಸುಮಾರು ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮುಂಬೈ ಪರ ತಮ್ಮ ರಾಷ್ಟ್ರೀಯ ಚಾಂಪಿಯನ್ಶಿಪ್ ಪಂದ್ಯವನ್ನು ಆಡಿದ ತೆಂಡುಲ್ಕರ್ ಪ್ರಸಕ್ತ ಸೌರಾಷ್ಟ್ರ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 122 ರನ್ನುಗಳನ್ನು ಕಲೆ ಹಾಕಿದ್ದರು.
ಚೆನ್ನೈಯಲ್ಲಿ ನಡೆದ ಪಂದ್ಯವನ್ನು ವೀಕ್ಷಿಸಲು ಕೇವಲ ಕೆಲವೇ ಪ್ರೇಕ್ಷಕರು ಆಗಮಿಸಿದ್ದರು. ತವರು ತಂಡಗಳು ತಮಗೆ ಅನುಕೂಲಕರವಾದ ಪಿಚ್ ತಯಾರಿಸುವುದನ್ನು ತಡೆಯಲು ಬಿಸಿಸಿಐ ಕಳೆದ ವರ್ಷ ತಟಸ್ಥ ಸ್ಥಳದ ಪರಿಕಲ್ಪನೆಯನ್ನು ಅನಾವರಣಗೊಳಿಸಿತ್ತು.
ತಾನು ತಟಸ್ಥ ಸ್ಥಳದ ಪರವಾಗಿಲ್ಲ ಎಂಬ ಸಚಿನ್ ಉಲ್ಲೇಖ ಭಾರತೀಯ ಮಾಧ್ಯಮದಲ್ಲಿ ವರದಿಯಾಗಿತ್ತು. ಯಾವುದಾದರೂ ತಂಡ ತನ್ನ ತವರು ನೆಲದಲ್ಲೇ ಆಡಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ವಿಕೆಟ್ಗೆ ಸಂಬಂಧಿಸಿದಂತೆ ಅದನ್ನು ಪರಿವೀಕ್ಷಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ತವರು ನೆಲದಲ್ಲಿ ಪ್ರೇಕ್ಷಕರು ನಿಮ್ಮನ್ನು ಬೆಂಬಲಿಸುವುದನ್ನು ನೋಡಲು ಕುಷಿಯಾಗುತ್ತದೆ. ಅದು ಪಂದ್ಯದ ತೀವ್ರತೆ ಹೆಚ್ಚಿಸುತ್ತದೆ ಮತ್ತು ಅಲ್ಲಿ ವಾತಾವರಣ ಭಿನ್ನವಾಗಿರುತ್ತದೆ ಎಂದು ಅವರು ವಿವರಿಸಿದ್ದಾರೆ. .
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ |
| |
|
|
|
|
|
|
|