|
| ಸತ್ಯಂ ಹಗರಣ ಐಟಿ ಕಂಪೆನಿಗಳಿಗೆ ಎಚ್ಚರಿಕೆ: ಮೂರ್ತಿ |
| ಬೆಂಗಳೂರು, 8 ಜನವರಿ 2009 ( 14:29 IST ) | |
ರಾಷ್ಟ್ರದ ಅತೀ ದೊಡ್ಡ ಕಾರ್ಪೊರೇಟ್ ಹಗರಣವಾದ ಸತ್ಯಂ ಕಂಪ್ಯೂಟರ್ ಅವ್ಯವಹಾರದಿಂದ ಎಚ್ಚೆತ್ತುಕೊಳ್ಳುವಂತೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಇತರೆ ಕಂಪನಿಗಳಿಗೆ ಸೂಚಿಸಿದ್ದಾರೆ.ಸತ್ಯಂ ಕಂಪ್ಯೂಟರ್ಸ್ ಬೆಳವಣಿಗೆ ಆಘಾತಕಾರಿ, ನೋವಿನ ಸಂಗತಿ ಮತ್ತು ಐಟಿ ಕ್ಷೇತ್ರದ ಇತರ ಕಂಪೆನಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಮೂರ್ತಿ ಹೇಳಿದ್ದಾರೆ.
ಎಲ್ಲ ಆಡಳಿತಮಂಡಳಿಗಳಿಗೆ ಸತ್ಯಂ ವಿದ್ಯಮಾನ ಅತ್ಯುತ್ತಮ ಎಚ್ಚರಿಕೆಯ ಸಂಜ್ಞೆಯಾಗಿದೆ ಎಂದು ಇನ್ಫೋಸಿಸ್ ಕಾರ್ಯನಿರ್ವಾಹಕೇತರ ಅಧ್ಯಕ್ಷ ಮೂರ್ತಿ ತಿಳಿಸಿದರು. ಪ್ರಮುಖ ಸಾಫ್ಟ್ವೇರ್ ಕಂಪೆನಿಯ ವಿದ್ಯಮಾನದಿಂದ ತಾವು ಆಘಾತಕ್ಕೆ ಒಳಗಾಗಿದ್ದಾಗಿ ಅವರು ಹೇಳಿದರು. ಇದು ಆಡಳಿತದ ಸಂಪೂರ್ಣ ವೈಫಲ್ಯವಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಇದರ ಆಳಕ್ಕೆಇಳಿದು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಕೇವಲ ಸತ್ಯಂ ಒಂದೇ ಇಡೀ ಸಾಫ್ಟ್ವೇರ್ ಉದ್ಯಮವನ್ನು ಒಳಗೊಂಡಿಲ್ಲ. ಇದೊಂದು ಏಕೈಕ ಪ್ರಕರಣವೆಂದು ತಾವು ನಂಬುವುದಾಗಿ ಅವರು ಹೇಳಿದ್ದಾರೆ. ಈ ರಾಷ್ಟ್ರದಲ್ಲಿ ಪ್ರಾಮಾಣಿಕ ಆಡಳಿತಮಂಡಳಿಗಳು ಮತ್ತು ಉತ್ತಮ ಕಂಪೆನಿಗಳಿವೆಂದು ವಿದೇಶಿ ಹೂಡಿಕೆದಾರರು ಅರಿಯಬೇಕು ಎಂದು ಮೂರ್ತಿ ಹೇಳಿದ್ದಾರೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ |
| |
|
|
|
|
|
|
|