ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ವಿಶ್ವಕಪ್ ಮೇಲಿನ ಅನುಮಾನ ನಿವಾರಿಸಿದ ಐಸಿಸಿ
ನವದೆಹಲಿ, ಬುಧವಾರ, 3 ಡಿಸೆಂಬರ್ 2008   ( 16:57 IST )
ಕಳೆದ ವಾರದ ಮುಂಬೈ ಉಗ್ರರ ದಾಳಿಯಿಂದಾಗಿ ಭದ್ರತಾ ಆತಂಕದ ಹಿನ್ನೆಲೆಯಲ್ಲಿ ಉಪಖಂಡ 2011ರ ವಿಶ್ವ ಕಪ್‌ನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂಬಾಗಿನ ವರದಿಗಳನ್ನು ಐಸಿಸಿ ತಳ್ಳಿ ಹಾಕಿದೆ.

ಇದೊಂದು ಮಾಧ್ಯಮ ಕಪೋಕಲ್ಪಿತವಾಗಿದ್ದು, ಅಂತಹ ವರದಿಗಳಿಗೆ ಯಾವುದೇ ಆಧಾರವಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ವಕ್ತಾರ ತಿಳಿಸಿದ್ದಾರೆ. 2011ರ ವಿಶ್ವ ಕಪ್‌ನ್ನು ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಜಂಟಿಯಾಗಿ ಆಯೋಜಿಸುತ್ತಿದೆ.

ಪಾಕಿಸ್ತಾನ, ಭಾರತ ಮತ್ತು ನ್ಯೂಜಿಲ್ಯಾಂಡಿನಲ್ಲಿನ ಹಿರಿಯ ಕ್ರಿಕೆಟ್ ಅಧಿಕಾರಿಗಳೂ ಇಂತಹ ವರದಿ ಅಪಕ್ವವಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ವಕ್ತಾರ ತಿಳಿದ್ದಾರೆ.

ಟೂರ್ನಮೆಂಟಿಗೆ ಇನ್ನೂ 2 ವರೆ ವರ್ಷ ಉಳಿದಿದ್ದು, ಅದರ ಬಗ್ಗೆ ಈಗ ಯೋಚಿಸುವ ಸಮಯವೂ ಅಲ್ಲ. ತಾವು ಈ ಅಭೂತಪೂರ್ವ ಟೂರ್ನಮೆಂಟ್ ನಡೆಯುವ ಬಗ್ಗೆ ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಖಂಡಿತವಾಗಿಯೂ ಸುರಕ್ಷತೆ ಮತ್ತು ಭದ್ರತೆ ಅತಿ ಮುಖ್ಯ ವಿಷಯವಾಗಿದ್ದು, ಇದು ಎಲ್ಲಾ ಸದಸ್ಯ ರಾಷ್ಟ್ರಗಳಿಗೂ ಸಂಬಂಧಿಸಿದ ವಿಷಯವಾಗಿದೆ ಎಂದು ಅವರು ವಿವರಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ದಿಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯವಹಿಸುವುದು: ಸಿಜಿಎಫ್
'ಪಾಂಟಿಂಗ್ ಗಾಯ ವೃತ್ತಿಜೀವನ ಘಾತಕವಲ್ಲ'
ತನ್ವೀರ್ ಮೇಲೆ ಪಿಸಿಬಿ ಗರಂ, ಶಿಸ್ತು ಕ್ರಮ ಸಾಧ್ಯತೆ
ಕ್ರಿಕೆಟ್ ಪ್ರಕ್ಷುಬ್ಧತೆಯನ್ನು ಸೌಮ್ಯಗೊಳಿಸುವುದು: ಮಲಿಕ್
ಭದ್ರತಾ ಪರಿಶೀಲನೆ: ಚೆನ್ನೈಗೆ ಆಗಮಿಸಿದ ಡಿಕ್ಕಸನ್
ಏಕದಿನ ರ‌್ಯಾಂಕಿಂಗ್: ಧೋನಿ ಅಗ್ರಗಣ್ಯ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...