|
| ಮುಂಬೈ ದಾಳಿ ಸಾಕ್ಷ್ಯಾಧಾರ ಪಾಕ್ಗೆ ಹಸ್ತಾಂತರ |
| ನವದೆಹಲಿ, 5 ಜನವರಿ 2009 ( 11:48 IST ) | |
ಮುಂಬೈ ದಾಳಿಗಳ ಬಗ್ಗೆ ಭಾರತ ಸೋಮವಾರ ಪಾಕಿಸ್ತಾನಕ್ಕೆ ಸಾಕ್ಷ್ಯಾಧಾರವನ್ನು ಹಸ್ತಾಂತರಿಸಿದ್ದು, ಪ್ರಾಮಾಣಿಕ ತನಿಖೆಯನ್ನು ನಿರೀಕ್ಷಿಸಿರುವುದಾಗಿ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ತಿಳಿಸಿದ್ದಾರೆ. ಪಾಕಿಸ್ತಾನದ ನೆಲದಿಂದ ಭಯೋತ್ಪಾದನೆ ನಡೆಸಿದ್ದಕ್ಕೆ ಸಂಬಂಧಪಟ್ಟ ಮಾಹಿತಿ ಈ ಸಾಕ್ಷ್ಯಾಧಾರದಲ್ಲಿದ್ದು, ಪಾಕಿಸ್ತಾನ ಸರ್ಕಾರ ಪ್ರಾಮಾಣಿಕವಾಗಿ ಈ ಕುರಿತು ಇನ್ನಷ್ಟು ತನಿಖೆಗಳನ್ನು ಕೈಗೊಳ್ಳುತ್ತದೆಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಬಂಧಿತ ಭಯೋತ್ಪಾದಕ ಕಸಬ್ ಪಾಕಿಸ್ತಾನಕ್ಕೆ ಸೇರಿದವನಲ್ಲವೆಂದು ಪಾಕ್ ವಾದಿಸುತ್ತಲೇ ಬಂದಿದೆ. ಆದರೆ ಕಸಬ್ ಪಾಕಿಸ್ತಾನದವನೆನ್ನುವುದಕ್ಕೆ ತಮ್ಮ ಬಳಿ ಸಾಕ್ಷ್ಯಾಧಾರವಿದೆ ಎಂದು ಭಾರತ ಹೇಳುತ್ತಿದೆ.
ಈಗ ಭಾರತ ಪಾಕ್ಗೆ ಸಾಕ್ಷ್ಯಾಧಾರ ಹಸ್ತಾಂತರ ಮಾಡಿರುವುದರಿಂದ ಈ ಕುರಿತು ಶೀಘ್ರದಲ್ಲೇ ಪಾಕ್ ಕ್ರಮ ಕೈಗೊಳ್ಳಲಾಗುವುದೆಂದು ನಿರೀಕ್ಷಿಸಲಾಗಿದೆ. ವಿದೇಶಾಂಗ ಕಾರ್ಯದರ್ಶಿ ಶಿವಶಂಕರ ಮೆನನ್ ಅವರು ಪಾಕಿಸ್ತಾನ ಹೈಕಮೀಷನರ್ ಶಾಹಿತ್ ಮಲ್ಲಿಕ್ ಅವರನ್ನು ಕರೆಸಿ ಸಾಕ್ಷ್ಯಾಧಾರವನ್ನು ನೀಡಿದರು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್ಗೆ ಹೊಂದಿಕೆಯಾಗುವುದರಿಂದ |
| |
|
|
|
|
|
|
|