|
| ತಾಯ್ನಾಡಿಗೆ ಹಿಂತಿರುಗಲು ಕಲಾವಿದ ಹುಸೇನ್ ನಿರ್ಧಾರ |
| ಲಂಡನ್, ಮಂಗಳವಾರ, 22 ಜುಲೈ 2008 ( 16:23 IST ) | |
ದೇಶಭ್ರಷ್ಟರಾಗಿ ಲಂಡನ್ಗೆ ತೆರಳಿದ್ದ ಭಾರತ ಪ್ರಖ್ಯಾತ ಚಿತ್ರಕಲಾವಿದ ಮಕ್ಬೂಲ್ ಫಿದಾ ಹುಸೇನ್ ಅವರು ತಾಯ್ನಾಡಿಗೆ ಹಿಂತಿರುಗಲು ತೀರ್ಮಾನಿಸಿದ್ದಾರೆ. ಹಿಂದು ದೇವತೆಗಳನ್ನು ನಗ್ನವಾಗಿ ಚಿತ್ರಿಸಿದ್ದರ ವಿರುದ್ಧ ಹಿಂದುಗಳು ಪ್ರತಿಭಟಿಸಿದ್ದರಿಂದ ಹುಸೇನ್ ಲಂಡನ್ಗೆ ತೆರಳಿದ್ದರು.
ಭಾರತ ತಮ್ಮ ತಾಯ್ನಾಡು, ತಮ್ಮ ಪ್ರಸಕ್ತ ಕೆಲಸ ಮುಗಿದ ಬಳಿಕ ತಾಯ್ನಾಡಿಗೆ ವಾಪಸಾಗುವುದಾಗಿ ಹೇಳಿದ ಅವರು, ಯಾರಾದರೂ ತಡೆಯುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ವರ್ಣಚಿತ್ರಗಳ ಪ್ರದರ್ಶನ ಉದ್ಘಾಟನೆ ಸಮಾರಂಭದಲ್ಲಿ ಹುಸೇನ್ ಅಪರೂಪವಾಗಿ ಸಾರ್ವಜನಿಕರಿಗೆ ಕಾಣಿಸಿಕೊಂಡರು. ದೆಹಲಿ ಹೈಕೋರ್ಟ್ ಅವರ ಪರವಾಗಿ ಮೇನಲ್ಲಿ ದೃಢವಾದ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಹುಸೇನ್ ತಾಯ್ನಾಡಿಗೆ ಮರಳಲು ನಿರ್ಧರಿಸಿದ್ದಾರೆ.
ಚಿತ್ರಕಾರನ ವಿರುದ್ಧ ಅಶ್ಲೀಲತೆಯ ಆರೋಪಗಳನ್ನು ಮಾಡಿದವರನ್ನು ಟೀಕಿಸಿದ ನ್ಯಾಯಾಧೀಶ ಸಂಜಯ್ ಕಿಶನ್ ಕೌಲ್, ಕಲಾವಿದರು ತಮ್ಮ ಸ್ವಂತಪರಿಕಲ್ಪನೆಯಲ್ಲಿ ವಸ್ತುಗಳನ್ನು ನೋಡುತ್ತಾರೆ ಮತ್ತು ಅವರ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಅದು ಆಧಾರವಿಲ್ಲ ಎಂದು ತೀರ್ಪಿತ್ತಿದ್ದಾರೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|