|
| ಹಿಂದೂ ಅರ್ಚಕರನ್ನು ಬದಲಿಸಲು ಪಶುಪತಿನಾಥಕ್ಕೆ ಮುತ್ತಿಗೆ |
| ಕಾಠ್ಮಂಡು, 2 ಜನವರಿ 2009 ( 19:15 IST ) | |
ನೇಪಾಳದ ಪವಿತ್ರ ದೇವಸ್ಥಾನ ಪಶುಪತಿನಾಥದಲ್ಲಿ ಕಳೆದ 300 ವರ್ಷಗಳಿಂದ ಪೂಜೆ ಮಾಡುತ್ತಿದ್ದ ಹಿಂದೂ ಅರ್ಚಕರನ್ನು ಬದಲಿಸಿ ನೂತನವಾಗಿ ಅರ್ಚಕರನ್ನು ನೇಮಿಸಲು ಮಾವೋವಾದಿಗಳು ಗುರುವಾರ ಸಂಜೆ ದೇವಸ್ಥಾನಕ್ಕೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ. ಈ ಕ್ರಮದ ವಿರುದ್ಧ ಹಿಂದೂ ಸಂಸ್ಥೆಗಳು ಮತ್ತು ದೇವಸ್ಥಾನದ ಆಸುಪಾಸಿನಲ್ಲಿ ವಾಸಿಸುವ ಜನರು ಪ್ರತಿಭಟನೆ ವ್ಯಕ್ತಪಡಿಸಿದರು.
ಅರ್ಚಕರನ್ನು ಬದಲಿಸುವ ಕ್ರಮವು ಪ್ರಬಲ ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ನಿಂದ ಕೂಡ ವಿರೋಧ ವ್ಯಕ್ತವಾಗಿದೆ. ಆದರೆ ಸುಪ್ರೀಂಕೋರ್ಟ್ ನಿರ್ಬಂಧವನ್ನು ಧಿಕ್ಕರಿಸಿ ಮತ್ತು ಹಿಂದು ಸಂಘಟನೆಗಳ ಪ್ರತಿರೋಧದ ನಡುವೆಯೂ ಮಾವೋವಾದಿಗಳು ತಾವು ನೇಮಿಸಿದ ಅರ್ಚಕರನ್ನು ಪ್ರತಿಷ್ಠಾಪಿಸಲು ಮುನ್ನುಗ್ಗಿದರು.ಪ್ರತಿಭಟನೆಕಾರರ ವಿರುದ್ಧ ಕಠಿಣವಾಗಿ ವರ್ತಿಸಲು ಮಾವೋವಾದಿಗಳು ಪೊಲೀಸರನ್ನು ಕೂಡ ನಿಯೋಜಿಸಿದ್ದರು.
ನೂರಕ್ಕೂ ಹೆಚ್ಚು ಮಾವೋವಾದಿಗಳು ಮತ್ತು ಯುವ ಕಮ್ಯುನಿಸ್ಟ್ ಲೀಗ್ ಕಾರ್ಯಕರ್ತರು ಪಶುಪತಿನಾಥದ ಮುಖ್ಯ ದೇವಸ್ಥಾನದ ಬೀಗ ಒಡೆದು ನೂತನವಾಗಿ ತಾವು ನೇಮಿಸಿದ ಅರ್ಚಕ ವಿಷ್ಣು ಪ್ರಸಾದ್ ದಲಾಲ್ನನ್ನು ಮುಖ್ಯ ಅರ್ಚಕರ ಸ್ಥಾನದಲ್ಲಿ ಕೂರಿಸಿದರೆಂದು ಪಶುಪತಿ ಪ್ರದೇಶಾಭಿವೃದ್ಧಿ ಟ್ರಸ್ಟ್ನ ಮಾಜಿ ಸದಸ್ಯ ನರೋತ್ತಮ ವೈದ್ಯ ತಿಳಿಸಿದ್ದಾರೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ |
| |
|
|
|
|
|
|
|