ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಸುಖೀದಾಂಪತ್ಯ ನಿಮ್ಮದಾಗಬೇಕೇ?: ಹೆಂಡ್ತಿ ಮಾತು ಕೇಳಿ!
ನವದೆಹಲಿ, 20 ಮೇ 2009   ( 13:28 IST )
ನಿಮ್ಮ ದಾಂಪತ್ಯ ಜೀವನ ಸುಖವಾಗಿರಬೇಕಾದರೆ ನಿಮ್ಮ ಪತ್ನಿಯ ಮಾತನ್ನು ಚಾಚೂ ತಪ್ಪದೆ ಕೇಳಿಬಿಡಿ ಎಂಬುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಪತಿಯರಿಗೆ ಸಲಹೆ ನೀಡಿದೆ.

ನ್ಯಾಯಮ‌ೂರ್ತಿಗಳಾದ ಮಾರ್ಕಾಂಡೇಯ ಕಟ್ಜು ಮತ್ತು ದೀಪಕ್ ವರ್ಮ ಅವರುಗಳನ್ನೊಳಗೊಂಡ ನ್ಯಾಯಪೀಠವು ಹೇಳಿದ ಬುದ್ಧಿ ಮಾತಿದು. ನಿಮ್ಮ ಹೆಂಡತಿ ಹೇಳಿದಂತೆ ಕೇಳದೆ ಇದ್ದರೆ ನೀವು 'ಗಂಡಾಂತರ'ಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದೂ ಅದು ಸಲಹೆ ನೀಡಿದೆ.

"ನಿಮ್ಮ ಪತ್ನಿ ನೀಡುವ ಸಲಹೆ ವಿವೇಚನಾಯುಕ್ತವೋ ಇಲ್ಲವೋ, ಅದನ್ನು ಪತಿ ಒಪ್ಪಿಕೊಳ್ಳಬೇಕು. ನಿಮ್ಮ ಪತ್ನಿ ನಿಮಗೆ ಮುಖವನ್ನು ಅತ್ತ ತಿರುಗಿಸಲು ಹೇಳಿದರೆ ಅತ್ತ ತಿರುಗಿಸಿ. ಇತ್ತ ತಿರುಗಿಸಲು ಹೇಳಿದರೆ, ಸಮ್ಮನೆ ಇತ್ತ ತಿರುಗಿಸಿ, ಹೆಚ್ಚು ಮತಾಡದಿರಿ" ಎಂಬುದಾಗಿ ನ್ಯಾಯಮ‌ೂರ್ತಿಗಳು ಹೇಳಿದರು.

ವಿಮಾನ ಪಡೆಯ ಅಧಿಕಾರಿ ದೀಪಕ್ ಕುಮಾರ್ ಅವರು ತಮ್ಮನ್ನು ತ್ಯಜಿಸಿ ಹೋಗಿರುವ ಪತ್ನಿ ಮನಿಷಾರಿಂದ ವಿಚ್ಛೇದನ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆಗೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ನಾವೆಲ್ಲರೂ ಈ ಸ್ಥಿತಿ ಅನುಭವಿಸುತ್ತಿದ್ದೇವೆ ಎಂಬುದಾಗಿ ಲಘುದಾಟಿಯಲ್ಲಿ ಹೇಳಿ ನ್ಯಾಯಾಲಯದಲ್ಲಿ ನಗುವಿನ ಅಲೆ ಎಬ್ಬಿಸಿದರು.

"ದೀಪಕ್ ಅವರು 17 ವರ್ಷಗಳ ಹಿಂದೆ ವಿವಾಹವಾಗಿದ್ದು, ಪತ್ನಿಯಿಂದ ತೀವ್ರ ತೊಂದರೆ ಅನುಭವಿಸಿದ್ದಾರೆ. ಪತಿಯ ವಿರುದ್ಧ ಆಕೆ ಹಲವಾರು ಸುಳ್ಳು ಅಪರಾಧ ಮೊಕದ್ದಮೆಗಳನ್ನು ಹೂಡಿ ಸತಾಯಿಸುತ್ತಿದ್ದಾರೆ. ಕೆಳ ಹಂತದ ನ್ಯಾಯಾಲಯ ವಿಚ್ಛೇದನ ನೀಡುವಂತೆ ತೀರ್ಪು ನೀಡಿದರೂ ಆಕೆ ವಿಚ್ಛೇದನ ನೀಡುತ್ತಿಲ್ಲ" ಎಂದು ದೀಪಕ್ ಪರ ವಕೀಲರು ವಾದಿಸಿದರು.

ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಪೀಠ ಮುಂದಿನ ಜುಲೈಗೆ ದೂಡಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪ್ರಭಾಕರನ್ ಸಾವು: ರಾಜೀವ್ ಹತ್ಯೆ ಕೇಸು ವಜಾ?
ಯುಪಿಎ ಬೆಂಬಲಕ್ಕೆ ತುದಿಗಾಲಲ್ಲಿ ನಿಂತ ಪಕ್ಷಗಳು
ಮಮತಾ ಮುಂದಿನ ಮುಖ್ಯಮಂತ್ರಿ: ಪ್ರಣವ್ ಭರವಸೆ
ಮತ್ತಷ್ಟು ಆರ್ಥಿಕ ಸುಧಾರಣೆ: ಮನಮೋಹನ್ ಸುಳಿವು
ಅಣುಸಮರ್ಥ ಕ್ಷಿಪಣಿ ಅಗ್ನಿ-II ಯಶಸ್ವೀ ಪರೀಕ್ಷೆ
ಸ್ಪಷ್ಟ ಬಹುಮತ ಸಾಧಿಸಿದ ಏಕೈಕ ಸ್ಥಳೀಯ ಪಕ್ಷ ಬಿಜೆಡಿ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ದೇವೇಗೌಡರ 77ನೇ ಹುಟ್ಟು ಹಬ್ಬ ಆಚರಣೆ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ..
ಜೆಡಿಎಸ್ ಕಾಂಗ್ರೆಸ್ ಜತೆ ವಿಲೀನವಾಗಲಿ: ಡಿವಿಎಸ್
ರಾಜ್ಯವನ್ನು ನಿರ್ಲಕ್ಷಿಸಿದರೆ ಎಚ್ಚರ!: ಯುಪಿಎಗೆ ಸವಾಲ್
ಮನರಂಜನೆ
ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು
ಮುಂದೆ ಓದಿ|ಮತ್ತಷ್ಟು...