ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಕಸಬ್‌ಗೆ ಮಹ್ಮದ್ ಗೌಸ್ ಸಹಪಾಠಿ
ಬೆಂಗಳೂರು, ಗುರುವಾರ, 4 ಡಿಸೆಂಬರ್ 2008   ( 16:25 IST )
ಉಗ್ರರಿಗೂ ಕರ್ನಾಟಕ ರಾಜ್ಯಕ್ಕೂ ಎಲ್ಲಿಲ್ಲದ ಸಂಬಂಧ. ಇದೀಗ ಮುಂಬೈ ದಾಳಿ ಪ್ರಕರಣದಲ್ಲೂ ರಾಜ್ಯದ ಪಾಲಿದೆ. ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಏಕೈಕ ಉಗ್ರ ಕಸಬ್‌ನ ಸಹಪಾಠಿ ಹೊನ್ನಾಳಿಯಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿರುವ ಲಷ್ಕರ ಉಗ್ರ ಮಹ್ಮದ್ ಗೌಸ್ ಎಂಬ ಅಂಶ ಬೆಳಕಿಗೆ ಬಂದಿದೆ.

2005ರಿಂದ 2007ರ ಅವಧಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಬಾದ್‌ನಲ್ಲಿ ಮಹ್ಮದ್ ಗೌಸ್ ಹಾಗೂ ಮಹ್ಮದ್ ಅಜ್ಮಲ್ ಅಮನ್ ಕಸಬ್ ಜೊತೆಯಲ್ಲಿ ತರಬೇತಿ ಪಡೆದಿರುವ ಅಂಶ ಬಹಿರಂಗಗೊಂಡಿದೆ.

ಅಲ್ಲದೆ, ಹುಬ್ಬಳ್ಳಿಯಲ್ಲಿ ಗೌಸ್ ನೀಡಿರುವ ಹೇಳಿಕೆಗೂ ಕಸಬ್ ನೀಡುತ್ತಿರುವ ಹೇಳಿಕೆಗೂ ಸಾಮ್ಯತೆ ಕಂಡು ಬಂದಿರುವುದರಿಂದ ಈ ಅನುಮಾನಗಳಿಗೆ ಪುಷ್ಠಿ ನೀಡಿವೆ.

ಮಹ್ಮದ್ ಗೌಸ್ ನೌಕಾ ಸಮರ, ಮರುಭೂಮಿ ಹಾಗೂ ಅರಣ್ಯ ಪ್ರದೇಶದಲ್ಲಿ ಯುದ್ಧ ಮಾಡುವುದು, ಸ್ಫೋಟಕ ಬಳಕೆ ಹಾಗೂ ಪೊಲೀಸರ ಜಾಡು ತಪ್ಪಿಸುವ ಕುರಿತು ತರಬೇತಿ ನೀಡಲಾಗಿತ್ತು. ಇದೇ ರೀತಿ ಕಸಬ್ ಕೂಡ ತರಬೇತಿ ಪಡೆದಿದ್ದರೂ, ಇಬ್ಬರಿಗೂ ಬೇರೆ ಬೇರೆ ರೀತಿಯ ಜವಾಬ್ದಾರಿ ಹೊರಿಸಲಾಗಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಡಿ. 4ರಿಂದ ಬೆಂಗಳೂರು ಹಬ್ಬ
ಬೆಂಗಳೂರು ದಾಳಿಗೆ ಕೌಂಟ್ ಡೌನ್
ಎನ್ಎಸ್‌ಜಿ ಪಡೆ ನೀಡುವಂತೆ ಕೇಂದ್ರಕ್ಕೆ ಸಿಎಂ ಮನವಿ
ವಿಧಾನಸಭಾ ಉಪಚುನಾವಣೆ: ಹೈಕಮಾಂಡ್ ಬುಲಾವ್
ಪ್ರತಿಭಾ ಪಲಾಯನ ತಡೆಗೆ ಪೂರಕ ವ್ಯವಸ್ಥೆ ಅಗತ್ಯ: ಸಿಂಗ್
ಎಡಪಕ್ಷಗಳ ಜೊತೆಗೂಡಿ ಹೋರಾಟಕ್ಕೆ ಜೆಡಿಎಸ್ ಸಜ್ಜು
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಎಡಪಕ್ಷಗಳ ಜೊತೆಗೂಡಿ ಹೋರಾಟಕ್ಕೆ ಜೆಡಿಎಸ್ ಸಜ್ಜು
ರಾಜ್ಯದ ಎಂಟು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ತೀರ್ಮಾನಿಸಿದೆ.
ಎನ್ಎಸ್‌ಜಿ ಪಡೆ ನೀಡುವಂತೆ ಕೇಂದ್ರಕ್ಕೆ ಸಿಎಂ ಮನವಿ
ಬೆಂಗಳೂರು ದಾಳಿಗೆ ಕೌಂಟ್ ಡೌನ್
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...