|
| ರಾಜ್ ಜತೆ ಸಂಬಂಧ ಮುರಿದ ಬಾಳಾಠಾಕ್ರೆ |
| ಮುಂಬೈ, ಮಂಗಳವಾರ, 19 ಮೇ 2009 ( 12:19 IST ) | |
ಶಿವಸೇನೆ ತೊರೆದು ದೂರಸರಿದು ಮಹಾರಾಷ್ಟ್ರ ನವನಿರ್ಮಾಣ ಸಮಿತಿ ರಚಿಸಿದ ತನ್ನ ತಮ್ಮನ ಮಗ ರಾಜ್ ಠಾಕ್ರೆ ಜತೆಗಿನ ಎಲ್ಲಾ ಸಂಬಂಧಗಳನ್ನು ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆ ಮುರಿದು ಕೊಂಡಿದ್ದಾರೆ. ರಾಜ್ ಅವರ ಎಂಎನ್ಎಸ್ ಹಾಲಿ ಚುನಾವಣೆಯಲ್ಲಿ ಶಿನಸೇನಾ-ಬಿಜೆಪಿ ಮೈತ್ರಿ ಕೂಟಕ್ಕೆ ನೀಡಿರುವ ತೀವ್ರಹೊಡೆತದಿಂದ ಸಿಟ್ಟುಗೊಂಡಿರುವ ಹಿರಿಯ ಠಾಕ್ರೆ ಈ ನಿರ್ಧಾರಕ್ಕೆ ಬಂದಿದ್ದಾರೆ.
"ಯಾರೇ ಆಗಲಿ, ಮರಾಠಿಗರ ಶತ್ರುಗಳು ನನ್ನ ಶತ್ರುಗಳು" ಎಂಬುದಾಗಿ ಬಾಳಾ ಠಾಕ್ರೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚುನಾವಣೆಯಲ್ಲಿ ಕಳಪೆ ಫಲಿತಾಂಶಕ್ಕೆ ಕಾರಣವೆಂದರೆ, ಎಂಎನ್ಎಸ್ ಅಭ್ಯರ್ಥಿಗಳು ಕಣದಲ್ಲಿದಲ್ಲಿದ್ದ ಶಿವಸೇನಾ ಬಿಜೆಪಿ ಅಭ್ಯರ್ಥಿಗಳ ಸಾಂಪ್ರದಾಯಿಕ ಓಟುಗಳನ್ನು ತಿಂದುದು. ಇದು ವಿರೋಧ ಪಕ್ಷಗಳಿಗೆ ಅನುಕೂಲವಾಗಿದೆ. ಇದರಿಂದ ಹಿರಿಯ ಠಾಕ್ರೆ ವ್ಯಗ್ರಗೊಂಡಿದ್ದಾರೆ.
ಈ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿರುವ ಎಂಎನ್ಎಸ್ ಉಪಾಧ್ಯಕ್ಷ ವಿ. ಸಾರಸ್ವತ್ ಅವರು, ಇದು ದೊಡ್ಡಪ್ಪ ಮತ್ತು ಮಗನ ನಡುವಿನ ವಿಚಾರವಾಗಿದ್ದು, ಈ ಕುರಿತು ಪ್ರತಿಕ್ರಿಯಿಸುವ ಹಕ್ಕು ಇತರರಿಗಿಲ್ಲ ಎಂದು ಹೇಳಿದ್ದಾರೆ.
ಇದೇವೇಳೆ, ರಾಜ್ಯದ ಇತರರಂತೆ ಎಂಎನ್ಎಸ್ ಮರಾಠಿಗರ ಹಿತಾಸಕ್ತಿಯ ಕುರಿತು ಕಾಳಜಿಹೊಂದಿದೆ ಎಂದು ಅವರು ಹೇಳಿದ್ದಾರೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ |
| |
|
|
|
|
|
|