|
| ಭಾರತೀಯ ಫುಟ್ಬಾಲ್ ಆವೇಗ ಪಡೆಯಲು ವಿಫಲ: ಭುಟಿಯಾ |
| ಜೈಪುರ, ಸೋಮವಾರ, 1 ಡಿಸೆಂಬರ್ 2008 ( 11:26 IST ) | |
ರಾಷ್ಟ್ರೀಯ ತಂಡ ಎರಡು ಬಾರಿ (1951 ಮತ್ತು 1962) ಏಷಿಯಾ ಗೇಮ್ಸ್ ಚಿನ್ನವನ್ನು ಗೆದ್ದಿರುವ ಹಾಗೂ 1956ರ ಮೆಲ್ಬೋರ್ನ್ ಒಲಿಂಪಿಕ್ಸ್ನಲ್ಲಿ ನಾಲ್ಕನೇ ಸ್ಥಾನ ಪಡೆದ ಹೊರತಾಗಿಯೂ ದೇಶದಲ್ಲಿ ಫುಟ್ಬಾಲ್ ಆವೇಗ ಪಡೆಯಲು ವಿಫಲವಾಗಿದೆ ಎಂಬುದಾಗಿ ಭಾರತದ ನಾಯಕ ಬೈಚುಂಗ್ ಭುಟಿಯಾ ತಿಳಿಸಿದ್ದಾರೆ.
50ರ ದಶಕದ ಆದಿಯಲ್ಲಿ ತಾವು ಶಕ್ತಿಯುತ ತಂಡವಾಗಿದ್ದು, ಏಷಿಯಾ ಕಿರೀಟವನ್ನು ಗೆದ್ದುಕೊಂಡಿದ್ದಲ್ಲದೆ, 1956 ಮೆಲ್ಬೋರ್ನ್ ಒಲಿಂಪಿಕ್ನಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದ್ದೆವು, ಆದರೂ ಭಾರತೀಯ ಫುಟ್ಬಾಲ್ ಆವೇಗ ಪಡೆಯಲು ವಿಫಲವಾಯಿತು. ಆದರೆ ಗಲ್ಪ್ ದೇಶಗಳು ಹಾಗೂ ಕೆಲ ಏಷಿಯಾ ಖಂಡ ರಾಷ್ಟ್ರಗಳಾದ ಜಪಾನ್ ಈಗ ಇರುವ ಸ್ಥಳಕ್ಕೆ ತಲುಪುವಲ್ಲಿ ತಮ್ಮೆಲ್ಲಾ ಪ್ರಯತ್ನಗಳನ್ನು ಪಟ್ಟರು ಎಂದು ಭುಟಿಯಾ ತಿಳಿಸಿದ್ದಾರೆ.
ಮೂಲಭೂತ ಸೌಕರ್ಯ ಅಭಿವೃದ್ಧಿ ರೂಪದಲ್ಲಿ ಭಾರತೀಯ ಫುಟ್ಬಾಲ್ಗಾಗಿ ಅನೇಕ ಕಾರ್ಯಗಳನ್ನು ಮಾಡಬಹುದಾಗಿತ್ತು ಎಂದು ವಾದಿಸಿದ ಭುಟಿಯಾ, ದೇಶದಲ್ಲಿನ ಫುಟ್ಬಾಲ್ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಅಖಿಲ ಭಾರತೀಯ ಫುಟ್ಬಾಲ್ ಒಕ್ಕೂಟದ ಪಾತ್ರದ ಬಗ್ಗೆ ರಕ್ಷಣಾತ್ಮಕವಾಗಿ ಮಾತನಾಡಿದರು.
ಪಿಪಾ ಭಾರತಕ್ಕಾಗಿ ಎಷ್ಟು ಹಣವನ್ನು ನೀಡುತ್ತಿದೆ ಎಂಬುದು ತನಗೆ ತಿಳಿದಿಲ್ಲ ಆದರೆ, ಎಐಎಫ್ಎಫ್ ಇದನ್ನು ಸಂಪೂರ್ಣವಾಗಿ ಬಳಸುತ್ತಿದೆ. ಇನ್ನೂ ಅಧಿಕ ಹಣದ ಅಗತ್ಯವಿದೆ. ಭಾರತೀಯ ಫುಟ್ಬಾಲನ್ನು ಉತ್ತೇಜಿಸುವಲ್ಲಿ ಎಐಎಫ್ಎಫ್, ಸರಕಾರ, ಕೊರ್ಪರೇಟ್ ಕ್ಷೇತ್ರ ಒಟ್ಟಾಗಿ ಶ್ರಮವಹಿಸಬೇಕು ಎಂದು ತಿಳಿಸಿದರು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|