ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಅಣುಸಮರ್ಥ ಕ್ಷಿಪಣಿ ಅಗ್ನಿ-II ಯಶಸ್ವೀ ಪರೀಕ್ಷೆ
ಭುವನೇಶ್ವರ, ಮಂಗಳವಾರ, 19 ಮೇ 2009   ( 18:32 IST )
ಒರಿಸ್ಸಾದ ರಕ್ಷಣಾ ನೆಲೆಯಲ್ಲಿ ಭಾರತವು ಮಂಗಳವಾರ ಮುಂಜಾನೆ ಅಣುಸಮರ್ಥ ಕ್ಷಿಪಣಿ ಅಗ್ನಿ-IIರ ಪರೀಕ್ಷಾ ಹಾರಾಟವನ್ನು ಯಶಸ್ವಿಯಾಗಿ ನಡೆಸಿತು ಎಂದು ಅಧಿಕೃತ ಮ‌ೂಲಗಳು ಹೇಳಿವೆ.

2,000 ಕಿಲೋ ಮೀಟರ್ ದೂರ ಚಿಮ್ಮಬಲ್ಲ ಖಂಡಾಂತರ ಕ್ಷಿಪಣಿಯನ್ನು ಭದ್ರಕ್ ಜಿಲ್ಲೆಯ ಧಮಾರ ಸಮೀಪದ ವೀಲರ್ಸ್ ದ್ವೀಪದಲ್ಲಿ ಮುಂಜಾನೆ 10.06ಕ್ಕೆ ಹಾರಿಬಿಡಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

"ಅದು ಬಳಕೆದಾರರ ಪರೀಕ್ಷೆಯಾಗಿತ್ತು. ಸೇನೆಯು ತನ್ನಿಂತಾನೆ ಸ್ವಯಂ ಆಗಿ ಕ್ಷಿಪಣಿಯನ್ನು ಉಡಾಯಿಸಲು ಸನ್ನದ್ಧವಿದೆ ಎಂದು ಆತ್ಮವಿಶ್ವಾಸ ನೀಡುವ ಹಿನ್ನೆಲೆಯಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿದೆ" ಎಂದು ಮೂಲಗಳು ಹೇಳಿವೆ.

ಭಾರತದ ಸಮಗ್ರ ಮಾರ್ಗದರ್ಶನದ ಕ್ಷಿಪಣಿ ಅಭಿವೃದ್ಧಿ ಯೋಜನೆಯಂಗವಾಗಿರುವ ಈ ಅಗ್ನಿ-II ಕ್ಷಿಪಣಿಯು 20 ಮೀಟರ್ ಉದ್ದವಿದೆ. 16 ಟನ್ ತೂಗುವ ಈ ಕ್ಷಿಪಣಿ, ಒಂದು ಸಾವಿರ ಕಿಲೋ ಪೇಲೋಡ್‌ಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಪೇಲೋಡ್‌ಗಳ ಭಾರವನ್ನು ಕುಗ್ಗಿಸಿದಲ್ಲಿ ಈ ಕ್ಷಿಪಣಿಯು 3,000 ಕಿಲೋ ಮೀಟರ್ ದೂರ ಹಾರಬಲ್ಲುದು.

ಇದನ್ನು ರಸ್ತೆ ಹಾಗೂ ರೈಲು ಉಡ್ಡಯಕಗಳ ಮೂಲಕ ಹಾರಿಸಬಹುದಾಗಿದೆ. ಕೇವಲ 15 ನಿಮಿಷಗಳಲ್ಲಿ ಕ್ಷಿಪಣಿಯನ್ನು ಉಡಾವಣೆಗೆ ಸಿದ್ಧಪಡಿಸಬಹುದಾಗಿದೆ. ಅಗ್ನಿ ಕ್ಷಿಪಣಿ ಸರಣಿಗಳ ಅಗ್ನಿ II ಕ್ಷಿಪಣಿಯನ್ನು ಮೊದಲ ಬಾರಿಗೆ 1999ರಲ್ಲಿ ಅದೇ ಸ್ಥಳದಿಂದ ಪರೀಕ್ಷಾರ್ಥ ಉಡಾವಣೆ ನಡೆಸಲಾಗಿತ್ತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸ್ಪಷ್ಟ ಬಹುಮತ ಸಾಧಿಸಿದ ಏಕೈಕ ಸ್ಥಳೀಯ ಪಕ್ಷ ಬಿಜೆಡಿ
ಲೋಕಸಭೆಗೆ 59 ಮಹಿಳಾಮಣಿಗಳ ಆಯ್ಕೆ
ಸೋನಿಯಾ ಸಿಪಿಪಿ ಅಧ್ಯಕ್ಷೆ, ಸಿಂಗ್ ನಾಯಕ
ಯುಪಿಎ ಬೆಂಬಲಕ್ಕೆ ತುದಿಗಾಲಲ್ಲಿ ನಿಂತಿರುವ ಬಿಎಸ್ಪಿ, ಎಸ್ಪಿ
ಕಾಂಗ್ರೆಸ್‌ ಅವಮಾನಿಸುತ್ತಿದೆ: ಲಾಲೂ ಕೂಗು
ರಾಜ್ ಜತೆ ಸಂಬಂಧ ಮುರಿದ ಬಾಳಾಠಾಕ್ರೆ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ದೇವೇಗೌಡರ 77ನೇ ಹುಟ್ಟು ಹಬ್ಬ ಆಚರಣೆ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ..
ಜೆಡಿಎಸ್ ಕಾಂಗ್ರೆಸ್ ಜತೆ ವಿಲೀನವಾಗಲಿ: ಡಿವಿಎಸ್
ರಾಜ್ಯವನ್ನು ನಿರ್ಲಕ್ಷಿಸಿದರೆ ಎಚ್ಚರ!: ಯುಪಿಎಗೆ ಸವಾಲ್
ಮನರಂಜನೆ
ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು
ಮುಂದೆ ಓದಿ|ಮತ್ತಷ್ಟು...