ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಕಾರ್ ಬಾಂಬ್ ಸ್ಫೋಟಿಸಿ 12 ಜನರ ಸಾವು
ಬಾಗ್ದಾದ್, ಶನಿವಾರ, 11 ಅಕ್ಟೋಬರ್ 2008   ( 12:15 IST )
ದಕ್ಷಿಣ ಬಾಗ್ದಾದ್ ನೆರೆಯ ದೋರಾದಲ್ಲಿ ಕಿಕ್ಕಿರಿದ ಮಾರುಕಟ್ಟೆ ಪ್ರದೇಶದ ಮೇಲೆ ಕಾರ್ ಬಾಂಬ್ ಸ್ಫೋಟಿಸಿ ಶುಕ್ರವಾರ ಕನಿಷ್ಠ 12 ಜನರು ಸತ್ತಿದ್ದಾರೆ ಮತ್ತು 26 ಮಂದಿ ಗಾಯಗೊಂಡಿದ್ದಾರೆ.

ಅಬು ಷಿರ್ ಮಾರುಕಟ್ಟೆಯಲ್ಲಿ ಸಂಭವಿಸಿದ ಈ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸತ್ತವರಲ್ಲಿ ಸೇರಿದ್ದು, ಸುಮಾರು 12 ಅಂಗಡಿಗಳು ನಾಶವಾಗಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದು, ಅನೇಕ ದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿದೆ ಎಂದು ನುಡಿದರು.

ದೋರಾದಲ್ಲಿ ಕೆಲವು ದಿನಗಳ ಮುಂಚೆ ಮಿನಿಬಸ್‌ವೊಂದರ ಬಳಿ ಬಾಂಬ್ ಸ್ಫೋಟಿಸಿ ನಾಗರಿಕನೊಬ್ಬ ಸತ್ತಿದ್ದು ಹತ್ತಾರು ಜನರು ಗಾಯಗೊಂಡಿದ್ದರೆಂದು ಒಳಾಡಳಿತ ಸಚಿವಾಲಯದ ಅಧಿಕಾರಿ ತಿಳಿಸಿದರು.

ಮಧ್ಯಾಹ್ನದ ವೇಳೆಗೆ ಮೊಸುಲ್‌ ಪ್ರಕ್ಷುಬ್ಧ ಪ್ರದೇಶದ ಮಾರುಕಟ್ಟೆಯೊಂದರಲ್ಲಿ ಬಾಂಬ್ ಸ್ಫೋಟಿಸಿ ಇಬ್ಬರು ಸತ್ತಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆಂದು ಪೊಲೀಸ್ ಅಧಿಕಾರಿ ತಿಳಿಸಿದರು. ನಿನೇವೆ ಪ್ರಾಂತ್ಯದ ರಾಜಧಾನಿ ಮೊಸುಲ್ ಪಟ್ಟಣ ಪ್ರದೇಶದಲ್ಲಿ ಅಲ್ ಕೈದಾದ ಕೊನೆಯ ಭದ್ರನೆಲೆಯಾಗಿದ್ದು, ರಾಷ್ಟ್ರದ ಅಪಾಯಕಾರಿ ನಗರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಶೋಭರಾಜ್ ವಿವಾಹ ಕೇವಲ ವದಂತಿ
ಡಯಾನ, ಸಾರಾ ಪಾಲಿನ್ ಸೋದರಸಂಬಂಧಿಗಳು
ಫಿನ್‌ಲ್ಯಾಂಡ್ ಮಾಜಿ ಅಧ್ಯಕ್ಷ ಅಹ್ತಿಸಾರಿಗೆ ನೊಬೆಲ್ ಪ್ರಶಸ್ತಿ
ತಾಲಿಬಾನ್ ನೆಲೆಗಳ ಮೇಲೆ ದಾಳಿಗೆ 21 ಉಗ್ರರು ಹತ
ಭಯೋತ್ಪಾದನೆ ಕ್ಯಾನ್ಸರ್ ನಿರ್ಮ‌ೂಲನೆಗೆ ಜರ್ದಾರಿ ಪ್ರತಿಜ್ಞೆ
ನಿಹಿತಾ ಬಿಸ್ವಾಸ್ ಜತೆ ಶೋಭರಾಜ್ ವಿವಾಹಬಂಧ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ವಿಧಾನಸಭೆ ವಿಸರ್ಜಿಸಲಿ:ಧರಂ ಸವಾಲು
ಸಂಘ ಪರಿವಾರದ ಅಜಂಡಾದಂತೆ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ಅವರಿಗೆ....
ಸಮಾಜವಾದಿ-ಕಾಂಗ್ರೆಸ್ ಮೈತ್ರಿ: ಬಂಗಾರಪ್ಪ ಸ್ಪಷ್ಟನೆ
ಕೆಪಿಸಿಸಿ ಪುನರ್ ರಚನೆ: ಅಧ್ಯಕ್ಷರಿಗೆ ಸವಾಲು
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...