|
| ಯುಪಿಎ ಬೆಂಬಲಕ್ಕೆ ಲಾಭದ ಲೆಕ್ಕ ಹಾಕಿರುವ ಸಣ್ಣಪಕ್ಷಗಳು |
| ನವದೆಹಲಿ, ಶುಕ್ರವಾರ, 18 ಜುಲೈ 2008 ( 12:40 IST ) | |
ಯುಪಿಎ ಸರ್ಕಾರ ಬಲಾಬಲ ಪರೀಕ್ಷೆ ಎದುರಿಸಲು ಇನ್ನು ಮೂರು ದಿನ ಬಾಕಿ ಉಳಿದಿರುವಂತೆ, ಸಣ್ಣ ಪಕ್ಷಗಳು ಮತ್ತು ಪಕ್ಷೇತರ ಸದಸ್ಯರು ಯುಪಿಎ ಪರವಾಗಿ ಮತ ಚಲಾಯಿಸಲು ತಮಗೆ ಸಿಗುವ ಲಾಭದ ಲೆಕ್ಕ ಹಾಕಿದ್ದಾರೆ. ಅಜಿತ್ ಸಿಂಗ್ ತಂದೆ ಚರಣ್ ಸಿಂಗ್ ಹೆಸರಲ್ಲಿ ಲಕ್ನೊ ವಿಮಾನನಿಲ್ದಾಣಕ್ಕೆ ಹೆಸರಿಡಲು ಸರ್ಕಾರ ನಿರ್ಧರಿಸಿದ್ದು, ಇದರಿಂದಾಗಿ ಮೂವರು ಸಂಸದರ ಬೆಂಬಲ ಅದಕ್ಕೆ ಸಿಗಲಿದೆ.
ಹತ್ಯೆ ಆರೋಪದಲ್ಲಿ ತಪ್ಪಿತಸ್ಥರಾದ ಬಳಿಕ ಕೇಂದ್ರ ಕಲ್ಲಿದ್ದಲು ಖಾತೆ ತ್ಯಜಿಸಿದ ಜೆಎಂಎಂ ನಾಯಕ ಶಿಬು ಸೊರೇನ್ ಅವರಿಗೆ ಅದೇ ಹುದ್ದೆಯನ್ನು ಪುನಃ ನೀಡುವ ಸಂಭವವಿದ್ದು, ಸರ್ಕಾರಕ್ಕೆ ಜೆಎಂಎಂನ ಐದು ಮತಗಳು ಲಭ್ಯವಾಗಬಹುದು.ವಿಶ್ವಾಸ ಮತಕ್ಕೆ ಮುನ್ನ ರಾಜಕೀಯ ಪಕ್ಷಗಳು ಮೈತ್ರಿ ಮಾಡಿಕೊಳ್ಳುತ್ತಿರುವ ನಡುವೆ, ಸರ್ಕಾರವು ತಲಾ 25 ಕೋಟಿ ನೀಡಿ ಸಂಸತ್ ಸದಸ್ಯರನ್ನು ಖರೀದಿಸುತ್ತಿದೆ ಎಂದು ಬರ್ಧನ್ ಆರೋಪಿಸಿದ್ದಾರೆ.
ಅನೇಕ ರಾಜಕಾರಣಿಗಳಿಗೆ ಅಣು ಒಪ್ಪಂದ ವಿಷಯವೇ ಅಲ್ಲ. ರಾಜಕೀಯ ಬಿಕ್ಕಟ್ಟಿನಿಂದ ಪರಮೋಚ್ಛ ಲಾಭವನ್ನು ಸಂಪಾದಿಸುವುದೇ ಅವರ ಗುರಿಯಾಗಿದೆ.ತನ್ನ ನಾಯಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಮುಚ್ಚಿಹಾಕಲು ಸಮಾಜವಾದಿ ಪಕ್ಷ ಕಾಂಗ್ರೆಸ್ ಜತೆ ದ್ವೇಷ ಕೈಬಿಟ್ಟು ಮೈತ್ರಿ ಮಾಡಿಕೊಂಡಿದೆ. ತೆಲಂಗಾಣ ರಾಜ್ಯದ ಭರವಸೆ ನೀಡುವ ಯಾರಿಗಾದರೂ ಮತ ನೀಡುವುದಾಗಿ ಟಿಆರ್ಎಸ್ ನಾಯಕರು ಹೇಳುತ್ತಿದ್ದಾರೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|