ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಭಾರತದ ಬೇಡಿಕೆಗೆ ಜರ್ದಾರಿ ನಿರಾಕರಣೆ
ಇಸ್ಲಾಮಾಬಾದ್, ಬುಧವಾರ, 3 ಡಿಸೆಂಬರ್ 2008   ( 13:25 IST )
ap
20 ಮಂದಿ ತಲೆತಪ್ಪಿಸಿಕೊಂಡಿರುವ ಭಯೋತ್ಪಾದಕರನ್ನು ಹಸ್ತಾಂತರಿಸಬೇಕೆಂಬ ಭಾರತದ ಬೇಡಿಕೆಯನ್ನು ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಬುಧವಾರ ತಿರಸ್ಕರಿಸಿದ್ದಾರೆ. ತಮ್ಮ ರಾಷ್ಟ್ರವು ಮುಂಬೈನಲ್ಲಿ ನಡೆದ ಮಾರಕ ಭಯೋತ್ಪಾದನೆ ದಾಳಿಗಳಲ್ಲಿ ಭಾಗಿಯಾಗಿದೆಯೆಂಬ ಭಾರತದ ಆರೋಪವನ್ನು ಕೂಡ ಅವರು ನಿರಾಕರಿಸಿದ್ದಾರೆ.

ಅಮೆರಿಕದ ಟೆಲಿವಿಷನ್ ಜಾಲ ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ದಾಳಿಯಲ್ಲಿ ಭಾಗಿಯಾದ ಭಯೋತ್ಪಾದಕನೊಬ್ಬ ಪಾಕಿಸ್ತಾನಕ್ಕೆ ಸೇರಿದವನು ಎಂಬ ಭಾರತದ ವಾದವನ್ನು ಜರ್ದಾರಿ ಪ್ರಶ್ನಿಸಿದರು. ಅವನು ಖಂಡಿತವಾಗಿ ಪಾಕಿಸ್ತಾನಿ ಎನ್ನುವುದಕ್ಕೆ ಯಾವುದೇ ಸ್ಪಷ್ಟ ಸಾಕ್ಷ್ಯವಿಲ್ಲ ಎಂದು ಜರ್ದಾರಿ ಹೇಳಿದರು.

ಪಾಕಿಸ್ತಾನ ಈ ಆರೋಪದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಅವರು ಯಾವುದೇ ರಾಷ್ಟ್ರದ ಬೆಂಬಲವಿಲ್ಲದ ವ್ಯಕ್ತಿಗಳು ಎಂದು ಹೇಳಿ, ಕಳೆದ ಎರಡು ದಿನಗಳಿಂದ ಕರಾಚಿಯಲ್ಲಿ ಸಹ ಭಯೋತ್ಪಾದನೆಗೆ 40-45 ಜನರು ಬಲಿಯಾಗಿದ್ದಾರೆಂದು ಜರ್ದಾರಿ ತಿಳಿಸಿದರು.

ನಮಗೆ ಸಾಕ್ಷ್ಯಾಧಾರ ನೀಡಿದರೆ ಅವುಗಳನ್ನು ಖಂಡಿತವಾಗಿ ಪರಿಶೀಲನೆ ಮಾಡುವುದಾಗಿ ಅವರು ಹೇಳಿದರು. ಈ ಕ್ಷಣದಲ್ಲಿ ಕೆಲವು ವ್ಯಕ್ತಿಗಳನ್ನು ಮಾತ್ರ ಹೆಸರಿಸಲಾಗಿದ್ದು, ಯಾವುದೇ ಸಾಕ್ಷ್ಯ, ತನಿಖೆ ವರದಿಯನ್ನು ನೀಡಿಲ್ಲ ಎಂದು ಅವರು ನುಡಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪ್ರಧಾನಿಯನ್ನು ಪದಚ್ಯುತಗೊಳಿಸಿದ ಬ್ಯಾಂಕಾಕ್ ಕೋರ್ಟ್
ಕಡಲ್ಗಳ್ಳರಿಂದ ಪಾರಾದ ಅಮೆರಿಕದ ಹಡಗು
ಎನ್‌ಎಸ್‌ಜಿ ವಿರುದ್ಧ ಆರೋಪ ಸಲ್ಲದು: ಇಸ್ರೇಲ್
ಮುಂಬೈ ದಾಳಿಗೆ ಲಷ್ಕರೆ ತಯ್ಯಬಾ ಕಾರಣ: ಮೆಕೊನೆಲ್
ಒಬಾಮಾ ತಂಡದೊಂದಿಗೆ ಕಾರ್ಯನಿರ್ವಹಣೆ:ಚೀನಾ
ಸರಕಾರವನ್ನು ವಿಸರ್ಜಿಸಿದ ಥಾಯಿ ನ್ಯಾಯಾಲಯ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...