|
| ತಪ್ಪಿತಸ್ಥರನ್ನು ಸುಮ್ಮನೇ ಬಿಡುವುದಿಲ್ಲ: ಚಟರ್ಜಿ |
| ನವದೆಹಲಿ, ಮಂಗಳವಾರ, 22 ಜುಲೈ 2008 ( 19:16 IST ) | |
ವಿಶ್ವಾಸಮತ ಅಧಿವೇಶನದ ಚರ್ಚೆಯಲ್ಲಿ ಬಿಜೆಪಿ ಸಂಸದರು ಝಳುಪಿಸಿದ ನೋಟುಗಳ ಕಂತೆಯಿಂದ ಲೋಕಸಭೆ ಗದ್ದಲದಲ್ಲಿ ಮುಳುಗಿ ಸ್ಪೀಕರ್ ಸದನವನ್ನು ಸಂಜೆ 6 ಗಂಟೆವರೆಗೆ ಮುಂದೂಡಿದರು. ಸಮಾವೇಶ ಪುನಃ ಸೇರಿದಾಗ ಮಾತನಾಡಿದ ಸ್ಪೀಕರ್, ಕುದುರೆ ವ್ಯಾಪಾರದ ಘಟನೆಗಳ ಆರೋಪ ತೀವ್ರ ದುರದೃಷ್ಟಕರ ಎಂದು ವರ್ಣಿಸಿದರು. ಭಾರತದ ಸಂಸದೀಯ ಇತಿಹಾಸದಲ್ಲಿ ಇದು ಅತ್ಯಂತ ದುಃಖಕರ ದಿನ ಎಂದು ಅವರು ಹೇಳಿದರು.
ತಾವು ಬಿಜೆಪಿ ಅಧ್ಯಕ್ಷ ಆಡ್ವಾಣಿ ಸೇರಿದಂತೆ ಎಲ್ಲ ಪಕ್ಷಗಳ ನಾಯಕರ ಸಭೆಯನ್ನು ಕರೆದಿದ್ದಾಗಿ ಚಟರ್ಜಿ ತಿಳಿಸಿದರು. ಪ್ರತ್ಯೇಕ ಚರ್ಚೆ ಸಲುವಾಗಿ ತಾವು ದೆಹಲಿ ಪೊಲೀಸ್ ಆಯುಕ್ತರನ್ನು ಕರೆದಿದ್ದಾಗಿ ಅವರು ಹೇಳಿದರು. ಸದನದ ರಕ್ಷಕನಾಗಿ ಎಲ್ಲ ಸಂಭವನೀಯ ಕ್ರಮಗಳನ್ನು ಕೈಗೊಂಡಿರುವುದಾಗಿ ಸ್ಪೀಕರ್ ಭರವಸೆ ನೀಡಿದರು. ತಪ್ಪಿತಸ್ಥರು ಯಾರೇ ಆದರೂ ಅವರನ್ನು ಬಿಡುವುದಿಲ್ಲ ಎಂದು ಹೇಳಿದ ಅವರು , ಈ ವಿಷಯವನ್ನು ತಮಗೆ ಬಿಡುವಂತೆ ದೃಢವಾದ ಮನವಿಯನ್ನು ಸದಸ್ಯರಲ್ಲಿ ಮಾಡಿದರು.
ಆದರೆ ಲಂಚದ ಆಮಿಷದ ಬಗ್ಗೆ ಅಭಿಪ್ರಾಯ ತಿಳಿಸಲು ಅವಕಾಶ ನೀಡಬೇಕೆಂಬ ಪ್ರತಿಪಕ್ಷದ ಬೇಡಿಕೆಗಳನ್ನು ಅವರು ನಿರಾಕರಿಸಿದರು. ಪ್ರತಿಪಕ್ಷದ ಸದಸ್ಯರು ಸುಮ್ಮನಾಗದೇ ಪ್ರಧಾನಮಂತ್ರಿಗಳ ರಾಜೀನಾಮೆಗೆ ಒಕ್ಕೊರಲ ಬೇಡಿಕೆ ಮಂಡಿಸಿದಾಗ, ಕೋಲಾಹಲದ ವಾತಾವರಣ ಉಂಟಾಗಿ, ಇನ್ನೊಂದು ಬಾರಿ ಸದನವನ್ನು ಮುಂದೂಡಲಾಯಿತು. ಪ್ರಧಾನಮಂತ್ರಿಗಳು 6.30ಕ್ಕೆ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದು, ಮತದಾನವನ್ನು ರಾತ್ರಿ 7.15ಕ್ಕೆ ನಡೆಸಲು ನಿಶ್ಚಯಿಸಲಾಗಿದೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|