|
| ಕುಂಬ್ಳೆ ಗಾಯ ಗಂಭೀರ ಸ್ವರೂಪದ್ದಲ್ಲ |
| ಬೆಂಗಳೂರು, ಸೋಮವಾರ, 13 ಅಕ್ಟೋಬರ್ 2008 ( 12:31 IST ) | |
ಅನಿಲ್ ಕುಂಬ್ಳೆಯ ಭುಜ ನೋವು ಗಂಭೀರ ಸ್ವರೂಪದ್ದಲ್ಲ ಎಂದು ಹೇಳಿರುವ ಭಾರತೀಯ ತಂಡದ ಆಡಳಿತ, ಅವರು ಪ್ರಸಕ್ತ ನಿಗಾವಣೆಯಲ್ಲಿದ್ದಾರೆ ಎಂದು ತಿಳಿಸಿದೆ.
ಅನಿಲ್ ಇಲ್ಲೇ ಇದ್ದು, ಅವರು ಪರೀಕ್ಷೆಗಾಗಿ ಆಸ್ಪತ್ರೆಗೆ ಹೋಗಿಲ್ಲ. ಇದು ಗಂಭೀರ ಸ್ವರೂಪದ ಗಾಯವಲ್ಲ ಮತ್ತು ಒಂದು ಸಾರಿ ನೋವು ನಿವಾರಣೆಯಾದ ಕೂಡಲೇ ಅವರು ಮೈದಾನಕ್ಕೆ ವಾಪಸಾಗಲಿದ್ದಾರೆ. ಒಂದು ವೇಳೆ ಗಾಯ ಗಂಭೀರ ಸ್ವರೂಪದ್ದಾದರೆ ತಾವು ನಿಮಗೆ ಖಂಡಿತವಾಗಿಯೂ ತಿಳಿಸಲಿದ್ದೇವೆ ಎಂದು ಭಾರತೀಯ ತಂಡದ ಲಾಗಿಸ್ಟಿಕ್ ವ್ಯವಸ್ಥಾಪಕ ರಸ್ಸೆಲ್ ರಾಧಾಕೃಷ್ಣನ್ ಹೇಳಿದರು.
ಶನಿವಾರದಂದು ನೋವುನಿವಾರಕ ಚುಚ್ಚುಮದ್ದು ತೆಗೆದುಕೊಂಡ ಬಳಿಕ ನಾಯಕ ಕುಂಬ್ಳೆ ತಮ್ಮ ಸಹಜ 8ನೇ ಕ್ರಮಾಂಕದ ಬದಲು 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದರು. ಭಾರತ ಬೌಲಿಂಗ್ಗೆ ಇಳಿದಾಗ ಅವರು ಮೈಧಾನಕ್ಕೆ ಬಂದಿರಲಿಲ್ಲ.
ಎರಡನೇ ಸೆಶನ್ ಸಂದರ್ಭ ಕುಂಬ್ಳೆ ಮೈದಾನಕ್ಕೆ ವಾಪಸಾತಿ ಮಾಡಿದ್ದರು, ಆದರೆ ಟೀ ಬಿಡುವಿನ ವರೆಗೂ ಅವರಿಗೆ ಬೌಲಿಂಗ್ ಮಾಡಲು ಸಾಧ್ಯವಾಗಿರಲಿಲ್ಲ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|