|
| ದುಬೈ ಹೆಲಿಕಾಪ್ಟರ್ ಅಪಘಾತಕ್ಕೆ 7 ಮಂದಿ ಬಲಿ |
| ದುಬೈ, 4 ಸೆಪ್ಟೆಂಬರ್ 2008 ( 17:09 IST ) | |
ದುಬೈತೀರದಲ್ಲಿ ತೈಲಕೊರೆಯುವ ಘಟಕದ ಮೇಲೆ ಹೆಲಿಕಾಪ್ಟರ್ ಅಪ್ಪಳಿಸಿ ಅದರಲ್ಲಿದ್ದ ಇಬ್ಬರು ಭಾರತೀಯರು ಸೇರಿದಂತೆ ಎಲ್ಲಾ 7 ಜನರು ಮೃತಪಟ್ಟ ಘಟನೆ ಬುಧವಾರ ಸಂಭವಿಸಿದ್ದು, ರಷೀದ್ ತೈಲಕೇಂದ್ರವನ್ನು ಈ ಹಿನ್ನೆಲೆಯಲ್ಲಿ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಯುಕ್ತ ಅರಬ್ ಎಮೈರೇಟ್ಸ್ನ ತೈಲ ಉತ್ಪಾದನೆಯಲ್ಲಿ ದುಬೈ ಕೆಲವು ಭಾಗ ತೈಲ ಉತ್ಪಾದನೆ ಮಾಡುತ್ತಿದ್ದು, ವಿಶ್ವದ ಐದನೇ ದೊಡ್ಡ ತೈಲರಪ್ತು ದೇಶವೆಂದು ಹೇಳಲಾಗಿದೆ. ದುಬೈ ಮುಖ್ಯ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ದುಬೈತೀರಕ್ಕೆ 70ಕಿಮೀ ದೂರವಿರುವ ತೈಲಘಟಕಕ್ಕೆ ತೆರಳುತ್ತಿದ್ದಾಗ ತೈಲ ಕೊರೆಯುವ ರಿಗ್ನ ಡಕ್ಕೆಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಡಿಕ್ಕಿ ಹೊಡೆದ ಕೂಡಲೇ ಹೆಲಿಕಾಪ್ಟರ್ ಚೂರುಚೂರಾಗಿ ಸಮುದ್ರಕ್ಕೆ ಬಿತ್ತು ಎಂದು ದುಬೈ ಸರ್ಕಾರದ ಸಾಗರೋತ್ತರ ತೈಲಕ್ಷೇತ್ರದ ನಿರ್ವಾಹಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ರಘು ದೀಕ್ಷಿತ್ ಅವರ ಸಂಗೀತಕ್ಕೆ ನಟ ಸುದೀಪ್ ಕೂಡಾ ತಲೆದೂಗಿದ್ದಾರೆ. ಸುದೀಪ್ ತಮ್ಮ ಸ್ವಂತ ಬ್ಯಾನರ್ನಲ್ಲಿ ನಿರ್ಮಿಸುತ್ತಿರುವ ಚಿತ್ರವೊಂದಕ್ಕೆ ರಘು ದೀಕ್ಷಿತ್ ಅವರನ್ನು ಆಯ್ಕೆ ಮಾಡಿದ್ದಾರೆ. ಅವರು ಒಬ್ಬ ಉತ್ತಮ ಸಂಗೀತ ನಿರ್ದೇಶಕ ಎನ್ನುವುದರಲ್ಲಿ ಸಂದೇಹವಿಲ್ಲವೆನ್ನುತ್ತಾರೆ ಸುದೀಪ್. |
| |
|
|
|
|
|
|
|