|
| ತಜ್ಞರ ತಂಡದ ನೇಮಕದ ಸಲಹೆಗೆ ಬೆಂಬಲ: ಸಾರ್ಕೋಜಿ |
| ಪ್ಯಾರಿಸ್, ಸೋಮವಾರ, 7 ಜುಲೈ 2008 ( 18:11 IST ) | |
ಜಾಗತಿಕ ಆಹಾರ ಬಿಕ್ಕಟ್ಟು ನಿಭಾಯಿಸಲು ತಜ್ಞರ ತಂಡವೊಂದನ್ನು ಸೃಷ್ಟಿಸಬೇಕು ಎಂಬ ತಮ್ಮ ಸಲಹೆಗೆ ಅಂತಾರಾಷ್ಟ್ರೀಯ ಬೆಂಬಲ ಸಿಕ್ಕಿದೆ ಎಂದು ಫ್ರಾನ್ಸ್ ಅದ್ಯಕ್ಷ ನಿಕೋಲಾಸ್ ಸಾರ್ಕೋಜಿ ತಿಳಿಸಿದ್ದಾರೆ. ಜಪಾನಿನ ಉತ್ತರ ದ್ವೀಪ ಹೊಕೈಡೊನಲ್ಲಿ ಜಿ-8ರಾಷ್ಟ್ರಗಳ ಶೃಂಗಸಭೆ ನಡೆಯುತ್ತಿರುವ ನೇಪಥ್ಯದಲ್ಲಿ, 21ನೇ ಶತಮಾನದಲ್ಲಿ ನಾವು ಭೂಮಿಯ ಜನರಿಗೆ ಆಹಾರ ಒದಗಿಸಲು ಶಕ್ತರಾಗಬೇಕು ಎಂದು ನುಡಿದರು.
ಹವಾಮಾನ ಬದಲಾವಣೆ ಕುರಿತು ಅಂತರಸರ್ಕಾರಿ ಸಮಿತಿಯ ರೀತಿಯಲ್ಲೇ ಆಹಾರ ವಿಷಯಗಳ ಬಗ್ಗೆ ಉನ್ನತತಜ್ಞರ ಸಮಿತಿ ಸೃಷ್ಟಿಸುವ ಪ್ರಸ್ತಾವನೆಯನ್ನು ಸಾರ್ಕೋಜಿ ಕಳೆದ ತಿಂಗಳಾರಂಭದಲ್ಲಿ ಮಾಡಿದ್ದರು. ಆಹಾರ ಸಮಸ್ಯೆಗಳ ಬಗ್ಗೆ ಅರಿಯಲು ಮತ್ತು ನಾವು ಅದಕ್ಕೆ ಸೂಕ್ತವಾಗಿ ಸ್ಪಂದಿಸಲು ಜಗತ್ತಿಗೆ ಈ ಸಮಿತಿಯ ಅಗತ್ಯವಿದೆ ಎಂದು ನುಡಿದರು.
ತೈಲಬೆಲೆಗಳ ಏರಿಕೆ, ಬೇಡಿಕೆ ಹೆಚ್ಚಳ, ತೀವ್ರ ತಾಪಮಾನ, ಜೈವಿಕ ಇಂಧನದ ಅಧಿಕ ಉತ್ಪಾದನೆಯಿಂದ ಇತ್ತೀಚಿನ ತಿಂಗಳುಗಳಲ್ಲಿ ಆಹಾರಬೆಲೆಗಳು ವಿಶ್ವಾದ್ಯಂತ ಏರಿಕೆಯಾಗಿದೆ.ಈ ಬಿಕ್ಕಟ್ಟಿನಿಂದ ಆಫ್ರಿಕಾ ಮತ್ತು ಏಷ್ಯಾದ ಪ್ರತಿಭಟನೆಗಳು ಸ್ಫೋಟಿಸಿದ್ದು, ವ್ಯಾಪಕ ಅಪೌಷ್ಠಿಕತೆ ಮತ್ತು ಆರ್ಥಿಕ ಅಸ್ಥಿರತೆಯ ಭಯ ಹುಟ್ಟಿಸಿದೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಚಿತ್ರರಂಗದಲ್ಲಿ ಒಂದಲ್ಲ ಒಂದು ಗೊಂದಲ ಸೃಷ್ಟಿಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಒಂದು ಗೊಂದಲ ಸೃಷ್ಟಿಯಾಗಿದೆ. ಅದು ಚಿತ್ರರಂಗದ ಮಂದಿಯದ್ದಲ್ಲ. ಬದಲಾಗಿ ಪ್ರೇಕ್ಷಕರ ನಡುವೆ. 'ನಿನ್ನ ಪೂಜೆಗೆ ಬಂದೆ ಮಾದೇಶ್ವರ' ಹಾಡು ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಆದರೆ ಇದು ಯಾವ ಚಿತ್ರದ ಹಾಡು? |
| |
|
|
|
|
|
|
|