|
| ಬಿಹಾರದಲ್ಲಿ ಪ್ರವಾಹ: ರಾಜ್ಯದಿಂದ ಸಹಾಯ ಹಸ್ತ |
| ಬೆಂಗಳೂರು, ಸೋಮವಾರ, 1 ಸೆಪ್ಟೆಂಬರ್ 2008 ( 19:29 IST ) | |
ಪ್ರವಾಹದಿಂದ ತತ್ತರಿಸಿರುವ ಬಿಹಾರ ರಾಜ್ಯಕ್ಕೆ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಶೀಘ್ರವೇ ಆಹಾರ ದಾಸ್ತಾನು ಸೇರಿದಂತೆ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು ಎಂದು ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ ಘೋಷಿಸಿದ್ದಾರೆ.
ನಗರದಲ್ಲಿ ಇಂದು(ಸೋಮವಾರ) ವಿವರಣೆ ನೀಡಿದ ಅವರು, ರಾಜ್ಯವು ಬಿಹಾರ ಸಂತ್ರಸ್ತರಿಗೆ 10ಕೋಟಿ ರೂ. ನಗದು ನೀಡಲು ಸರ್ಕಾರ ನಿರ್ಧರಿಸಿದೆ. ಅಂತೆಯೇ, ಕಂಬಳಿ, ಟೆಂಟ್, 10 ಟನ್ ಹಾಲಿನ ಪುಡಿ, ದೋಣಿ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳನ್ನು ಕಳುಹಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೆ, ರಾಜ್ಯದಿಂದ ಪರಿಹಾರ ತಂಡ ಕಳುಹಿಸುವ ಚಿಂತನೆ ನಡೆಸಿದ್ದು, ಶೀಘ್ರವೇ ಈ ಕುರಿತು ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು. ಬಿಹಾರ 16 ಜಿಲ್ಲೆಗಳು ಪ್ರವಾಹದಿಂದ ಸಂಪೂರ್ಣ ಜಲಾವೃತ್ತಗೊಂಡಿದ್ದು, ಈ ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮನಸ್ಸಿನ ಬಯಕೆ ಗಳಿಸಲು ಕೌಟುಂಬಿಕ ಸಂಬಂಧಗಳು ಪ್ರಮುಖ ಪಾತ್ರವಹಿಸುತ್ತವೆ. ಒಳ್ಳೆಯ ಕ್ಷಣಗಳಿಗಾಗಿ ತವಕಿಸುವ ನಿಮ್ಮ ಆಸೆ ಇಂದು ಮೇರುಮಟ್ಟಕ್ಕೇರುತ್ತದೆ. ಹೊಸ ಕೆಲಸ ಅಥವಾ ಯೋಜನೆ ಆರಂಭಿಸಲು ಸಂದರ್ಭಗಳು ಏರ್ಪಡುತ್ತವೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಾಯಕ ಬಸ್ ಚಾಲಕ. ಇವನು ಮಹಾರಾಣಿಯಂತಿರುವ ಹುಡುಗಿಯನ್ನು ಮದುವೆಯಾಗಬೇಕೆಂದು ಕನಸಿನ ಗೋಪುರ ಕಟ್ಟಿರುತ್ತಾನೆ. ಒಂದು ದಿನ ಆಕಸ್ಮಿಕವಾಗಿ ಈತನ ಕನಸಿನ ಕನ್ಯೆ ಬಸ್ಸು ಹತ್ತುತ್ತಾಳೆ. ನಾಯಕ ಕ್ಲೀನ್ ಬೋಲ್ಡ್. ಇಬ್ಬರಲ್ಲೂ ಪ್ರೀತಿ ಉಕ್ಕುತ್ತದೆ |
| |
|
|
|
|
|
|
|