|
| ಸೋಮನಾಥ್ ಬಂಡಾಯ: ಕಠಿಣ ಕ್ರಮ ಸಂಭವ |
| ನವದೆಹಲಿ, 23 ಜುಲೈ 2008 ( 16:16 IST ) | |
ಪಕ್ಷವನ್ನು ವಿರೋಧಿಸಿ ಲೋಕಸಭೆ ಸ್ಪೀಕರ್ ಆಗಿ ಮುಂದುವರಿದ ಮತ್ತು ಜುಲೈ 22ರ ವಿಶ್ವಾಸ ಮತದ ಅಧ್ಯಕ್ಷತೆ ವಹಿಸಿದ ಸೋಮನಾಥ್ ಚಟರ್ಜಿಯವರ ವಿರುದ್ಧ ಸಿಪಿಐ-ಎಂ ಕಠಿಣ ಕ್ರಮ ಕೈಗೊಳ್ಳುವ ಸಂಭವವಿದೆ.
ಮೂಲಗಳ ಪ್ರಕಾರ ಶಿಸ್ತು ಕ್ರಮ ಬಹು ಬೇಗ ಬರುವ ಸಾಧ್ಯತೆ ಇದ್ದು, ಇಂದು ಸಂಜೆ ನಡೆಯಲಿರುವ ಸಿಪಿಐ-ಎಂ ಪೊಲಿಟ್ ಬ್ಯೂರೋ ಸಭೆಯಲ್ಲಿ ಶಿಸ್ತು ಕ್ರಮದ ನಿರ್ಣಯ ತೆಗೆದು ಕೊಳ್ಳುವ ಸಂಭವವಿದೆ.
ಈ ಕಡೆ ಸ್ಪೀಕರ್ ಸೋಮನಾಥ್ ಚಟರ್ಜಿ ತಾವು ಸದ್ಯಕ್ಕೆ ಸಂವಿಧಾನಿಕ ಹುದ್ದೆಯಿಂದ ಕೆಳಕ್ಕಿಳಿಯುವುದಿಲ್ಲ ಎಂದು ಹೇಳುವ ಮೂಲಕ ಪಕ್ಷದ ವಿರುದ್ಧವಾಗಿನ ತಮ್ಮ ಬಂಡಾಯವನ್ನು ಮುಂದುವರಿಸಿದ್ದಾರೆ.
ತಾವು ಸ್ಪೀಕರ್ ಹುದ್ಧೆಯಲ್ಲಿ ಮುಂದುವರಿಯಲು ಇಚ್ಚಿಸುವುದಾಗಿ, ಒಂದು ವೇಳೆ ಈ ನಿಟ್ಟಿನಲ್ಲಿ ಒತ್ತಾಯ ಪಡಿಸಿದರೆ, ತಾನು ಪಕ್ಷವನ್ನು ತೊರೆಯುವುದಾಗಿ ಸೋಮನಾಥ್ ಚಟರ್ಜಿ ದೂರವಾಣಿ ಮೂಲಕ ಪಶ್ಚಿಮ ಬಂಗಾಳ ಎಡಪಕ್ಷ ಅಧ್ಯಕ್ಷ ಬಿಮನ್ ಬೋಸ್ಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಸಿಪಿಐ-ಎಂ ಕೇಂದ್ರ ಸಮಿತಿ ದಿಲ್ಲಿಯಲ್ಲಿ ಸಭೆ ನಡೆಸುತ್ತಿದ್ದು, ಈ ವಿಷಯವಾಗಿ ಮುಂದಿನ ಕ್ರಮಗಳ ಬಗ್ಗೆ ವಿಚಾರ ನಡೆಸುವ ನಿರೀಕ್ಷೆ ಇದೆ. ಸೋಮನಾಥ್ ಪಕ್ಷದ ಒಬ್ಬ ಹಿರಿಯ ಸದಸ್ಯನಾಗಿದ್ದು, ಅವರ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳುವುದು ಎಂಬುದರ ಬಗ್ಗೆ ಪಕ್ಷದ ನಾಯಕರು ಗೊಂದಲದಲ್ಲಿದ್ದಾರೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|