|
| ಸಿಂಗೂರು ಮಾತುಕತೆ: 2ನೇ ಸುತ್ತು ಆರಂಭ |
| ಕೋಲ್ಕತಾ, ಶನಿವಾರ, 6 ಸೆಪ್ಟೆಂಬರ್ 2008 ( 13:35 IST ) | |
ಸಿಂಗೂರ್ ಬಿಕ್ಕಟ್ಟನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿನ ಎರಡನೇ ಸುತ್ತಿನ ನಿರ್ಣಾಯಕ ಮಾತುಕತೆ ಪಶ್ಚಿಮ ಬಂಗಾಳ ರಾಜ್ಯಪಾಲ ಗೋಪಾಲ್ಕೃಷ್ಣ ಗಾಂಧಿಯವರ ನೇತೃತ್ವದಲ್ಲಿ ರಾಭವನದಲ್ಲಿ ಪ್ರಾರಂಭವಾಗಿದೆ.
ಈ ಸಭೆ ಬೆಳಗ್ಗೆ ಸುಮಾರು 11 ಗಂಟೆಗೆ ಪ್ರಾರಂಭವಾಗಿದ್ದು, ಪಶ್ಚಿಮ ಬಂಗಾಳ ಸರಕಾರ ಮತ್ತು ತೃಣಮೂಲ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಇದರಲ್ಲಿ ಪಾಲ್ಗೊಂಡಿದ್ದಾರೆ.
ಸರಕರಾರದ ಪ್ರತಿನಿಧಿತ್ವವನ್ನು ಕೈಗಾರಿಕಾ ಸಚಿವ ನಿರುಪಂ ಸೇನ್, ಪಂಚಾಯತ್ ಸಚಿವ ಸುರಾಜ್ಯ ಕನಟ ಮಿಶ್ರಾ, ಕೈಗಾರಿಕಾ ಕಾರ್ಯದರ್ಶಿ ಸಬ್ಯಾಸಾಚಿ ಸೇನ್, ಪಶ್ಚಿಮ ಬಂಗಾಳ ಕೈಗಾರಿಕಾ ಅಭಿವೃದ್ಧಿ ಸಹಕಾರ ನಿರ್ವಹಣಾ ನಿರ್ದೇಶಕ ಸುಬ್ರತ ಗುಪ್ತಾ, ಮುಖ್ಯ ಕಾರ್ಯದರ್ಶಿ ಅಮಿತ್ ಕಿರನ್ ದೇವ್ ಮತ್ತು ಗೃಹ ಕಾರ್ಯದರ್ಶಿ ಅಶೋಕ್ ಮೋಹನ್ ಚಕ್ರವರ್ತಿ ವಹಿಸಿದ್ದಾರೆ.
ವಿರೋಧ ಪಕ್ಷದ ನಾಯಕರಾದ ಪಾರ್ಥ ಚಟರ್ಜಿ, ಕಲ್ಯಾಣ್ ಬ್ಯಾನರ್ಜಿ, ಪುರ್ನೇಂದು ಬೋಸ್ (ಸಿಪಿಐ-ಎಂಎಲ್) ಮತ್ತು ಮಾಣಿಕ್ ಮುಖರ್ಜಿ (ಎಸ್ಯುಸಿಐ) ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಮಾಜಿ ಭೂ ಸುಧಾರಣೆ ಆಯುಕ್ತ ದೇಬಬ್ರತ ಬಂಡೋಪದ್ಯಾಯ, ಮಾಜಿ ಮುಂಬೈ ಹೈ ಕೋರ್ಟ್ ಮುಖ್ಯ ನ್ಯಾಯಾಧೀಶ ಚಿತ್ತತೋಶ್ ಮುಖ್ಯೋಪಾದ್ಯಾಯರೂ ಸಭೆಯಲ್ಲಿ ಉಪಸ್ಥಿತರಿದ್ದು, ಕಾನೂನು ಸಲಹೆ ನೀಡುವಂತೆ ಅವರಲ್ಲಿ ರಾಜ್ಯಪಾಲರು ಮನವಿ ಮಾಡಿದ್ದಾರೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|