|
| ವಿಶ್ವಾಸಮತ-ಇಬ್ಬರು ಎನ್ಡಿಎ ಸಂಸದರು ನಾಪತ್ತೆ |
| ನವದೆಹಲಿ, ಬುಧವಾರ, 23 ಜುಲೈ 2008 ( 13:11 IST ) | |
ಯುಪಿಎ ವಿಶ್ವಾಸಮತದಲ್ಲಿ ಗೆದ್ದ ಬಳಿಕ ಭಾರತ-ಅಮೆರಿಕ ಅಣು ಒಪ್ಪಂದದ ಬಿಕ್ಕಟ್ಟು ಅಂತ್ಯಗೊಂಡಿದೆ. ಆದರೆ ಎನ್ಡಿಎ ಮಿತ್ರಪಕ್ಷಗಳಿಗೆ ನಿದ್ರಾರಹಿತ ರಾತ್ರಿಗಳನ್ನು ಕಳೆಯುವಂತಾಗಿದೆ. ಎನ್ಡಿಎ ಮೈತ್ರಿಕೂಟದ ಇಬ್ಬರು ಸಂಸತ್ ಸದಸ್ಯರು ನಾಪತ್ತೆಯಾಗಿದ್ದಾರೆಂಬ ಸುದ್ದಿಯೇ ಇದಕ್ಕೆ ಕಾರಣ. ವರದಿಗಳ ಪ್ರಕಾರ, ರೋಪಾರ್ನ ಶಿರೋಮಣಿ ಅಕಾಲಿ ದಳದ ಎಂಪಿ ಸುಖದೇವ್ ಸಿಂಗ್ ಲಿಬ್ರಾ ಕಳೆದ ಎರಡು ದಿನಗಳಿಂದ ಕಣ್ಮರೆಯಾಗಿರುವುದು.
ಲಿಬ್ರಾ ಪಕ್ಷದ ವಿಪ್ ಉಲ್ಲಂಘಿಸಿ ತಟಸ್ಥರಾಗಿ ಉಳಿದಿದ್ದರಿಂದ ಪಕ್ಷದ ಮುಖಂಡ ಸುಖಬೀರ್ ಸಿಂಗ್ ಬಾದಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ಮುಜುಗರವುಂಟಾಗಿದೆ. ರೋಪಾರ್ ಸಂಸದನ ಕುಟುಂಬದವರಿಗೆ ಮತ್ತು ಆಪ್ತಸ್ನೇಹಿತರಿಗೆ ಕೂಡ ಅವರ ಬಗ್ಗೆ ಸುಳಿವುಸಿಕ್ಕಿಲ್ಲ. ಅವರನ್ನು ಸಂಪರ್ಕಿಸುವ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಏತನ್ಮಧ್ಯೆ, ಶಿವಸೇನೆಯ ಬಂಡಾಯ ಸದಸ್ಯ ರೆಂಜೆ ಪಾಟೀಲ್ ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ.
ಲಿಬ್ರಾ ರೀತಿಯಲ್ಲಿ ಪಾಟಿಲ್ ಕೂಡ ಮತದಾನದಿಂದ ದೂರವುಳಿದಿದ್ದು, ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ. ನಾಪತ್ತೆಯಾದ ಇಬ್ಬರು ಎಂಪಿಗಳಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಧಾನಮಂತ್ರಿಗಳ ಕಚೇರಿ ಕೂಡ ನಿಕಟವಾಗಿ ಕೆಲಸ ಮಾಡುತ್ತಿದೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|