|
| ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದ ಪೊಲೀಸರು |
| ಬೆಂಗಳೂರು, ಶನಿವಾರ, 19 ಜುಲೈ 2008 ( 13:29 IST ) | |
ತಾವು ಹಿಂದುಳಿದ ವರ್ಗದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದವರೆಂದು ನಕಲಿ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿ, ಸರ್ಕಾರಿ ಸವಲತ್ತುಗಳನ್ನು ಪಡೆದುಕೊಂಡ ಪೊಲೀಸ್ ಮಂದಿಯ ಕತೆ ಇದು.
ಇವರಲ್ಲಿ ಕೆಲವು ಮಂದಿ ಇನ್ನೂ ಸರ್ಕಾರಿ ಹುದ್ದೆಯಲ್ಲಿ ಮುಂದುವರೆದಿದ್ದರೆ ಮತ್ತೆ ಕೆಲವು ಈ ಹುದ್ದೆಯಿಂದ ನಿವೃತ್ತಿಯೂ ಆಗಿ ಹೋಗಿದ್ದಾರೆ. ಆದರೆ ಕೆಲವೊಂದು ಅಂಶಗಳ ಆಧಾರದ ಮೇಲೆ ಅವರು ಕಾನೂನಿನ ಕೈಗೆ ಸಿಕ್ಕಿಬಿದ್ದಿದ್ದಾರೆ.
ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ(ಡಿಸಿಆರ್ಇ), ಇಂತಹ ಸುಮಾರು 1500 ದೂರುಗಳನ್ನು ಪರಿಶೀಲಿಸುತ್ತಿದೆ. ಇದೇ ಕಾರಣದಿಂದಲೇ, ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಇಲಾಖೆಯಲ್ಲಿ ಹುದ್ದೆಯನ್ನು ಪಡೆದಿರುವ 10 ಮಂದಿ ಪೊಲೀಸರ ವಿರುದ್ಧ ಆರೋಪ ದಾಖಲಿಸಿದೆ. ನಿರ್ದೇಶನಾಲಯವು ಈ ಬಗ್ಗೆ ಸರ್ಕಾರಕ್ಕೆ, ಈ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದು, ಅವುಗಳು ಹುದ್ದೆಯಿಂದ ಅವರನ್ನು ರದ್ದುಗೊಳಿಸುವುದರಿಂದ ಹಿಡಿದು ಅವರ ಆಸ್ತಿಯನ್ನು ವಶಪಡಿಸಿಕೊಳ್ಳುವುದು ಮತ್ತು ಅವರ ಬಡ್ತಿಯನ್ನು ಅನ್ನು ತಡೆಹಿಡಿಯುವುದು ಸೇರಿದೆ. ಈ ವಿಷಯವನ್ನು ಲೋಕಾಯುಕ್ತ ,ಎಸ್.ಪ್ರಕಾಶ್ ತನಿಖೆ ಮಾಡುತ್ತಿದ್ದು, ಇವರ ಸೌಲಭ್ಯಗಳನ್ನು ನಿಲ್ಲಿಸಬೇಕೆಂದು ಹಾಗೂ ಇವರಲ್ಲಿ ನಿವೃತ್ತರಾಗಿರುವ ನಾಲ್ಕು ಮಂದಿಯ ನಿವೃತ್ತಿ ಬಳಿಕದ ಸೇವೆಯನ್ನು ತಡೆಹಿಡಿಯಬೇಕೆಂದು ತಿಳಿಸಿದ್ದಾರೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|