ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ತಮಿಳು, ಸಿಂಹಳೀಯರ ಅಧಿಕಾರ ಹಂಚಿಕೆಗೆ ಅಮೆರಿಕ ಕರೆ
ವಾಷಿಂಗ್ಟನ್, ಬುಧವಾರ, 20 ಮೇ 2009   ( 11:10 IST )
ಶ್ರೀಲಂಕಾದಲ್ಲಿ ಎಲ್‌ಟಿಟಿಇ ನಾಮಾವಶೇಷಗೊಂಡು ಆಂತರಿಕ ಯುದ್ಧಕ್ಕೆ ತೆರೆಬಿದ್ದ ಬಳಿಕ ತಮಿಳರು ಮತ್ತು ಸಿಂಹಳೀಯರ ಜತೆ ಅಧಿಕಾರ ಹಂಚಿಕೆ ವ್ಯವಸ್ಥೆ ಆರಂಭಿಸಿ ನಿರಂತರ ಶಾಂತಿಯನ್ನು ಸ್ಥಾಪಿಸಬೇಕೆಂದು ಅಮೆರಿಕವು ಕೊಲಂಬೊಗೆ ತಿಳಿಸಿದೆ.

ಭಯೋತ್ಪಾದನೆಯನ್ನು ನಿಜವಾಗಲೂ ಸೋಲಿಸಲು, ಯುದ್ಧದಿಂದ ಸಾವಿರಾರು ಜನರ ಸಾವಿನಿಂದ ಉಂಟಾದ ಗಾಯವನ್ನು ಶಮನಮಾಡಬೇಕು ಮತ್ತು ಪ್ರಜಾಪ್ರಭುತ್ವ, ಸಮೃದ್ಧ ಮತ್ತು ಏಕತೆ ಶ್ರೀಲಂಕಾ ನಿರ್ಮಾಣದತ್ತ ಕಾರ್ಯೋನ್ಮುಖವಾಗಬೇಕು ಎಂದು ವಿದೇಶಾಂಗ ಇಲಾಖೆ ವಕ್ತಾರ ಐಯಾನ್ ಕೆಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶ್ರೀಲಂಕನ್ನರ ಹಕ್ಕುಬಾಧ್ಯತೆ ರಕ್ಷಿಸುವ ಹೊಸ ಅಧಿಕಾರ ಹಂಚಿಕೆ ಸೂತ್ರದ ಸಾಧನೆಗೆ ಸಿಂಹಳೀಯರು, ತಮಿಳರು ಮತ್ತಿತರ ಶ್ರೀಲಂಕನ್ನರು ಒಂದಾಗಿ ಶ್ರಮಿಸುವುದರ ಮೇಲೆ ಶ್ರೀಲಂಕಾದಲ್ಲಿ ನಿರಂತರ ಶಾಂತಿ ಅವಲಂಬಿತವಾಗಿದೆ ಎಂದು ಕೆಲ್ಲಿ ಹೇಳಿದರು. ಹೋರಾಟ ಸ್ಥಗಿತಗೊಂಡಿದ್ದನ್ನು ಸ್ವಾಗತಿಸಿದ ಅವರು, ಯುದ್ಧದಿಂದ ನಿರಾಶ್ರಿತರಾದ ಸಾವಿರಾರು ಜನರ ಹಿತರಕ್ಷಣೆ ಬಗ್ಗೆ ತಾವು ತೀವ್ರ ಕಾಳಜಿ ಹೊಂದಿರುವುದಾಗಿ ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬಾನ್ ಕಿ ಮ‌ೂನ್ ಶ್ರೀಲಂಕಾಗೆ ಭೇಟಿ
ಇಂಡೋನೇಶಿಯ ವಿಮಾನ ಅಪಘಾತ: 68 ಬಲಿ
ಸ್ವಾತ್ ಕಣಿವೆಯಲ್ಲಿ 27 ತಾಲಿಬಾನಿಗಳು ಹತ
ಮಗನ ಕಣ್ಣನ್ನು ಕಚ್ಚಿದ ಮಾದಕವ್ಯಸನಿ ತಂದೆ
ಮಾದಕವಸ್ತು ಸಾಗಣೆ: ಇರಾನ್‌ನಲ್ಲಿ ಗಲ್ಲುಶಿಕ್ಷೆ
ತಮಿಳರು, ಲಂಡನ್ ಪೊಲೀಸರ ಮಾರಾಮಾರಿ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ದೇವೇಗೌಡರ 77ನೇ ಹುಟ್ಟು ಹಬ್ಬ ಆಚರಣೆ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ..
ಜೆಡಿಎಸ್ ಕಾಂಗ್ರೆಸ್ ಜತೆ ವಿಲೀನವಾಗಲಿ: ಡಿವಿಎಸ್
ರಾಜ್ಯವನ್ನು ನಿರ್ಲಕ್ಷಿಸಿದರೆ ಎಚ್ಚರ!: ಯುಪಿಎಗೆ ಸವಾಲ್
ಮನರಂಜನೆ
ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು
ಮುಂದೆ ಓದಿ|ಮತ್ತಷ್ಟು...