|
| ನಿರ್ಗತಿಕರ ಪರ ಹೋರಾಡಿದ ಕಾನ್ಶಿರಾಂ: ಮಾಯಾವತಿ |
| ಲಕ್ನೊ, ಶುಕ್ರವಾರ, 10 ಅಕ್ಟೋಬರ್ 2008 ( 18:18 IST ) | |
ಮುಂಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಗುರುವಾರ ಲಕ್ನೊದ ಕಾರ್ಯಕ್ರಮವೊಂದರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ 3,000 ಕೋಟಿ ರೂಗಳ 158 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.
ಬಹುಜನಸಮಾಜ ಪಕ್ಷದ ಸಂಸ್ಥಾಪಕ ಕಾನ್ಶಿರಾಂ ಅವರ ಎರಡನೇ ಪುಣ್ಯತಿಥಿಯಲ್ಲಿ ಮಾತನಾಡಿದ ಅವರು, ಕಾನ್ಶಿರಾಂ ಉತ್ತರಪ್ರದೇಶದಲ್ಲಿ ಬಡವರು ಮತ್ತು ನಿರ್ಗತಿಕರ ಪರ ಹೋರಾಡಿದರು ಎಂದು ಹೇಳಿದರು. ಅವರ ಪ್ರಯತ್ನಗಳಿಂದ ತಾವು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಲು ನೆರವಾಯಿತು ಎಂದು ನೆನೆಸಿಕೊಂಡರು.
ಕಾನ್ಶಿರಾಂ ಅವರಿಗೆ ಭಾರತ ರತ್ನ ನೀಡಬೇಕೆಂಬ ಕೋಟ್ಯಂತರ ಜನರ ಅಪೇಕ್ಷೆಗೆ ಕೇಂದ್ರಸರ್ಕಾರ ಬೆಲೆಕೊಡಲಿಲ್ಲ ಎಂದು ಅವರು ಹೇಳಿದರು. ಮಾಯಾವತಿ ತಮ್ಮ ಆತ್ಮಕಥೆಯ ಮೂರನೇ ಸಂಪುಟ "ಹೋರಾಟ ಜೀವನದ ವೃತ್ತಾಂತ ಮತ್ತು ಬಿಎಸ್ಪಿ ಆಂದೋಳನವನ್ನು ಕೂಡ ಬಿಡುಗಡೆ ಮಾಡಿದರು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ವೃತ್ತಿ ವಿಷಯಗಳು ಮತ್ತು ಹೊಸ ಅವಕಾಶಗಳಿಗೆ ನಿಮ್ಮ ಮುಂದೆ ಸರಿಯಾದ ಹಾದಿ ಇದೆ. ವಾಚಾಳಿಯು ಹೇಳುವ ಮಾತನ್ನು ನಂಬಬೇಡಿ. ನಿಮ್ಮ ಕಡೆಗಿರುವ ಮೀನ ರಾಶಿ ಸಂಬಂಧದಲ್ಲಿ ನಿಮ್ಮ ಪ್ರಯತ್ನಕ್ಕೆ ಬೆಂಬಲ ಸಿಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕೊನೆಗೂ ಮೋಹನ್ ಆಸೆ ಈಡೇರಿದೆ. ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಅವರಿಗೆ ಕಥೆ, ಸಂಭಾಷಣೆ ಬರೆಯುವುದರಲ್ಲಿ ಆಸಕ್ತಿ ಇತ್ತು. ಅದಕ್ಕಾಗಿ ಕೆಲವು ಚಿತ್ರಗಳಿಗೆ ಸಂಭಾಷಣೆ ಕೂಡಾ ಬರೆದಿದ್ದರು. ಆದರೆ ಅವೆಲ್ಲದರ ಜೊತೆಗೆ ಯಾವುದಾದರೊಂದು ಚಿತ್ರ ನಿರ್ದೇಶನ |
| |
|
|
|
|
|
|
|