|
| ಆತ್ಮಾಹುತಿ ಬಾಂಬರ್ ಸ್ಫೋಟಕ್ಕೆ 23 ಬಲಿ |
| ಬಾಗ್ದಾದ್, ಶನಿವಾರ, 3 ಜನವರಿ 2009 ( 12:16 IST ) | |
ಇರಾಕಿ ರಾಜಧಾನಿಯ ಬಳಿ ನಡೆಯುತ್ತಿದ್ದ ಬುಡಕಟ್ಟು ಜನಾಂಗದ ಸಭೆಯಲ್ಲಿ ಶುಕ್ರವಾರ ಆತ್ಮಾಹುತಿ ಬಾಂಬರ್ ಸ್ಫೋಟಿಸಿಕೊಂಡು 23 ಜನರು ಸತ್ತಿದ್ದಾರೆ ಮತ್ತು 42 ಮಂದಿ ಗಾಯಗೊಂಡಿದ್ದಾರೆ.
ಬಾಗ್ದಾದ್ನ ದಕ್ಷಿಣಕ್ಕಿರುವ ಸಣ್ಣ ಪಟ್ಟಣ ಅಲ್-ಯುಸುಫಿಯದಲ್ಲಿ ಸುನ್ನಿ ಅರಬ್ ಶೇಖರ ಸಭೆಯೊಂದರಲ್ಲಿ ಬಾಂಬರ್ ತನ್ನ ಸೊಂಟದ ಪಟ್ಟಿಯಲ್ಲಿದ್ದ ಸ್ಫೋಟಕಗಳನ್ನು ಸಿಡಿಸಿದ್ದರಿಂದಾಗಿ ಈ ದುರ್ಘಟನೆ ಸಂಭವಿಸಿದೆ. ಮಧ್ಯಾಹ್ನ 2ಗಂಟೆಗೆ ಈ ದಾಳಿ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲ ತಿಳಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಇರಾಕ್ನ ಶಕ್ತಿಶಾಲಿ ಬುಡಕಟ್ಟು ಜನಾಂಗವನ್ನು ವಿಶೇಷವಾಗಿ ಸುನ್ನಿ ಅರಬ್ ಪ್ರದೇಶಗಳಲ್ಲಿ ಅಲ್ ಖೈದಾ ವಿರುದ್ಧ ಹೋರಾಟಕ್ಕೆ ಅಮೆರಿಕ ಮಿಲಿಟರಿಯು ನೇಮಕ ಮಾಡಿತ್ತು. ಸುನ್ನಿ ಅರಬ್ ಪ್ರದೇಶಗಳು ಜಿಹಾದಿಗಳಿಂದ ಮೇಲಿಂದ ಮೇಲೆ ದಾಳಿಗೆ ಗುರಿಯಾಗಿತ್ತು.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ |
| |
|
|
|
|
|
|
|