ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಮಣಿಪುರ ಚಕಮಕಿಯಲ್ಲಿ ನಾಲ್ವರು ಉಗ್ರರು ಹತ
ನವದೆಹಲಿ, ಶನಿವಾರ, 3 ಜನವರಿ 2009   ( 16:07 IST )
ಮಣಿಪುರದ ಪೂರ್ವ ಇಂಫಾಲ್ ಮತ್ತು ಬಿಶೆನ್‌ಪುರ ಜಿಲ್ಲೆಗಳಲ್ಲಿ ಭದ್ರತಾಪಡೆಗಳ ಜತೆ ಪ್ರತ್ಯೇಕ ಚಕಮಕಿಗಳಲ್ಲಿ ನಾಲ್ವರು ಉಗ್ರಗಾಮಿಗಳು ಹತರಾಗಿದ್ದಾರೆಂದು ಅಧಿಕೃತ ಮ‌ೂಲಗಳು ಶನಿವಾರ ತಿಳಿಸಿವೆ. ಕೆಲವು ಉಗ್ರಗಾಮಿಗಳ ಚಲನವಲನದ ವರದಿ ಹಿನ್ನೆಲೆಯಲ್ಲಿ ಪೂರ್ವ ಇಂಫಾಲ್ ಜಿಲ್ಲೆಯ ಸಂಜೆನ್‌ಬಾಂ ಗ್ರಾಮದ ಮೇಲೆ ಪೊಲೀಸ್ ಕಮಾಂಡೊಗಳು ಮತ್ತು ಅಸ್ಸಾಂ ರೈಫಲ್ಸ್‌ನ ಜಂಟಿ ತಂಡ ದಾಳಿ ಮಾಡಿತೆಂದು ಮ‌ೂಲಗಳು ಹೇಳಿವೆ.

ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ, ಉಗ್ರಗಾಮಿಗಳು ಪಡೆಗಳ ಮೇಲೆ ಗುಂಡು ಹಾರಿಸಿದರು ಮತ್ತು ಚಕಮಕಿಯಲ್ಲಿ ಗುರುತುಸಿಗದ ಉಗ್ರಗಾಮಿ ಹತನಾಗಿದ್ದು, ಇನ್ನೂ ಕೆಲವರು ತಲೆತಪ್ಪಿಸಿಕೊಂಡಿದ್ದಾರೆ. ಮೃತನಿಂದ ಒಂದು ಸಣ್ಣ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮ‌ೂಲಗಳು ಹೇಳಿವೆ.

ಬಿಶೇನ್‌ಪುರದ ಪೋಟ್ಸ್‌ಸಂಗ್‌ಬಾಂನಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಭದ್ರತಾಸಿಬ್ಬಂದಿ ಜತೆ ಗುಂಡಿನಚಕಮಕಿಯಲ್ಲಿ ಇಬ್ಬರು ಉಗ್ರಗಾಮಿಗಳು ಹತರಾಗಿದ್ದಾರೆಂದು ಮೂಲಗಳು ತಿಳಿಸಿವೆ. ಒಂದು 9 ಎಂಎಂ ಪಿಸ್ತೂಲು, ಕೆಲವು ಸುತ್ತು ಮದ್ದುಗುಂಡುಗಳು ಮತ್ತು ಎರಡು ಗ್ರೆನೇಡ್‌ಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಮ‌ೂಲಗಳು ಹೇಳಿವೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಯುಪಿಎ ಸೇರಲಿರುವ ಎನ್‌ಸಿ
ಮುಂಬೈ ದಾಳಿ ಸೂತ್ರದಾರನನ್ನು ತಮ್ಮ ವಶಕ್ಕೊಪ್ಪಿಸಿ: ಪಿಎಂ
ಪೂಂಚ್ ಎನ್‌ಕೌಂಟರ್ ಪುನರಾರಂಭ, ಒಬ್ಬ ಎಸ್‌ಪಿಒ ಸಾವು
ಸುಪ್ರೀಂಕೋರ್ಟ್, ಹೈಕೋರ್ಟ್ ಜಡ್ಜ್ ವೇತನ 3 ಪಟ್ಟು ಹೆಚ್ಚಳ
ರಾಷ್ಟ್ರಪತಿ, ಉಪರಾಷ್ಟ್ರಪತಿ ವೇತನ 3 ಪಟ್ಟು ಹೆಚ್ಚಳ
ದಿಲ್ಲಿ: ದಟ್ಟ ಮಂಜಿನಿಂದ ವಿಮಾನ ಹಾರಾಟ ವಿಳಂಬ
ಗ್ರಹ ಗತಿ
ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಿದ್ದರಾಮಯ್ಯ ವಿರುದ್ಧ ಖರ್ಗೆ ಪರೋಕ್ಷ ವಾಗ್ದಾಳಿ
ಉಪ ಚುನಾವಣೆಯಲ್ಲಿನ ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್, ಇದೀಗ ಮಾಜಿ ಉಪಮುಖ್ಯಮಂತ್ರಿ ....
2009 ಕನ್ನಡ ಅನುಷ್ಠಾನ ವರ್ಷವಾಗಿ ಆಚರಣೆ
ಡಾ.ಅಜಯ್‌ಕುಮಾರ್ ಸಿಂಗ್ ನೂತನ ಡಿಜಿಪಿ
ಮನರಂಜನೆ
ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ
ಮುಂದೆ ಓದಿ|ಮತ್ತಷ್ಟು...