|
| ಶ್ರದ್ಧಾನಂದನಿಗೆ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆ |
| ನವದೆಹಲಿ, 22 ಜುಲೈ 2008 ( 18:04 IST ) | |
ಸ್ವಯಂಘೋಷಿತ ದೇವಮಾನವ ಸ್ವಾಮಿ ಶ್ರದ್ಧಾನಂದನಿಗೆ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆಯನ್ನು ಮಂಗಳವಾರ ವಿಧಿಸಿದೆ. ತನ್ನ ಪತ್ನಿ ಶಕೀರಾಳನ್ನು ಬೆಂಗಳೂರಿನ ಮನೆಯಲ್ಲಿ ಜೀವಂತ ಹೂಳಿ ಆಕೆಯ ಆಸ್ತಿ ಹೊಡೆಯಲು ಸಂಚು ನಡೆಸಿದ ಆರೋಪದ ಮೇಲೆ ಈ ಶಿಕ್ಷೆಯನ್ನು ಶ್ರದ್ಧಾನಂದನಿಗೆ ವಿಧಿಸಲಾಗಿದೆ. ಶ್ರದ್ಧಾನಂದ ತನ್ನ ಜೀವಿತಾವಧಿಯಲ್ಲಿ ಜೈಲಿನಲ್ಲಿರುತ್ತಾನೆಂದು ನ್ಯಾಯಮೂರ್ತಿಗಳಾದ ಬಿ.ಎನ್.ಅಗರವಾಲ್, ಜಿ.ಎಸ್. ಸಿಂಗ್ವಿ ಮತ್ತು ಅಫ್ತಾಬ್ ಅಲಾಂ ತೀರ್ಪು ನೀಡಿದ್ದಾರೆ.
ದ್ವಿನ್ಯಾಯಾಧೀಶ ಪೀಠ ಕಳೆದ ವರ್ಷ ಮೇನಲ್ಲಿ ಎಸ್.ಬಿ.ಸಿನ್ಹಾ ಮತ್ತು ಕಾಟ್ಜು ಅವರಿದ್ದ ಪೀಠ ಅಸ್ಪಷ್ಟ ತೀರ್ಪು ನೀಡಿದ ಬಳಿಕ ಶಿಕ್ಷೆಯ ಸ್ವರೂಪದ ಬಗ್ಗೆ ಮೂವರು ನ್ಯಾಯಾಧೀಶರ ಪೀಠ ತೀರ್ಪು ನೀಡಿತು.ಕಳೆದ ವರ್ಷ ನ್ಯಾಯಮೂರ್ತಿ ಕಾಟ್ಜು ಈ ಪ್ರಕರಣವು ಅಪರೂಪದಲ್ಲಿ ಅಪರೂಪವಾಗಿದ್ದು, ಮರಣದಂಡನೆಗೆ ಅರ್ಹವಾಗಿದೆ ಎಂದು ತಿಳಿಸಿದ್ದರು.
ಆರೋಪಿಯು ಜೀವಾವಧಿ ಶಿಕ್ಷೆಗೆ ಅರ್ಹ ಎಂದು ನ್ಯಾಯಮೂರ್ತಿ ಸಿನ್ಹಾ ಹೇಳಿದ್ದರು. ಅಸ್ಪಷ್ಟ ತೀರ್ಪಿನ ಹಿನ್ನೆಲೆಯಲ್ಲಿ ಮುಖ್ಯನ್ಯಾಯಮೂರ್ತಿ ವಿಷಯವನ್ನು ಮೇಲಿನ ಪೀಠಕ್ಕೆ ಒಪ್ಪಿಸಿದ್ದರು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು. |
| |
|
|
|
|
 | | pti |
| | |
| |
|
|
|
|
|
| ಚಿತ್ರ ಸುದ್ದಿ - ಆಕೆ ರಿಯಲ್ ಲೈಫ್ನಲ್ಲಿ ತುಂಬಾ ಮಾಡರ್ನ್ ಹುಡುಗಿ. ಆದರೆ ರೀಲಿನಲ್ಲಿ ಮಾತ್ರ ಲಂಗಧಾವಣಿ ಹಾಕುವಂತಹ ಬೆಡಗಿ. ಈ ಹಿಂದೆ ಯಾವತ್ತೂ ಲಂಗಧಾವಣಿ ಹಾಕದ ರಮ್ಯಾ ಬಾರ್ನಾ 'ನನ್ನೆದಯ ಹಾಡು' ಚಿತ್ರಕ್ಕಾಗಿ ಲಂಗಧಾವಣಿ ತೊಟ್ಟಿದ್ದಾರೆ. |
| |
|
|
|
|
|
|
|