|
| ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಬಲಿಪಶುಗಳು |
| ಬೆಂಗಳೂರು, ಶುಕ್ರವಾರ, 5 ಸೆಪ್ಟೆಂಬರ್ 2008 ( 16:14 IST ) | |
36 ವರ್ಷ ವಯಸ್ಸಿನ ರಷೀದ್ ಹುಸೇನ್ ಅವರನ್ನು ಜೈಪುರ ಸ್ಫೋಟ ತನಿಖೆಗೆ ಸಂಬಂಧಿಸಿದಂತೆ ಪ್ರಶ್ನಿಸಲು ಪೊಲೀಸರು 8 ದಿನಗಳವರೆಗೆ ವಶಕ್ಕೆ ತೆಗೆದುಕೊಂಡಿದ್ದರು. ಇನ್ಫೋಸಿಸ್ ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದ ಅವರನ್ನು ಪೊಲೀಸರು ಬಂಧಿಸಿದ ಕೂಡಲೇ ಸೇವೆಯಿಂದ ವಜಾ ಮಾಡಲಾಯಿತು. ಬಳಿಕ ಪೊಲೀಸರು ಅವರನ್ನು ದೋಷಮುಕ್ತರನ್ನಾಗಿ ಮಾಡಿದ್ದರೂ, ತಾವು ಜೀವಮಾನವಿಡೀ ಕಳಂಕಿತರೆಂದು ಅವರು ನುಡಿಯುತ್ತಾರೆ.
ತಮ್ಮ ಬಂಧನವಾದ ತಕ್ಷಣವೇ ಇನ್ಫೋಸಿಸ್ ತಮ್ಮನ್ನು ಸೇವೆಯಿಂದ ವಜಾಮಾಡಿದ್ದೇಕೆಂದು ಅವರು ಪ್ರಶ್ನಿಸಿದ್ದಾರೆ. ಇಡೀ ಪ್ರಕರಣದ ಬಗ್ಗೆ ತಮ್ಮ ನಿಲುವನ್ನು ವಿವರಿಸಲು ಏಕೆ ಅವಕಾಶ ನೀಡಲಿಲ್ಲ ಎಂದು ರಷೀದ್ ಕೇಳಿದ್ದಾರೆ. ರಾಜ್ಯದಲ್ಲಿ ಭಯೋತ್ಪಾದನೆ ವಿರುದ್ಧ ಸಮರದಲ್ಲಿ ತಾವು ಇತ್ತೀಚಿನ ಬಲಿಪಶು ಎಂದು ರಷೀದ್ ಧ್ವನಿಯಲ್ಲಿ ವಿದ್ಯಾವಂತ ಮುಸ್ಲಿಂ ವೃತ್ತಿಪರರ ಕಳವಳವು ವ್ಯಕ್ತವಾಗಿದೆ.
ತಾಂತ್ರಿಕ ಬೆಂಬಲಕ್ಕಾಗಿ ಭಯೋತ್ಪಾದನೆ ಸಂಘಟನೆಗಳು ಯುವ, ಶಿಕ್ಷಿತ ಮುಸ್ಲಿಂ ಯುವಕರನ್ನು ಸಂಪರ್ಕಿಸುತ್ತಿದ್ದಾರೆ. ಈಗಾಗಲೇ ಅತೃಪ್ತರಾದ ಯುವಕರಿಗಾಗಿ ಅವರು ಶೋಧಿಸುತ್ತಿದ್ದಾರೆಂದು ಭಯೋತ್ಪಾದನೆ ತಜ್ಞ ಮೇಜರ್ ಜನರಲ್ಲ ಅಫ್ಸೀರ್ ಕರೀಂ ಹೇಳುತ್ತಾರೆ. ಗ್ಲಾಸ್ಗೊ ವಿಮಾನನಿಲ್ದಾಣದ ಮೇಲೆ ದಾಳಿಯ ಬಳಿಕ ಈ ಸಿದ್ಧಾಂತವನ್ನು ನಂಬುವಂತಾಗಿದೆ.
ಕಫೀಲ್ ಮತ್ತು ಸಬೀಲ್ ಅಹ್ಮದ್ ಅವರ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಸಾರವಾದವು. ಇದರ ದುಷ್ಪರಿಣಾಮಗಳು ಭಾರತದಲ್ಲಿ ಕೂಡ ವ್ಯಕ್ತವಾಗಿ ರಷೀದ್ ಮುಂತಾದ ವ್ಯಕ್ತಿಗಳು ಭಯೋತ್ಪಾದನೆ ರೇಡಾರ್ ಅಡಿಯಲ್ಲಿದ್ದಾರೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ. |
| |
|
|
|
|
|
|
|