|
| ಮುಂಬೈ ದಾಳಿಗೆ ಲಷ್ಕರೆ ತಯ್ಯಬಾ ಕಾರಣ: ಮೆಕೊನೆಲ್ |
| ವಾಷಿಂಗ್ಟನ್, ಬುಧವಾರ, 3 ಡಿಸೆಂಬರ್ 2008 ( 13:00 IST ) | |
ಮುಂಬೈನಲ್ಲಿ ಕಳೆದ ವಾರ ಸಂಭವಿಸಿದ ಮಾರಕ ಭಯೋತ್ಪಾದಕ ದಾಳಿಗೆ ಅಮೆರಿಕದ ರಾಷ್ಟ್ರೀಯ ಗುಪ್ತಚರ ಇಲಾಖೆ ನಿರ್ದೇಶಕ ಮೈಕ್ ಮೆಕ್ಕೊನೆಲ್ ಲಷ್ಕರೆ ತಯ್ಯಬಾ ಉಗ್ರಗಾಮಿ ಸಂಘಟನೆಯನ್ನು ದೂಷಿಸಿದ್ದಾರೆ. ಮುಂಬೈ ದಾಳಿಗೆ ಕಾರಣಕರ್ತವಾದ ಇದೇ ಸಂಘಟನೆಯು 2006ರ ಸರಣಿ ರೈಲು ಸ್ಫೋಟಗಳ ಘಟನೆಯಲ್ಲೂ ಭಾಗಿಯಾಗಿತ್ತು ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಮಾತನಾಡುತ್ತಿದ್ದ ಮೆಕ್ಕೊನೆಲ್ ತಿಳಿಸಿದರು.
2001ಕ್ಕೆ ಹಿನ್ನೋಟ ಹರಿಸಿದರೆ ಸಂಸತ್ತಿನ ಮೇಲೆ ದಾಳಿಯಲ್ಲೂ ಇದೇ ಸಂಘಟನೆ ಭಾಗಿಯಾಗಿತ್ತು ಎಂದು ಅವರು ನುಡಿದರು. ಮೆಕೊನೆಲ್ ಲಷ್ಕರೆ ತಯ್ಯಬಾ ಹೆಸರು ಹೇಳದಿದ್ದರೂ, ವಿಭಜಿತ ಕಾಶ್ಮೀರದಲ್ಲಿ ಭಾರತದ ಆಡಳಿತದ ವಿರುದ್ಧ ಉಗ್ರಗಾಮಿ ಸಂಘಟನೆಯು ಹೋರಾಡುತ್ತಿದ್ದು, 2001ರಲ್ಲಿ ಸಂಸತ್ತಿನ ಮೇಲೆ ಮಾರಕ ದಾಳಿಗೆ ಲಷ್ಕರೆ ಕುಖ್ಯಾತಿ ಪಡೆದಿದ್ದು, ಭಾರತ, ಪಾಕ್ ನಡುವೆ ಯುದ್ಧದ ಅಂಚಿಗೆ ತಂದು ನಿಲ್ಲಿಸಿತ್ತು.
ಮುಂಬೈನಲ್ಲಿರುವ ಹೊಟೆಲ್ಗಳು ಮತ್ತು ವಾಣಿಜ್ಯ ಕೇಂದ್ರಗಳ ಮೇಲೆ ಸಮುದ್ರ ಮಾರ್ಗದಿಂದ ದಾಳಿಕೋರರರು ಗುರಿಇರಿಸಲಿದ್ದಾರೆಂದು ಅಮೆರಿಕದ ಅಧಿಕಾರಿಗಲು ಅಕ್ಟೋಬರ್ನಲ್ಲೇ ಭಾರತಕ್ಕೆ ಎಚ್ಚರಿಸಿತ್ತು ಎಂದು ಅಮೆರಿಕದ ಮಾಧ್ಯಮ ವರದಿಗಳು ತಿಳಿಸಿವೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|