ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಭಾರತದ ಪಡೆಗಳಿಂದ ಅಪಕ್ವ ಕ್ರಮ: ಇಸ್ರೇಲಿ ತಜ್ಞರು
ಮುಂಬೈ, ಶನಿವಾರ, 29 ನವೆಂಬರ್ 2008   ( 11:28 IST )
ಮುಂಬೈನಲ್ಲಿ ಭಯೋತ್ಪಾದಕರು ಸ್ವಾಧೀನಪಡಿಸಿಕೊಂಡ ಹೊಟೆಲ್ ಆವರಣಕ್ಕೆ ಮುತ್ತಿಗೆ ಹಾಕುವಲ್ಲಿ ಭಾರತದ ಭದ್ರತಾ ಪಡೆಗಳು ಅಪಕ್ವತೆಯನ್ನು ಪ್ರದರ್ಶಿಸಿವೆ ಎಂದು ಇಸ್ರೇಲಿ ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒತ್ತೆಯಾಳು ಸಮಸ್ಯೆಯನ್ನು ನಿಭಾಯಿಸಿದ ರೀತಿಯ ಬಗ್ಗೆ ಟೀಕಿಸಿದ ತಜ್ಞರು, ಭದ್ರತಾ ಪಡೆ ಮೊದಲು ಆ ಪ್ರದೇಶವನ್ನು ಮುಕ್ತಗೊಳಿಸಿ, ಭಯೋತ್ಪಾದಕರ ಬಗ್ಗೆ ಗುಪ್ತಚರ ವರದಿಗಳನ್ನು ಸಂಗ್ರಹಿಸಿದ ಬಳಿಕ ಕಾರ್ಯಾಚರಣೆ ಆರಂಭಿಸಬೇಕಿತ್ತು ಎಂದು ಮಾಧ್ಯಮ ವರದಿ ತಿಳಿಸಿದೆ.ಒತ್ತೆಯಾಳು ಪರಿಸ್ಥಿತಿಗಳಲ್ಲಿ, ಪಡೆಗಳು ಮಾಡಬೇಕಾದ ಮೊದಲ ಕೆಲಸವೆಂದರೆ, ಆ ಪ್ರದೇಶದಲ್ಲಿ ಸೇರಿ ಬೇಹುಗಾರಿಕೆ ವರದಿಗಳನ್ನು ಸಂಗ್ರಹಿಸುವುದು ಎಂದು ಇಸ್ರೇಲ್ ಮಾಜಿ ಅಧಿಕಾರಿಯೊಬ್ಬರು ತಿಳಿಸಿದರು.

ಈ ಪ್ರಕರಣದಲ್ಲಿ ಪಡೆಗಳು ಸ್ಥಳಕ್ಕೆ ಧಾವಿಸಿ ಆ ಪ್ರದೇಶವನ್ನು ಮೊದಲು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳದೇ ಹಠಾತ್ತಾಗಿ ಗುಂಡಿನ ದಾಳಿ ನಡೆಸಿದಂತೆ ಕಾಣುತ್ತದೆ ಎಂದು ಅವರು ನುಡಿದರು.ಇಸ್ರೇಲ್ ಭಾರತಕ್ಕೆ ಕಮಾಂಡೊ ಘಟಕ ಕಳಿಸಲು ಯೋಜಿಸಿಲ್ಲ. ಆದರೆ ಯಾವುದೇ ನೆರವು ನೀಡುವ ಪ್ರಸ್ತಾಪ ಮಾಡಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಐಎಸ್‌ಐ ಮುಖ್ಯಸ್ಥರ ಭೇಟಿಯಿಲ್ಲ: ಪಾಕಿಸ್ತಾನ ಉಲ್ಟಾ
25 ಭಾರತೀಯ ಸಿಬ್ಬಂದಿಗಳಿದ್ದ ಹಡಗು ಅಪಹರಣ
ಮುಂಬೈ ದಾಳಿಗೆ ಇಬ್ಬರು ಆಸ್ಟ್ರೇಲಿಯನ್ನರು ಬಲಿ
ಬಾಗ್ದಾದ್: ಆತ್ಮಾಹುತಿ ಬಾಂಬ್ ದಾಳಿಗೆ 12 ಬಲಿ
ಬ್ರೆಜಿಲ್‌ನಲ್ಲಿ ಪ್ರವಾಹಕ್ಕೆ 97 ಜನರ ಬಲಿ
ಭಾರತಕ್ಕೆ ಎಫ್‌ಬಿಐ ತನಿಖೆದಾರರು, ವಿಧಿವಿಜ್ಞಾನ ತಜ್ಞರು
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...