|
| ಶೃಂಗೇರಿ: ನಕ್ಸಲ್ ಬೆಂಬಲಿಗ ಸುಂದರ್ ಸೆರೆ |
| ಚಿಕ್ಕಮಗಳೂರು, ಶನಿವಾರ, 25 ಏಪ್ರಿಲ್ 2009 ( 18:23 IST ) | |
ನಕ್ಸಲ್ ಸಂಘಟನೆಗೆ ಬೆಂಬಲ ನೀಡಿರುವ ಆರೋಪದ ಮೇಲೆ ಶೃಂಗೇರಿ ತಾಲೂಕಿನ ತಲಿಕೋಡು ನಿವಾಸಿ ಸುಂದರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ನಕ್ಸಲೀಯರ ಸಂರ್ಪಕ ಹೊಂದಿದ್ದ ಶಂಕೆಯ ಮೇಲೆ ಜಯಪುರದ ನಿವಾಸಿ ಶಂಕರ ಗೌಡ ಎಂಬಾತನನ್ನು ಬಂಧಿಸಿದ ಸಂದರ್ಭದಲ್ಲಿ ಆತ ನೀಡಿದ ಮಾಹಿತಿ ಆಧಾರದಲ್ಲಿ ಸುಂದರ್ನನ್ನು ಸೆರೆ ಹಿಡಿಯಲಾಯಿತು ಎಂದು ಹೇಳಿದ್ದಾರೆ.
ಬಂಧಿತ ಸುಂದರ್ನಿಂದ 9 ಜಿಲೆಟಿನ್ ಕಡ್ಡಿ, 5 ಡಿಟೋನೇಟರ್ ಸೇರಿದಂತೆ ಸ್ಫೋಟಕಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್ ತಿಳಿಸಿದ್ದಾರೆ. ಮಾತುವಳ್ಳಿಯಲ್ಲಿ ಮುಂಡಗಾರು ಲತಾ ಸೇರಿದಂತೆ ನಕ್ಸಲೀಯರ ತಂಡವೊಂದು ಪೊಲೀಸರ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಸುಂದರ್ ಭಾಗಿಯಾಗಿರುವ ನಿಟ್ಟಿನಲ್ಲಿ ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದರು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ವೈಯಕ್ತಿಕ ವ್ಯವಹಾರಗಳ ಇತ್ಯರ್ಥಕ್ಕೆ ಸಾಲ ಲಭ್ಯ. ಮನೆಯೂ ನಿಮಗೆ ಮುಖ್ಯ, ನೀವು ಮಾಡಬೇಕಾದ ಕಾರ್ಯಗಳು ಬಹಳ ಇವೆ. ಔತಣ ಕೂಟಗಳಿಗೆ ಆಮಂತ್ರಣ, ವಾಹನ ವಹಿವಾಟುಗಳಲ್ಲಿ ಹಿರಿಯರ ಪ್ರಶಂಸೆ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾದ ಸವಾರಿ ಚಿತ್ರ ಈಗ ವಿವಾದಕ್ಕೆ ಕಾರಣವಾಗಿದೆ. ಚಿತ್ರ ಅಷ್ಟೇನು ಹಿಟ್ ಆಗದಿದ್ರು ಚಿತ್ರದ ಹಾಡುಗಳು ಮಾತ್ರ ಎಲ್ಲರ ಬಾಯಲ್ಲು ಗುನುಗುತ್ತಿದೆ. ಅದರಲ್ಲೂ |
| |
|
|
|
|
|
|