|
| 42 ಕೊಲೆ: ಮಾಟಗಾರನಿಗೆ ಗುಂಡೇಟಿನ ಶಿಕ್ಷೆ |
| ಜಕಾರ್ತ, 4 ಜುಲೈ 2008 ( 15:57 IST ) | |
ಅಸಾಮಾನ್ಯ ಶಕ್ತಿಯನ್ನು ಗಳಿಸುವ ಗುರಿಯೊಂದಿಗೆ ಮಾಟಮಂತ್ರದ ಆಚರಣೆ ಮೂಲಕ 42 ಮಹಿಳೆಯರನ್ನು ಅಮಾನುಷವಾಗಿ ಹತ್ಯೆ ಮಾಡಿದ ಇಂಡೊನೇಶಿಯದ ವ್ಯಕ್ತಿಯೊಬ್ಬನನ್ನು ಫೈರಿಂಗ್ ತುಕಡಿಯು ಶೀಘ್ರದಲ್ಲೇ ಗುಂಡಿಕ್ಕಿ ಕೊಲ್ಲಲಿದೆ ಎಂದು ಪ್ರಾಸಿಕ್ಯೂಟರ್ ಗುರುವಾರ ತಿಳಿಸಿದ್ದಾರೆ.
ಸ್ವಯಂಘೋಷಿತ ಶಾಮಾನ್ ಅಹ್ಮದ್ ಸುರಜಿ ಉತ್ತರ ಸುಮಾತ್ರದ ಕಬ್ಬಿನ ಗದ್ದೆಯಲ್ಲಿ ಮಹಿಳೆಯರ ದೇಹಗಳನ್ನು ಹೂಳಿದ್ದನ್ನು ಪೊಲೀಸರು ಪತ್ತೆಹಚ್ಚಿದ ಬಳಿಕ ಅವನಿಗೆ 1998ರಲ್ಲಿ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಯಿತು.
ಹಣಕಾಸು ಮತ್ತು ವೈವಾಹಿಕ ಸಮಸ್ಯೆಗಳ ನಿವಾರಣೆ ಸಲುವಾಗಿ ತಮ್ಮ ನೆರವು ಕೋರುತ್ತಿದ್ದ ಮಹಿಳೆಯರನ್ನು ಕುತ್ತಿಗೆ ಹಿಸುಕಿ ಕೊಂದು ಬಳಿಕ ಅವರ ಜೊಲ್ಲುರಸವನ್ನು ಕುಡಿಯುತ್ತಿದ್ದನೆಂದು ಸುರಜಿ ತಪ್ಪೊಪ್ಪಿಕೊಂಡಿದ್ದಾನೆ. ಜೊಲ್ಲುರಸ ಕುಡಿಯುವುದರಿಂದ ತನ್ನ ಮಾಂತ್ರಿಕ ಶಕ್ತಿ ಹೆಚ್ಚುತ್ತದೆಂದು ಅವನು ನಂಬಿದ್ದ. ಇಂಡೋನೇಶಿಯ ಮುಸ್ಲಿಂ ಜನಾಂಗದವರ ಪ್ರಾಬಲ್ಯವಿದ್ದರೂ, ಜನರು ಮಾಟಮಂತ್ರದಲ್ಲಿ ಇನ್ನೂ ನಂಬಿಕೆಯಿರಿಸಿದ್ದಾರೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಮ್ಮ ಸಾಮರ್ಥ್ಯದ ಬಗ್ಗೆ ಇಂದು ನೀವು ಹೆಚ್ಚು ಭರವಸೆಯಿಂದಿರುತ್ತೀರಿ.ಮುಖ್ಯ ಕೆಲಸವೊಂದರ ಪ್ರಯತ್ನದಲ್ಲಿ ನಿಮಗೆ ಹೆತ್ತವರ ನೆರವು ದೊರೆಯಲಿದೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮತ್ತು ನಿಮಗೆ ಮಾನಸಿಕ ನಿರಾಳತೆ ನೀಡುತ್ತವೆ. ಮಿತ್ರರ ಸಹಕಾರವೂ ದೊರೆಯಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಪೈರಸಿ ಮಾಡುವವರನ್ನು ವಿರುದ್ಧ ಗೂಂಡಾ ಕಾಯ್ದೆ ಅಡಿ ಬಂಧಿಸಬೇಕೆಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ವಾಣಿಜ್ಯ ಮಂಡಳಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ |
| |
|
|
|
|
|
|
|