ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಎಂಬಿಎ ವಿದ್ಯಾರ್ಥಿನಿ ಮೇಲೆ ಸಾಮ‌ೂಹಿಕ ಅತ್ಯಾಚಾರ
ನವದೆಹಲಿ, 6 ಜನವರಿ 2009   ( 17:17 IST )
ನೊಯ್ಡಾದಲ್ಲಿ ಎಂಬಿಎ ವಿದ್ಯಾರ್ಥಿನಿಯ ಮೇಲೆ ಸಾಮ‌ೂಹಿಕ ಅತ್ಯಾಚಾರ ದೂರಿಗೆ ಸಂಬಂಧಪಟ್ಟಂತೆ ಉತ್ತರಪ್ರದೇಶ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಎಲ್ಲ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. 'ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದೇವೆ. ಎಲ್ಲ ದುಷ್ಕರ್ಮಿಗಳ ಮೇಲೆ ಕ್ರಮಕೈಗೊಳ್ಳುವ ಬಗ್ಗೆ ನಾವು ಖಾತರಿ ನೀಡುತ್ತೇವೆ' ಎಂದು ಉತ್ತರಪ್ರದೇಶ ಪೊಲೀಸ್ ಪ್ರಧಾನನಿರ್ದೇಶಕ ವಿಕ್ರಂಸಿಂಗ್ ತಿಳಿಸಿದರು.

ಆಂತರಿಕ ಭದ್ರತೆಯ ಬಗ್ಗೆ ಮುಖ್ಯಮಂತ್ರಿಗಳ ಸಮಾವೇಶದ ನೇಪಥ್ಯದಲ್ಲಿ ವರದಿಗಾರರ ಜತೆ ಮಾತನಾಡುತ್ತಾ ಅವರು ಮೇಲಿನ ವಿಷಯ ತಿಳಿಸಿದರು. ದೆಹಲಿಯ ನಿವಾಸಿಯಾದ ದುರ್ದೈವಿಯನ್ನು ಸ್ಕಾರ್ಪಿಯೊ ಕಾರಿನಲ್ಲಿ ಆಗಮಿಸಿದ ಯುವಕರು ತನ್ನ ಸ್ನೇಹಿತೆಯ ಜತೆ ತೆರಳಿದ್ದ ಯುವತಿಯನ್ನು ಅಪಹರಿಸಿದ್ದರು.

ಬಳಿಕ ಅವರು ವಿಭಾಗ 71ಕ್ಕೆ ಆಕೆಯನ್ನು ಕರೆದೊಯ್ದು ಅಲ್ಲಿ ಅತ್ಯಾಚಾರ ಮಾಡಲಾಯಿತೆಂದು ತಿಳಿದುಬಂದಿದೆ.ಅತ್ಯಾಚಾರಕ್ಕೀಡಾದ ಯುವತಿ ಇದಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ಸಲ್ಲಿಸಿದ ಬಳಿಕ ನೊಯ್ಡಾ ಪೊಲೀಸರು ಐವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಅವರ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಅಪಹರಣಕ್ಕೆ ಬಳಸಿದ ಕಾರನ್ನು ಪತ್ತೆಹಚ್ಚಲು ಪೊಲೀಸರನ್ನು ಕಳಿಸಲಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕಸಬ್ ಪೊಲೀಸ್ ಕಸ್ಟಡಿ ಜನವರಿ 19 ತನಕ ವಿಸ್ತರಣೆ
ಉಗ್ರರ ನಿಗ್ರಹಕ್ಕೆ ಕಾರ್ಯಸಾಧ್ಯ ದೃಷ್ಟಿಕೋನ ಅಗತ್ಯ: ಚಿದು
'ಉಗ್ರವಾದವನ್ನು ರಾಷ್ಟ್ರ ನೀತಿಯಾಗಿ ಬಳಸುತ್ತಿರುವ ಪಾಕ್'
ಪತಿಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣದೊಂದಿಗೆ ಪರಾರಿ
ಮುಂಬೈ ದಾಳಿಯಲ್ಲಿ ಪಾಕ್ ಸಂಸ್ಥೆಗಳ ಕೈವಾಡ: ಮೆನನ್
ಜಮ್ಮು ಕಾಶ್ಮೀರ ಸಿಎಂರಾಗಿ ಓಮರ್ ಅಬ್ದುಲ್ಹಾ ಪ್ರಮಾಣ ವಚನ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಚಿರಂಜೀವಿ ಜತೆ ಸಿದ್ದರಾಮಯ್ಯ ಸಾಥ್?
ಕಾಂಗ್ರೆಸ್‌‌ಗೆ ಈಗ ಸಿದ್ದರಾಮಯ್ಯ ನುಂಗಲಾರದ ಬಿಸಿ ತುಪ್ಪವಾಗಿದ್ದು, ಅವರ ಮನವೊಲಿಕೆಗೆ ...
ನಾನು ತಪ್ಪು ಮಾಡಿಲ್ಲ: ಸಿದ್ದರಾಮಯ್ಯ
ಕರ್ನಾಟಕದಲ್ಲಿ ಎಂದಿನಂತೆ ಸಿಇಟಿ ಮುಂದುವರಿಕೆ
ಮನರಂಜನೆ
ಚಿತ್ರ ಸುದ್ದಿ - ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ
ಮುಂದೆ ಓದಿ|ಮತ್ತಷ್ಟು...