ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ವಿಶ್ವಾದ್ಯಂತ ತಮಿಳರ ಪ್ರತಿಭಟನೆ
ಲಂಡನ್, ಬುಧವಾರ, 20 ಮೇ 2009   ( 14:42 IST )
ಕಳೆದ ಒಂದು ವಾರದಿಂದ ಬ್ರಿಟನ್ ಸಂಸತ್ತಿನ ಹೊರಗೆ ತಮಿಳರು ಕಲೆತು ತಾಯ್ನಾಡಿನಲ್ಲಿ ಆಂತರಿಕ ಕದನದಲ್ಲಿ ಸಿಕ್ಕಿಬಿದ್ದ ಸಾವಿರಾರು ತಮಿಳರ ಸಂಕಷ್ಟದ ಬಗ್ಗೆ ಜಗತ್ತಿನ ಗಮನ ಸೆಳೆಯಲು ಯತ್ನಿಸಿದರು. ಪ್ರಭಾಕರನ್ ಸೇನೆಯ ಗುಂಡಿಗೆ ಹತ್ಯೆಯಾದ ಸುದ್ದಿ ಕೇಳಿದ ಮೇಲೆ ಅವರಲ್ಲಿ ಶೋಕಪ್ರಜ್ಞೆ ಆವರಿಸಿದ್ದು, ಶ್ರೀಲಂಕಾದ ತಮಿಳು ಸಮುದಾಯದ ಜನರ ಭವಿಷ್ಯದ ಬಗ್ಗೆ ಅವರಲ್ಲಿ ಆತಂಕದ ಕಾರ್ಮೋಡ ಕವಿದಿದೆ.

'ಪ್ರಭಾಕರನ್ ಸತ್ತಿಲ್ಲ. ಅವನನ್ನು ಎಲ್ಲಾ ತಮಿಳರು ಪ್ರೀತಿಸಿದ್ದು, ನಮ್ಮ ಹೃದಯಗಳಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾನೆಂದು' ಪ್ರತಿಭಟನೆಕಾರ ಜೀವನ್ ಹೇಳಿದ್ದಾರೆ. ಬ್ರಸೆಲ್ಸ್ ಯುರೋಪಿಯನ್ ಮಂಡಳಿಯ ಹೊರಗೆ ಪ್ರತಿಭಟನೆಗಳು ಜರುಗಿದವು. ಶ್ರೀಲಂಕಾದ ಮಾನವ ಹಕ್ಕು ದಮನದ ಪರಿಶೀಲನೆಗೆ ಸ್ವತಂತ್ರ ತನಿಖೆ ಸ್ಥಾಪಿಸುವ ಬಗ್ಗೆ ಚರ್ಚಿಸಲು ಅಲ್ಲಿ ವಿದೇಶಾಂಗ ಸಚಿವರು ಕಲೆತಿದ್ದರು.

ಜಿನೀವಾದಲ್ಲಿ ನೂರಾರು ತಮಿಳರು ವಿಶ್ವಸಂಸ್ಥೆ ಮುಖ್ಯಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು. ತಮಿಳು ಪ್ರಾಬಲ್ಯದ ಪ್ರದೇಶವಾದ ಲಾ ಚಾಪಲ್ಲೆ ಜಿಲ್ಲೆಯಲ್ಲಿ ಮಂಕು ಕವಿದ ವಾತಾವರಣವಿತ್ತು. ಕಳೆದ ಒಂದು ತಿಂಗಳಿಂದ ತಮಿಳುಸಮುದಾಯ ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ತಮಿಳರಿಗೆ ರಾಜಕೀಯ ಪರಿಹಾರ ಸಿಗುವ ತನಕ ತಮ್ಮ ಪ್ರತಿಭಟನೆ ಮುಂದುವರಿಕೆಗೆ ಅವರು ಇಚ್ಛಿಸಿದ್ದಾರೆ.

'ಫಿರಂಗಿ ಗುಂಡುಗಳಿಗೆ ಸಾವಿರಾರು ಜನರು ಸಾವು, ನೋವು ಅನುಭವಿಸಿದ್ದು, ಅವರ ದೇಹಗಳು ಎಲ್ಲಿವೆಯೆಂದು ತಮಿಳು ಸಮನ್ವಯ ಸಮಿತಿಯ ವಕ್ತಾರ ತಿರುಚೋಟಿ ತಿರು ಕೇಳಿದ್ದಾರೆ. ತೆರೆಮರೆಯಲ್ಲಿ ಏನಾಯಿತೆಂದು ಪ್ರತಿಯೊಬ್ಬರಿಗೂ ಬಹಿರಂಗ ಮಾಡಬೇಕು. ಈ ಪ್ರಶ್ನೆಗಳಿಗೆ ಶ್ರೀಲಂಕಾ ಉತ್ತರಿಸಬೇಕು. ಇದು ಸಮುದಾಯದ ಯುದ್ಧವಾಗಿದ್ದು, ರಾಜಕೀಯ ಪರಿಹಾರವಿಲ್ಲದೇ ಅಂತ್ಯ ಕಾಣುವುದಿಲ್ಲ. ನಾವು ಮುಕ್ತ ಜಗತ್ತಿನಲ್ಲಿ ವಾಸಿಸುತ್ತಿದ್ದು, ದಮನಕಾರಿ ನೀತಿ ವಿರುದ್ಧ ನಮಗೆ ಇಚ್ಛಿಸಿದ್ದನ್ನು ಮಾಡುತ್ತೇವೆ' ಎಂದು ಅವರು ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸಾವನ್ನು ಆಹ್ವಾನಿಸಿಕೊಂಡ ಪ್ರಭಾಕರನ್: ಕರುಣಾ
ತಮಿಳರಿಗೆ ಸಮಾನಹಕ್ಕು ತಮ್ಮ ಗುರಿ: ರಾಜಪಕ್ಷೆ
ಪಾಕ್ ಅಣ್ವಸ್ತ್ರ ಸುರಕ್ಷತೆ ಪೆಂಟಗನ್‌ಗೆ ತೃಪ್ತಿ
ತಮಿಳು, ಸಿಂಹಳೀಯರ ಅಧಿಕಾರ ಹಂಚಿಕೆಗೆ ಅಮೆರಿಕ ಕರೆ
ಬಾನ್ ಕಿ ಮ‌ೂನ್ ಶ್ರೀಲಂಕಾಗೆ ಭೇಟಿ
ಇಂಡೋನೇಶಿಯ ವಿಮಾನ ಅಪಘಾತ: 68 ಬಲಿ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ದೇವೇಗೌಡರ 77ನೇ ಹುಟ್ಟು ಹಬ್ಬ ಆಚರಣೆ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ..
ಜೆಡಿಎಸ್ ಕಾಂಗ್ರೆಸ್ ಜತೆ ವಿಲೀನವಾಗಲಿ: ಡಿವಿಎಸ್
ರಾಜ್ಯವನ್ನು ನಿರ್ಲಕ್ಷಿಸಿದರೆ ಎಚ್ಚರ!: ಯುಪಿಎಗೆ ಸವಾಲ್
ಮನರಂಜನೆ
ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು
ಮುಂದೆ ಓದಿ|ಮತ್ತಷ್ಟು...