|
| ಪಾಕ್ ಸೇನೆ ಉಗ್ರರನ್ನು ಸದೆಬಡೆಯಲಿ:ನ್ಯಾಟೋ |
| ಬ್ರುಸೆಲ್ಸ್, ಮಂಗಳವಾರ, 2 ಡಿಸೆಂಬರ್ 2008 ( 13:56 IST ) | |
ಮುಂಬೈಯಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಭಾರತದ ವಿರುದ್ಧ ಉದ್ರಿಕ್ತ ವಾತಾವರಣ ನಿರ್ಮಾಣ ಮಾಡುವುದನ್ನು ಬಿಟ್ಟು ಬುಡಕಟ್ಟು ಪ್ರದೇಶಗಳಲ್ಲಿರುವ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಪಾಕಿಸ್ತಾನ ಮುಂದುವರಿಸಲಿ ಎಂದು ಪಾಕ್ಗೆ ನ್ಯಾಟೋ ಪಡೆಗಳು ಸಲಹೆ ನೀಡಿವೆ.
ಪಾಕಿಸ್ತಾನ ಬುಡಕಟ್ಟು ಪ್ರದೇಶಗಳಲ್ಲಿರುವ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರಿಸಿದಲ್ಲಿ ಮುಂಬೈಯಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ನ್ಯಾಟೋ ವಕ್ತಾರ ಜೇಮ್ಸ್ ಅಪ್ಪಾತುರೈ ಹೇಳಿದ್ದಾರೆ.
ಅಫಘಾನ್ ಗಡಿಯಲ್ಲಿರುವ ಪಾಕ್ ಸೇನೆಯನ್ನು ಭಾರತ ಗಡಿಗೆ ಸಾಗಿಸುವ ಸರಕಾರದ ಪ್ರಯತ್ನವನ್ನು ಟೀಕಿಸಿದ ಜೇಮ್ಸ್, ಇಂತಹ ಕ್ರಮಗಳಿಂದಾಗಿ ಉಗ್ರರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಬ್ರುಸೆಲ್ಸ್ನಲ್ಲಿ 26 ವಿದೇಶಾಂಗ ಸಚಿವರ ಸಭೆ ಮುಂದಿರುವಂತೆ ನ್ಯಾಟೋ ಪಡೆಗಳ ವಕ್ತಾರರಾದ ಜೇಮ್ಸ್ ಮಾತನಾಡಿ , ಪಾಕಿಸ್ತಾನ ಸರಕಾರ ಉತ್ತರ ಭಾಗದಲ್ಲಿ ಉಗ್ರರ ವಿರುದ್ಧ ಹೋರಾಡಲು ಸಶಕ್ತ ಎಂದು ತೋರಿಸಿಕೊಟ್ಟಿದೆ. ಅದನ್ನು ದೇಶದ ಇತರ ಭಾಗಗಳಲ್ಲಿ ಕೂಡಾ ಉಗ್ರರ ವಿರುದ್ಧ ಸೇನಾಕಾರ್ಯಾಚರಣೆಯನ್ನು ಮುಂದುವರಿಸುವಂತೆ ಪಾಕ್ ಸರಕಾರಕ್ಕೆ ಕೋರಿದ್ದಾರೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|