|
| ತಂಡದ ಪರಿಸ್ಥಿತಿ ಆರೋಗ್ಯಕರವಾಗಿಲ್ಲ: ಪೀಟರ್ಸನ್ |
| ಲಂಡನ್, 5 ಜನವರಿ 2009 ( 12:14 IST ) | |
ತಮ್ಮ ಮತ್ತು ಕೋಚ್ ಪೀಟರ್ ಮೂರ್ಸ್ ನಡುವೆ ಪ್ರಸಕ್ತ ನಡೆಯುತ್ತಿರುವ ಕಲಹದಿಂದ ತಂಡದಲ್ಲಿನ ಪರಿಸ್ಥಿತಿ ಆರೋಗ್ಯಕರವಾಗಿಲ್ಲ ಎಂದು ಒಪ್ಪಿಕೊಂಡಿರುವ ನಾಯಕ ಕೆವಿನ್ ಪೀಟರ್ಸನ್, ವೆಸ್ಟಿಂಡೀಸ್ ಪ್ರವಾಸ ಕೈಗೊಳ್ಳವ ಮುನ್ನ ಇಸಿಬಿ ಈ ಬಿಕ್ಕಟ್ಟನ್ನು ಬಗೆಹರಿಸುವ ಒಲವು ವ್ಯಕ್ತಪಡಿಸಿದ್ದಾರೆ.
ಖಂಡಿತವಾಗಿಯೂ ಈಗಿನ ಪರಿಸ್ಥಿತಿ ಆರೋಗ್ಯಕರವಾಗಿಲ್ಲ. ಈ ಬಿಕ್ಕಟ್ಟು ಆದಷ್ಟು ಬೇಗ ಬಗೆಹರಿಯುವುದನ್ನು ತಾವು ಖಚಿತ ಪಡಿಸಿಕೊಳ್ಳಬೇಕು. ವೆಸ್ಟಿಂಡೀಸ್ಗೆ ತೆರಳುವ ಮುನ್ನ ಇದು ಬಗೆಹರಿಯಬೇಕು ಎಂದು ಅವರು ತಿಳಿಸಿದ್ದಾರೆ.
ಇಂಗ್ಲೆಂಡ್ ತಂಡದ ಒಳ್ಳೆಯದಕ್ಕಾಗಿ ಪ್ರತಿಯೊಬ್ಬರು ತೃಪ್ತಿದಾಯಕರಾಗಿರಬೇಕು, ಪ್ರತಿಯೊಬ್ಬರು ಸಮಾನ ಗುರಿಯನ್ನು ಹಾಗೂ ಸಮಾನ ದಿಶೆಯನ್ನು ಹೊಂದಿರಬೇಕು ಎಂದು ಪೀಟರ್ಸನ್ ತಿಳಿಸಿದ್ದಾರೆ.
ಅದಾಗ್ಯೂ, ಇಸಿಬಿ ವ್ಯವಸ್ಥಾಪಕ ನಿರ್ದೇಶಕ ಹುಗ್ ಮೊರ್ರಿಸ್ರಿಗೆ ಪ್ರಸಕ್ತ ನಡೆಯುತ್ತಿರುವ ಬಿಕ್ಕಟ್ಟನ್ನು ಬಗೆಹರಿಸುವ ಜವಬ್ದಾರಿ ವಹಿಸಿದೆ. ಒಂದು ವೇಳೆ ನಾಯಕ ಮತ್ತು ಕೋಚ್ ತಮ್ಮ ನಡುವಿನ ವೈಮನಸ್ಸನ್ನು ಬಗೆಹರಿಸಲಾಗದಿದ್ದರೆ ಮೂರ್ಸ್ ಸ್ಥಾನ ತುಂಬುವ ನಿಟ್ಟಿನಲ್ಲಿ ಇಸಿಬಿ ಕೋಚ್ಗಳ ಪಟ್ಟಿಯನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿದೆ.
ವೆಸ್ಟಿಂಡೀಸ್ ಪ್ರವಾಸಕ್ಕೆ ಮಾಜಿ ಟೆಸ್ಟ್ ಆಟಗಾರ ಆಶ್ಲೇ ಗೈಲ್ಸ್ ತಾತ್ಕಾಲಿಕ ಕೋಚ್ರನ್ನಾಗಿ ನೇಮಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಪತ್ರಿಕೆಯೊಂದರಲ್ಲಿ ವರದಿಯಾಗಿದೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್ಗೆ ಹೊಂದಿಕೆಯಾಗುವುದರಿಂದ |
| |
|
|
|
|
|
|
|