|
| ಫುಟ್ಬಾಲ್: 1-1ರಲ್ಲಿ ಭಾರತ, ಮಲೇಷ್ಯಾ ಪಂದ್ಯ ಡ್ರಾ |
| ಹೈದರಾಬಾದ್, ಬುಧವಾರ, 23 ಜುಲೈ 2008 ( 11:50 IST ) | |
ಭಾರತ ಮತ್ತು ಮಲೇಷ್ಯಾ ನಡುವೆ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ನಡೆದ ಸ್ನೇಹಾರ್ಥ ಫುಟ್ಬಾಲ್ ಪಂದ್ಯ 1-1ರ ಡ್ರಾನಲ್ಲಿ ಅಂತ್ಯಗೊಂಡಿತು. ಮಲೇಷ್ಯಾ ಅಂತಿಮ ಕ್ಷಣದಲ್ಲಿ ಹೊಡೆದ ಗೋಲ್ನಿಂದ ತವರು ತಂಡ ಗೆಲುವು ವಂಚಿತವಾಯಿತು. ತಮ್ಮ ಪರ ಬಂದ ಅನೇಕ ಅವಕಾಶಗಳನ್ನು ಭಾರತ ಕೈಚೆಲ್ಲಿತ್ತು.
ಭಾರತ ಪರ ನಾಯಕ ಬೈಚುಂಗ್ ಭುಟಿಯಾ 57ನೇ ನಿಮಿಷದಲ್ಲಿ ಗೋಲ್ ಭಾರಿಸುವ ಮೂಲಕ ತಂದುಕೊಟ್ಟ ಮುನ್ನಡೆ, ಮಲೇಷ್ಯಾದ ಇಂದ್ರ ಪುತ್ರ 80ನೇ ನಿಮಿಷದಲ್ಲಿ ಗೋಲ್ ಹೊಡೆಯುವುದರೊಂದಿಗೆ 1-1ಕ್ಕೆ ಸಮಗೊಂಡಿತು.
ಜುಲೈ 30 ರಿಂದ ಅಗಸ್ಟ್ 10ರ ವೆರೆಗೆ ಇಲ್ಲಿ ನಡೆಯಲಿರುವ ಎಎಫ್ಸಿ ಚಾಲೆಂಜ್ ಕಪ್ಗಾಗಿನ ಭಾರತದ ಸಿದ್ಧತಾ ಭಾಗವಾಗಿ ಈ ಪಂದ್ಯವನ್ನು ಆಡಲಾಯಿತು. ಎರಡೂ ತಂಡಗಳು ಮೊದಲ ಸೆಶನಿನಲ್ಲಿ ಗೋಲ್ರಹಿತವಾಗಿ ಆಡಿದವು. ಈ ವೇಳೆ ಭಾರತ ಕೆಲ ಆಕ್ರಮಣಕಾರಿ ಫುಟ್ಬಾಲ್ ಪ್ರದರ್ಶಿಸಿತು. ಆದರೆ ಗೋಲ್ ಭಾರಿಸುವಲ್ಲಿ ವಿಫಲವಾಯಿತು.
ಫೀಲ್ಡ್ ಗೋಲ್ ಮೂಲಕ ಭಾರತದ ನಾಯಕ ಬೈಚುಂಗ್ ಭುಟಿಯಾ 57ನೇ ನಿಮಿಷದಲ್ಲಿ ಭಾರತ ಪರ ಮೊದಲ ಮುನ್ನಡೆ ತಂದುಕೊಟ್ಟರು. ನಂತರ ಮಲೇಷ್ಯಾ ನಿರಂತರವಾಗಿ ದಾಳಿ ನಡೆಸಿ, ಅಂತಿಮವಾಗಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದು, ಅದನ್ನು ಗೋಲ್ ಆಗಿ ಪರಿವರ್ತಿಸಿತು.
ಭಾರತೀಯ ರಕ್ಷಣಾತ್ಮಕ ಆಟಗಾರರು ಉತ್ತಮ ನಿರ್ವಹಣೆ ತೋರಿದರು ಮತ್ತು ಮಲೇಷ್ಯಾದ ದಾಳಿಗಳನ್ನು ವಿಫಲಗೊಳಿಸಿದರು. ಮಲೇಷ್ಯಾದ ಮೊಹಮ್ಮದ್ ಜಾಕುದ್ನ್ ಅದ್ಧಾ ಮತ್ತು ಭಾರತದ ಅಜಯನ್ಗೆ 75 ಮತ್ತು 79ನೇ ನಿಮಿಷದಲ್ಲಿ ಹಳದಿ ಕಾರ್ಡನ್ನು ತೋರಿಸಲಾಯಿತು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|