ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಕಲ್ಲುಗಣಿ ಸ್ಫೋಟದಲ್ಲಿ ಮೃತಗೊಂಡ ಮಹಿಳೆ
ಬೆಂಗಳೂರು, ಗುರುವಾರ, 24 ಜುಲೈ 2008   ( 12:36 IST )
ಚಿಕ್ಕಜಾಲ ಸಮೀಪದ ಕಲ್ಲಿನ ಕ್ವಾರಿಯಲ್ಲಿ ಸಂಭವಿಸಿದ ಸರಣಿ ಸ್ಫೋಟದಲ್ಲಿ, ತಮಿಳುನಾಡಿಗೆ ಸೇರಿದ ಒಬ್ಬ ಮಹಿಳೆ ಮತ್ತು ಇತರ 15 ಮಂದಿ ಗಾಯಗೊಂಡಿರುವ ಭೀಕರ ಘಟನೆ ನಡೆದಿದೆ.

ಬುಧವಾರ ಸಂಜೆ 4.10ರ ಸುಮಾರಿನಲ್ಲಿ ಬೆಟ್ಟ ಹಲಸೂರಿನ ಸಮೀಪದಲ್ಲಿ ಈ ಘಟನೆಯು ಸಂಭವಿಸಿತು. ಇಲ್ಲಿನ ಕಲ್ಲು ಗಣಿಯಲ್ಲಿ ಜಿಲೆಟಿನ್‌ಗಳನ್ನು ಇಟ್ಟಿದ್ದು, ಅವುಗಳನ್ನು ಸಂಜೆ 5ರಿಂದ 6 ಗಂಟೆಯ ನಡುವೆ ಸ್ಫೋಟಿಸುವಂತೆ ನಿಗದಿಗೊಳಿಸಲಾಗಿತ್ತು.

ಇದೇ ಕಾರಣದಿಂದ ಇಲ್ಲಿ ಇಟ್ಟಿದ್ದ ಕಲ್ಲುಗಳನ್ನು ಸಾಗಿಸಲು ವ್ಯವಸ್ಥೆ ಮಾಡಲಾಗಿತ್ತು ಮತ್ತು ಈ ಪ್ರದೇಶವನ್ನು ಬಿಟ್ಟು ತೆರಳಲು ಕೂಲಿಕಾರರು ಸಿದ್ಧರಾಗಿದ್ದರು. ಆದರೆ ನಿಗದಿತ ಸಮಯಕ್ಕಿಂತಲೂ ಮೊದಲೇ ಸ್ಫೋಟಗೊಂಡ ಜಿಲೆಟಿನ್ ಅನಾಹುತಕ್ಕೆ ಕಾರಣವಾಯಿತು.

ಈ ದುರ್ಘಟನೆಯಲ್ಲಿ ತಮಿಳುನಾಡಿಗೆ ಸೇರಿದ ಪಳನಿಯಮ್ಮ(32) ಎನ್ನುವ ಮಹಿಳೆ ಮೃತಳಾಗಿದ್ದಾಳೆ. ಅದೇ ರೀತಿ ವೆಂಕಟಾಚಲಯ್ಯ(31) ಎನ್ನುವ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾನೆ. ಆತನನ್ನು ಸಮೀಪದ ದೇವಸಂದ್ರದ ಆಸ್ಪತ್ರೆಗೆ ಸೇರಿಸಲಾಗಿದೆ.

ಈ ಘಟನೆಯಲ್ಲಿ ಇನ್ನೂ 14 ಮಂದಿಯು ಗಾಯಗೊಂಡಿದ್ದು, ಅವರಲ್ಲಿ ಏಳು ಮಂದಿಯ ಸ್ಥಿತಿಯು ಗಂಭೀರವಾಗಿದ್ದು ಅವರನ್ನು ಹತ್ತಿರವಿರುವ ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪೇದೆಗಳಿಗೆ ಇರಿದು ತಪ್ಪಿಸಿಕೊಂಡ ಅಪರಾಧಿ
ರಾಜ್ಯದಲ್ಲಿ ಹೆಚ್ಚಲಿರುವ ವಿದ್ಯುತ್ ಕಡಿತ
ಮಳೆಗೆ ಅವ್ಯವಸ್ಥೆ ಆಗರವಾಗುವ ಮಾರುಕಟ್ಟೆ
ಬಗೆಹರಿಯದ ಎಚ್ಎಎಲ್ ಗೊಂದಲ
ಜಾರಿಗೆ ಬರಲಿದೆ ಮೊಬೈಲ್ ಕ್ಯಾಷ್ ಸೇವೆ
ರೇಸ್‌ಕೋರ್ಸ್ ಬೇರೆಡೆ ಸ್ಥಳಾಂತರಕ್ಕೆ ಪರಿಶೀಲನೆ
ಗ್ರಹ ಗತಿ
ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
pti
 
ಸಿಪಿಎಂನಿಂದ ಸೋಮನಾಥ್ ಚಟರ್ಜಿ ಉಚ್ಚಾಟನೆ
ಸಂಸತ್ತಿನಲ್ಲಿ ವಿಶ್ವಾಸಮತ ಗೊತ್ತುವಳಿಯಲ್ಲಿ ಪಕ್ಷದ ಆದೇಶವನ್ನು....
ವಿಶ್ವಾಸಮತ-ಇಬ್ಬರು ಎನ್‌ಡಿಎ ಸಂಸದರು ನಾಪತ್ತೆ
ಬಿಜೆಪಿ ವಿಪ್ ಉಲ್ಲಂಘನೆ: 8 ಸದಸ್ಯರ ಉಚ್ಚಾಟನೆ
ಮನರಂಜನೆ
ಚಿತ್ರ ಸುದ್ದಿ - ಆಕೆ ರಿಯಲ್ ಲೈಫ್‌ನಲ್ಲಿ ತುಂಬಾ ಮಾಡರ್ನ್ ಹುಡುಗಿ. ಆದರೆ ರೀಲಿನಲ್ಲಿ ಮಾತ್ರ ಲಂಗಧಾವಣಿ ಹಾಕುವಂತಹ ಬೆಡಗಿ. ಈ ಹಿಂದೆ ಯಾವತ್ತೂ ಲಂಗಧಾವಣಿ ಹಾಕದ ರಮ್ಯಾ ಬಾರ್ನಾ 'ನನ್ನೆದಯ ಹಾಡು' ಚಿತ್ರಕ್ಕಾಗಿ ಲಂಗಧಾವಣಿ ತೊಟ್ಟಿದ್ದಾರೆ.
ಮುಂದೆ ಓದಿ|ಮತ್ತಷ್ಟು...