ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಭಯೋತ್ಪಾದಕ ಅಡಗುತಾಣ ನಾಶಕ್ಕೆ ಕಲಾಂ ಕರೆ
ಹಮೀರ್‌ಪುರ್, 4 ಜನವರಿ 2009   ( 11:46 IST )
ರಾಷ್ಟ್ರದ ಒಳಗೆ ಮತ್ತು ಹೊರಗೆ ಉಗ್ರಗಾಮಿಗಳ ಅಡಗುತಾಣಗಳ ಮೇಲೆ ದಾಳಿ ಮತ್ತು ನಾಶಮಾಡುವುದು ಸೇರಿದಂತೆ ಮ‌ೂರು ಹಂತದ ಕಾರ್ಯತಂತ್ರವನ್ನು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಶನಿವಾರ ಸಲಹೆ ಮಾಡಿದ್ದಾರೆ. ಮೊದಲಿಗೆ ಭಯೋತ್ಪಾದನೆ ಪಿಡುಗು ನಿಭಾಯಿಸಲು ಪ್ರತಿಯೊಬ್ಬ ಪೌರನನ್ನು ಒಳಗೊಂಡ ವ್ಯಾಪಕ ರಾಷ್ಟ್ರೀಯ ಆಂದೋಳನ ರೂಪಿಸಬೇಕು ಎಂದು ವಿದ್ಯಾರ್ಥಿಗಳ ಜತೆ ಸಮಾಲೋಚಿಸುತ್ತಾ ಅವರು ಹೇಳಿದರು.

ಎರಡನೆಯದಾಗಿ, ರಾಷ್ಟ್ರದ ಒಳಗೆ ಮತ್ತು ಹೊರಗೆ ಭಯೋತ್ಪಾದನೆ ಅಡಗುತಾಣಗಳ ನಾಶಕ್ಕೆ ದಾಳಿಗಳನ್ನು ಮಾಡಬೇಕೆಂದು ಕಲಾಂ ಸಲಹೆ ಮಾಡಿದರು. ಕೊನೆಯದಾಗಿ ಇಂತಹ ಅಪರಾಧಗಳಿಗೆ ಶಿಕ್ಷೆ ವಿಧಿಸಲು ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ವಿಚಾರಣೆ ಅಗತ್ಯವಿದೆ ಎಂದು ಅವರು ನುಡಿದರು.

'ಕ್ಷಿಪಣಿ ಮಾನವ' ರಾಷ್ಟ್ರದಲ್ಲಿ ಭಯೋತ್ಪಾದನೆ ಘಟನೆಗಳ ಹೆಚ್ಚಳ ಬಗ್ಗೆ ತಮ್ಮ ಆತಂಕ ವ್ಯಕ್ತಪಡಿಸಿ, ರಾಷ್ಟ್ರಕ್ಕೆ ಇದು ದೊಡ್ಡ ಬೆದರಿಕೆಯಾಗಿದೆ ಎಂದು ಹೇಳಿದರು. ಹಮೀರ್‌ಪುರದಲ್ಲಿ ಹಲವಾರು ಶಾಲೆಗಳ ವಿದ್ಯಾರ್ಥಿಗಳು ಮಾಜಿ ರಾಷ್ಟ್ರಪತಿಗಳನ್ನು ಭಯೋತ್ಪಾದನೆ ಪಿಡುಗಿನಿಂದ ಹಿಡಿದು ಅವರ ವೈಯಕ್ತಿಕ ಜೀವನದ ಹಲವಾರು ಪ್ರಶ್ನೆಗಳಿಗೆ ಕಲಾಂ ಉತ್ತರಿಸುತ್ತಿದ್ದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪೂಂಚ್‌ನಲ್ಲಿ ಭೀಕರ ಗುಂಡಿನ ಕಾಳಗ
ಭಯೋತ್ಪಾದನೆ: ಅಮೆರಿಕಕ್ಕೆ ಚಿದಂಬರಂ ಭೇಟಿ
ಬಿಎಸ್‌ಪಿ ಶಾಸಕ ತಿವಾರಿ ವಿರುದ್ಧ ಆರೋಪಪಟ್ಟಿ
ಮಣಿಪುರ ಚಕಮಕಿಯಲ್ಲಿ ನಾಲ್ವರು ಉಗ್ರರು ಹತ
ಯುಪಿಎ ಸೇರಲಿರುವ ಎನ್‌ಸಿ
ಮುಂಬೈ ದಾಳಿ ಸೂತ್ರದಾರನನ್ನು ತಮ್ಮ ವಶಕ್ಕೊಪ್ಪಿಸಿ: ಪಿಎಂ
ಗ್ರಹ ಗತಿ
ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಿದ್ದರಾಮಯ್ಯ ವಿರುದ್ಧ ಖರ್ಗೆ ಪರೋಕ್ಷ ವಾಗ್ದಾಳಿ
ಉಪ ಚುನಾವಣೆಯಲ್ಲಿನ ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್, ಇದೀಗ ಮಾಜಿ ಉಪಮುಖ್ಯಮಂತ್ರಿ ....
2009 ಕನ್ನಡ ಅನುಷ್ಠಾನ ವರ್ಷವಾಗಿ ಆಚರಣೆ
ಡಾ.ಅಜಯ್‌ಕುಮಾರ್ ಸಿಂಗ್ ನೂತನ ಡಿಜಿಪಿ
ಮನರಂಜನೆ
ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ
ಮುಂದೆ ಓದಿ|ಮತ್ತಷ್ಟು...