|
| ಐಜಿಐಯಲ್ಲಿ ವಿಮಾನ ಹಾರಾಟ ಸಹಜತೆಗೆ |
| ನವದೆಹಲಿ, 5 ಜನವರಿ 2009 ( 13:35 IST ) | |
ಪ್ರತಿಕೂಲ ವಾತಾವರಣ ಮತ್ತು ಕಡಿಮೆ ಪ್ರಯಾಣಿಕ ಹೊರೆಯ ಕಾರಣ ಮುಂಜಾವಿನ ಎರಡು ವಿಮಾನ ಹಾರಾಟ ರದ್ಧು ಪಡಿಸಿರುವುದನ್ನು ಬಿಟ್ಟರೆ, ದಟ್ಟ ಮಂಜಿನಿಂದ ಪ್ರಭಾವಕ್ಕೊಳಗಾದ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯನಿರ್ವಹಣೆ ಇಂದು ನಿರ್ವಿಘ್ನವಾಗಿ ನಡೆಯಿತು.
ದೇಶೀಯ ಹಾಗೂ ಅಂತಾರಾಷ್ಟ್ರೀಯದ ಬಹುತೇಕ ಎಲ್ಲಾ ವಿಮಾನಗಳು ತಮ್ಮ ನಿಗದಿತ ವೇಳಾಪಟ್ಟಿಯನುಸಾರ ಕಾರ್ಯನಿರ್ವಹಿಸುತ್ತಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿನ ಗೋಚರತೆ ಅಧಿಕವಾಗಿದ್ದು, ಪ್ರಮುಖ ರನ್ವೇಯಲ್ಲಿ ಸುಮಾರು 2,000 ಮೀಟರ್ ದಾಖಲಾಗಿದ್ದರೆ, ಹೊಸ ರನ್ವೇಯಲ್ಲಿ ಸುಮಾರು 1,400 ಮೀಟರ್ ಗೋಚರತೆ ಇತ್ತು. ಇದರಿಂದಾಗಿ ವಿಮಾವ ಹಾರಾಟಕ್ಕೆ ಯಾವುದೇ ಅಡಚಣೆಗೊಳಗಾಗಲಿಲ್ಲ ಎಂದು ತಿಳಿಸಿದರು.
ದಟ್ಟ ಮಂಜಿನ ಕಾರಣ ಕಳೆದ ವಾರ ವಿಮಾನ ನಿಲ್ದಾಣದಲ್ಲಿನ ವಿಮಾನ ಹಾರಾಟ ತೀವ್ರ ಅಡಚಣೆಗೊಳಗಾಗಿತ್ತು. ಸುಮಾರು 600 ವಿಮಾನಗಳು ತಡವಾಗಿ ಹಾರಟ ನಡೆಸಿದರೆ, ಸುಮಾರು 100 ವಿಮಾನಗಳನ್ನು ರದ್ಧುಗೊಳಿಸಲಾಗಿತ್ತು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್ಗೆ ಹೊಂದಿಕೆಯಾಗುವುದರಿಂದ |
| |
|
|
|
|
|
|
|