ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಒಪ್ಪಂದದ ಅನುಷ್ಠಾನ ವಿಳಂಬ: ಅಮರನಾಥ ಸಮಿತಿ ಎಚ್ಚರಿಕೆ
ಜಮ್ಮು, ಶನಿವಾರ, 6 ಸೆಪ್ಟೆಂಬರ್ 2008   ( 15:44 IST )
ಅಮರನಾಥ ದೇವಸ್ಥಾನ ಮಂಡಳಿಗೆ ಭೂಮಿಯನ್ನು ಹಸ್ತಾಂತರಿಸುವುದಕ್ಕಾಗಿ ಎರಡು ತಿಂಗಳುಗಳ ಕಾಲ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘರ್ಷ ಸಮಿತಿ ಮತ್ತು ಜಮ್ಮು ಕಾಶ್ಮೀರ ಸರಕಾರದ ನಡುವೆ ಬರಲಾದ ಒಪ್ಪಂದವನ್ನು ಅನುಷ್ಠಾನಗೊಳಿಸುವಲ್ಲಿ ವಿಳಂಬವಾಗಕೂಡದು ಎಂಬುದಾಗಿ ಕೋರಿರುವ ಸಂಘರ್ಷ ಸಮಿತಿ, ಯಾವುದೇ ರೀತಿಯ ಕಾಲ ಹರಣ ಪ್ರತಿಭಟನೆಯನ್ನು ಅನಿವಾರ್ಯಗೊಳಿಸುತ್ತದೆ ಎಂದು ಎಚ್ಚರಿಕೆ ನೀಡಿದೆ.

ದೇವಸ್ಥಾನ ಮಂಡಳಿಗೆ ಭೂಮಿಯನ್ನು ಮರುಹಸ್ತಾಂತರಿಸುವ ಮೂಲ ವಿಷಯವನ್ನು ಸರಕಾರ ಅಖೈರುಗೊಳಿಸಿದ್ದರೂ, ಪ್ರತಿಭಟನೆ ಜತೆಗಿನ ಸಹ ಸಂಬಂಧಿತ ವಿಷಯಗಳಾಗಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಶ್ರೀ ಅಮರನಾಥ ಸಂಘರ್ಷ ಸಮಿತಿ ವಕ್ತಾರ ನರಿಂದರ್ ಸಿಂಗ್ ತಿಳಿಸಿದ್ದಾರೆ.

ಸಲಹೆಗಾರ ಎಸ್ಎಸ್ ಬ್ಲೊಯೆರಿಯಾ ನೇತೃತ್ವದ ರಾಜ್ಯಪಾಲರ ತಂಡ ಪ್ರತಿಭಟನಾಕಾರರ ವಿರುದ್ಧದ ಎಲ್ಲಾ ಪ್ರಕರಣವನ್ನು ಹಿಂಪಡೆಯುವುದಾಗಿ ಭರವಸೆ ನೀಡಿದ್ದರು ಎಂದು ಅವರು ಹೇಳಿದ್ದಾರೆ. ಇದರ ಜತೆಗೆ ಪ್ರಧಾನ ಕಾರ್ಯದರ್ಶಿ (ಗೃಹ) ನೇತೃತ್ವದ ಉನ್ನತ ಮಟ್ಟದ ಸಮಿತಿ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿತ್ತು ಎಂದು ನರಿಂದರ್ ಸಿಂಗ್ ಹೇಳಿದ್ದಾರೆ.

ಅದಾಗ್ಯೂ ಈವರೆಗೆ ಈ ನಿಟ್ಟಿನಲ್ಲಿ ಏನನ್ನೂ ಮಾಡಿಲ್ಲ. ಈ ಸಮಿತಿಯನ್ನು ಚಾಲನೆ ಮಾಡದಿರುವ ಬಗ್ಗೆ ಕಾರಣವೇನು ಎಂಬುದು ತಮಗೆ ತಿಳಿಯುತ್ತಿಲ್ಲ ಎಂದು ಸಿಂಗ್ ತಿಳಿಸಿದ್ದಾರೆ. ಇದೇ ವೇಳೆ ಅವರು ಜಮ್ಮು ಪ್ರಾಂತ್ಯದಿಂದ ಕೆಲ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರ ಸರಕರಾದ ನಡೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸರಕಾರ ಗಂಭೀರವಾಗಿ ಕಾರ್ಯಪ್ರವೃತ್ತರಾಗಬೇಕು ಮತ್ತು ಎಲ್ಲಾ ಬೇಡಿಕೆಗಳನ್ನು ಪೂರೈಸಬೇಕು ಎಂಬುದನ್ನು ಸಮಿತಿಯ ಸಂಚಾಲಕ ಲೀಲಾ ಕರನ್ ಶರ್ಮಾ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಸರಕಾರ ತಮ್ಮ ಬೇಡಿಕೆ ಮೇಲೆ ವಿಳಂಬ ನೀತಿಯನ್ನು ಅನುಕರಿಸಿದರೆ, ಪ್ರತಿಭಟನೆಗೆ ಮರು ಚಾಲನೆ ನೀಡುವ ಬಗ್ಗೆ ಸಮಿತಿ ಮರುಚಿಂತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಉತ್ತರ, ಪೂರ್ವ ಭಾರತದಲ್ಲಿ ಅಲ್ಪ ತೀವ್ರತೆಯ ಭೂಕಂಪ
ಸಿಂಗೂರು ಮಾತುಕತೆ: 2ನೇ ಸುತ್ತು ಆರಂಭ
ಭುವನೇಶ್ವರ: ನಿಷೇಧಾಜ್ಞೆ ಹೇರಿಕೆ
ಅಂತರ್ಜಾತಿ ವಿವಾಹಕ್ಕೆ ಕುಮ್ಮಕ್ಕು: ವಿವಾದದಲ್ಲಿ ಚಿರಂಜೀವಿ
ಸಿಂಗುರ್ ಮಾತುಕತೆ ಗಮನಾರ್ಹ ಪ್ರಗತಿ
ಒಮ್ಮತಕ್ಕೆ ಬರದ ಎನ್ಎಸ್‌ಜಿ ಸಭೆ; ಮಾತುಕತೆ ವಿಸ್ತರಣೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಚಿತ ವಿದ್ಯುತ್‌ಗೆ ಸರ್ಕಾರ ಬದ್ಧ: ಯಡಿಯ‌ೂರಪ್ಪ
ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ನಿರ್ಧಾರದಿಂದ ರಾಜ್ಯ ಸರ್ಕಾರ ...
ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಬಲಿಪಶುಗಳು
ಮಳೆ ಹಾನಿ ನೆರವು-ದೆಹಲಿಗೆ ನಿಯೋಗ: ಸಿಎಂ
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ.
ಮುಂದೆ ಓದಿ|ಮತ್ತಷ್ಟು...