|
| 'ಲಿಫ್ಟ್'ನೊಳಗೆ ಸಿಕ್ಕಿಬಿದ್ದ ಸಭಾಪತಿ ವೀರಣ್ಣ! |
| ಬೆಂಗಳೂರು, ಗುರುವಾರ, 21 ಮೇ 2009 ( 12:43 IST ) | |
ಶಿಬಿರದ ಉದ್ಘಾಟನೆಗೆ ಆಗಮಿಸುತ್ತಿದ್ದ ವಿಧಾನಪರಿಷತ್ತಿನ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅವರು ಸುಮಾರು 10ನಿಮಿಷಗಳ ಕಾಲ ಕೃಷಿ ಭವನದ ಲಿಫ್ಟ್ನೊಳಗೆ ಸಿಲುಕಿಕೊಂಡ ಘಟನೆ ಬುಧವಾರ ನಡೆದಿತ್ತು.
ಕಾರ್ಯಕ್ರಮದ ಸಭಾಂಗಣಕ್ಕೆ ತೆರಳಲು ಸಭಾಪತಿಗಳು ಲಿಫ್ಟ್ ಒಳಗೆ ಸೇರಿದ್ದರು, ಆದರೆ ತಾಂತ್ರಿಕ ಲೋಪದಿಂದ ಲಿಫ್ಟ್ ಮುಂದಕ್ಕೆ ಹೋಗಲಿಲ್ಲ. ಇದರಿಂದಾಗಿ ಲಿಫ್ಟ್ ಒಳಗೆ ಸಭಾಪತಿ ಮತ್ತು ಸಂಗಡಿಗರು ಸಿಕ್ಕಿ ಹಾಕಿಕೊಂಡಿದ್ದರಿಂದ ಪೊಲೀಸರು ಮತ್ತು ಸಂಘಟಕರು ಕೆಲ ಕಾಲ ಆತಂತಕ್ಕೆ ಒಳಗಾದರು.
ನಂತರ ಪೊಲೀಸರು ಹಾಗೂ ಭವನದ ಸಿಬ್ಬಂದಿಗಳು ಹರಸಾಹಸ ಮಾಡಿ ಲಿಫ್ಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಲಿಫ್ಟ್ನಿಂದ ಹೊರಬಂದ ವೀರಣ್ಣ ಮತ್ತಿಕಟ್ಟಿ ಅವರು ಉಸಿರುಕಟ್ಟುವಂತಾಗಿತ್ತು ಎಂದು ಪ್ರತಿಕ್ರಿಯಿಸಿದರು. ನಂತರ ಲಿಫ್ಟ್ ಉಸಾಬರಿಯೇ ಬೇಡ ಎಂದು ಮೆಟ್ಟಿಲು ಹತ್ತಿಯೇ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣಕ್ಕೆ ಬಂದರು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವ್ಯವಹಾರ ಚಟುವಟಿಕೆಗಳು ಕೂಡ ಸರಾಸರಿ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ವೈವಾಹಿಕ ವಿಷಯಗಳಿಂದ ಸಂತಸ ಲಭಿಸಲಿದೆ. ಆರೋಗ್ಯ ಯಾವುದೇ ಚಿಂತೆಯ ವಿಷಯವಾಗದು. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡದಲ್ಲಿ ಈ ವಾರ ಸ್ಟಾರ್ ವಾರ್. ದೊಡ್ಡ ನಟರ ಎರಡು ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರೇಕ್ಷಕರ ಪ್ರತಿಕ್ರಿಯೆ ಯಾವ ಚಿತ್ರಕ್ಕೆ ಹೇಗಿರುತ್ತದೆ ಎಂಬುದು |
| |
|
|
|
|
|
|