|
| ಹಳ್ಳಿಗಾಡಿನ ಜನರತ್ತ ಸರ್ಕಾರದ ದೃಷ್ಟಿ |
| ಬೆಂಗಳೂರು, ಗುರುವಾರ, 17 ಜುಲೈ 2008 ( 19:37 IST ) | |
ಯಡಿಯೂರಪ್ಪ ತಮ್ಮ ಬಜೆಟ್ನಲ್ಲಿ ಹಳ್ಳಿಗಾಡಿನ ಜನರತ್ತ ದೃಷ್ಟಿ ನೆಟ್ಟಿರುವುದು ಸ್ಪಷ್ಟವಾಗಿದೆ. ಹಳ್ಳಿ ಜನರ ಬದುಕು ಸುಧಾರಿಸಲು ಅವರು ಹಲವು ಕಾರ್ಯಕ್ರಮಗಳನ್ನು ಘೋಷಿಸಿರುವುದು ಇದಕ್ಕೆ ಸಾಕ್ಷಿ.
ರೈತರ ಮುಖ್ಯಕಸುಬಾಗಿ ಗ್ರಾಮೀಣ ಜನರ ಜೀವನ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಹೈನುಗಾರಿಕೆಗೆ ಪ್ರೋತ್ಸಾಹಧನವಾಗಿ ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ ಪ್ರೋತ್ಸಾಹ ಧನ ಘೋಷಿಸಿದ್ದಾರೆ.
ತಾಲೂಕು ಕೇಂದ್ರಗಳ ಸ್ತ್ರೀಶಕ್ತಿ ಭನವ ನಿಮಾಣಕ್ಕೆ 7.5 ಕೋಟಿ ಮೀಸಲಿಟ್ಟಿರುವುದಲ್ಲದೆ ಸ್ತ್ರೀಶಕ್ತಿ ಗುಂಪುಗಳಿಗೆ ಶೇ.6ರ ದರದಲ್ಲಿ ಸಾಲ ವಿತರಿಸಲು ಸರ್ಕಾರ ನಿರ್ಧರಿಸಿದೆ.
ಗ್ರಾ.ಪ. ಸದಸ್ಯರಿಗೆ ಮಾಸಿಕ ಗೌರವ ಧನ ನೀಡುವ ಮೂಲಕ ಗ್ರಾಮೀಣ ಜನರ ಮನಗೆಲ್ಲಲು ಯಡಿಯೂರಪ್ಪ ಪ್ರಯತ್ನಿಸಿದ್ದಾರೆ. ಇದಲ್ಲದೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸೈಬರ್ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ.
ಮಹಿಳೆಯರ ಆರೋಗ್ಯ ಕಾಪಾಡುವತ್ತ ಹೆಚ್ಚಿನ ಗಮನ ಹರಿಸಿರುವ ಯಡಿಯೂರಪ್ಪ, ತಾಯಿಭಾಗ್ಯ ಯೋಜನೆಗೆ 38 ಕೋಟಿ ಘೋಷಣೆ ಮಾಡಿದ್ದಾರೆ.
ಮಕ್ಕಳಿಗಾಗಿ ಬಾಲವಿಕಾಸ ಅಕಾಡಮಿ ಸ್ಥಾಪನೆ, ಗ್ರಾಮೀಣ ಪ್ರದೇಶದಲ್ಲಿ ಆಂಬುಲೆನ್ಸ್ ವ್ಯವಸ್ಥೆ, ಭಾಗಲಕ್ಷ್ಮಿ ಯೋಜನೆಗೆ 1 ಲಕ್ಷ ರೂಪಾಯಿ, ಆಶ್ರಯ ಮನೆಗಳ ವೆಚ್ಚ 40 ಸಾವಿರಕ್ಕೆ ಏರಿಕೆ,ಹೈಸ್ಕೂಲ್ ಕಾಲೇಜು ಕೊಠಡಿ ನಿರ್ಮಾಣಕ್ಕೆ 163 ಕೋಟಿ ಮೀಸಲಿಟ್ಟಿರುವ ಬಜೆಟ್ನಲ್ಲಿನ ಇತರೆ ಪ್ರಮುಖಾಂಶಗಳು.
ಆದರೆ ಯಡಿಯೂರಪ್ಪನವರು ಹಳ್ಳಿಗಳಲ್ಲಿ ವಿಸ್ಕಿ ಕೇಂದ್ರ ತೆರೆಯುವುದಾಗಿ ಹೇಳಿರುವುದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಹೆಚ್ಚುವರಿ ಮದ್ಯದ ಅಂಗಡಿಗಳಿಗೆ ಹೆಚ್ಚು ಪರವಾನಿಗೆ ನೀಡುವ ವಿಷಯ ಹಳ್ಳಿಗರ ಆರೋಗ್ಯ ಕಾಪಾಡುವುದು ಸಾಧ್ಯವೇ ಎಂದು ಕೇಳುವಂತಾಗಿದೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಸಂಧಾನಕ್ಕೆ ಸಾಧ್ಯವಾಗದ ವಿಷಯವೊಂದು ನಿಮ್ಮ ಕಾರ್ಯವನ್ನು ತ್ರಾಸದಾಯಕವಾಗಿಸಬಹುದು. ನಿಮ್ಮ ವಿರೋಧಿಗಳು ಮತ್ತು ಕಚೇರಿ ಸಹವರ್ತಿಗಳೂ ಕೂಡ ನಿಮ್ಮ ನೈತಿಕ ಬಲವನ್ನು ಒಪ್ಪಿಕೊಳ್ಳುತ್ತಾರೆ. ಅನಿರೀಕ್ಷಿತ ಕ್ಷೇತ್ರಗಳಿಂದ ಸಾಲದ ನೆರವು ನೀವು ಪಡೆಯಲಿದ್ದೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|