ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಬಿಎಸ್‌ಪಿ ಶಾಸಕ ತಿವಾರಿ ವಿರುದ್ಧ ಆರೋಪಪಟ್ಟಿ
ಲಕ್ನೊ, ಶನಿವಾರ, 3 ಜನವರಿ 2009   ( 16:25 IST )
ಉತ್ತರಪ್ರದೇಶ ಪೊಲೀಸರು ಶನಿವಾರ ಪಿಡಬ್ಲ್ಯುಡಿ ಎಂಜಿನಿಯರ್ ಹತ್ಯೆಗೆ ಸಂಬಂಧಿಸಿದಂತೆ ಬಿಎಸ್‌ಪಿ ಶಾಸಕ ಶೇಖರ್ ತಿವಾರಿ ಮತ್ತು ಇನ್ನೂ 9 ಮಂದಿ ಆರೋಪಿಗಳ ವಿರುದ್ಧ ಶನಿವಾರ ಆರೋಪಪಟ್ಟಿ ಸಲ್ಲಿಸಿದ್ದಾರೆ. ಬಿಎಸ್‌ಪಿ ಶಾಸಕ ಶೇಖರ್ ತಿವಾರಿ ಸೇರಿದಂತೆ 10 ಆರೋಪಿಗಳ ವಿರುದ್ಧ ಮನೋಜ್ ಗುಪ್ತಾ ಹತ್ಯೆಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸಲಾಗಿದೆ.

10 ಆರೋಪಿಗಳಲ್ಲಿ ತಿವಾರಿ ಸೇರಿದಂತೆ 6 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಉತ್ತರಪ್ರದೇಶ ಪೊಲೀಸ್ ಪ್ರಧಾನನಿರ್ದೇಶಕ ವಿಕ್ರಂ ಸಿಂಗ್ ವರದಿಗಾರರಿಗೆ ತಿಳಿಸಿದರು. ಹತ್ಯೆಗೊಳಗಾದ ಮನೋಜ್ ಗುಪ್ತಾ ನಿವಾಸದಿಂದ ವಿಧಿವಿಜ್ಞಾನ ಮತ್ತು ದಾಖಲೆಯ ಸಾಕ್ಷ್ಯವನ್ನು ಪತ್ತೆಹಚ್ಚಿರುವುದಾಗಿ ಡಿಜಿಪಿ ವಿಕ್ರಂ ಸಿಂಗ್ ತಿಳಿಸಿದರು.

ಆ ದುರ್ದಿನದ ಘಟನೆಯನ್ನು ವಿವರಿಸಿದ ಸಿಂಗ್, ವಿದ್ಯುತ್ ಶಾಕ್ ನೀಡಲು ಬಳಸಲಾದ ವೈರ್, ಮೃತರಿಗೆ ಮಾರಣಾಂತಿಕ ಹಲ್ಲೆ ಮಾಡಲು ಬಳಸಲಾದ ದೊಣ್ಣೆ ಮತ್ತು ರಕ್ತಲೇಪಿತ ಬಟ್ಟೆಯ ತುಂಡು ಪತ್ತೆಯಾಗಿವೆ. ಹತ್ಯೆಗೆ ಬಳಸಲಾದ ನಾಲ್ಕು ಕಾರುಗಳನ್ನು ಕೂಡ ಪತ್ತೆಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮಣಿಪುರ ಚಕಮಕಿಯಲ್ಲಿ ನಾಲ್ವರು ಉಗ್ರರು ಹತ
ಯುಪಿಎ ಸೇರಲಿರುವ ಎನ್‌ಸಿ
ಮುಂಬೈ ದಾಳಿ ಸೂತ್ರದಾರನನ್ನು ತಮ್ಮ ವಶಕ್ಕೊಪ್ಪಿಸಿ: ಪಿಎಂ
ಪೂಂಚ್ ಎನ್‌ಕೌಂಟರ್ ಪುನರಾರಂಭ, ಒಬ್ಬ ಎಸ್‌ಪಿಒ ಸಾವು
ಸುಪ್ರೀಂಕೋರ್ಟ್, ಹೈಕೋರ್ಟ್ ಜಡ್ಜ್ ವೇತನ 3 ಪಟ್ಟು ಹೆಚ್ಚಳ
ರಾಷ್ಟ್ರಪತಿ, ಉಪರಾಷ್ಟ್ರಪತಿ ವೇತನ 3 ಪಟ್ಟು ಹೆಚ್ಚಳ
ಗ್ರಹ ಗತಿ
ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಿದ್ದರಾಮಯ್ಯ ವಿರುದ್ಧ ಖರ್ಗೆ ಪರೋಕ್ಷ ವಾಗ್ದಾಳಿ
ಉಪ ಚುನಾವಣೆಯಲ್ಲಿನ ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್, ಇದೀಗ ಮಾಜಿ ಉಪಮುಖ್ಯಮಂತ್ರಿ ....
2009 ಕನ್ನಡ ಅನುಷ್ಠಾನ ವರ್ಷವಾಗಿ ಆಚರಣೆ
ಡಾ.ಅಜಯ್‌ಕುಮಾರ್ ಸಿಂಗ್ ನೂತನ ಡಿಜಿಪಿ
ಮನರಂಜನೆ
ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ
ಮುಂದೆ ಓದಿ|ಮತ್ತಷ್ಟು...