|
| ನೈರುತ್ಯ ಚೀನಾದಲ್ಲಿ ಅಪ್ಪಳಿಸಿದ ಭೂಕಂಪ |
| ಚೀನಾ(ಏಜೆನ್ಸಿ), 12 ಮೇ 2008 ( 15:53 IST ) | |
ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಶಕ್ತಿಶಾಲಿ ಭೂಕಂಪ ಸೋಮವಾರ ಅಪ್ಪಳಿಸಿದ್ದು, 5 ಜನರು ಸತ್ತಿರುವ ಬಗ್ಗೆ ವರದಿಯಾಗಿದೆ. ಬೀಜಿಂಗ್ ಮತ್ತು ಶಾಂಘಾಯ್ನಲ್ಲಿ ಮತ್ತು ರಾಷ್ಟ್ರದ ಇತರೆ ನಗರಗಳಲ್ಲಿ ಕಂಪನಗಳ ಅನುಭವ ಉಂಟಾಗಿದೆ ಎಂದು ಅಧಿಕೃತ ಸುದ್ದಿಸಂಸ್ಥೆ ತಿಳಿಸಿದೆ.
ಸಿಚುವಾನ್ ಪ್ರಾಂತೀಯ ರಾಜಧಾನಿ ಚೆಂಗ್ಡುವಿಗೆ 146 ಕಿಮೀ ವಾಯವ್ಯದಲ್ಲಿ ವೆಂಚುಯಾನ್ ಕೌಂಟಿಯಲ್ಲಿ ಈ ಭೂಕಂಪ ಅಪ್ಪಳಿಸಿದೆ ಎಂದು ಭೂಕಂಪ ಮಾಪನ ಬ್ಯೂರೋ ತಿಳಿಸಿದೆ. ಪೂರ್ವ ಬೀಜಿಂಗನ್ನು ಕೂಡ ಶೇ.3.9ರಷ್ಟು ಕಡಿಮೆ ತೀವ್ರತೆಯ ಭೂಕಂಪ ಅಪ್ಪಳಿಸಿದೆ ಎಂದು ಚೀನಾ ಭೂಕಂಪ ಮುನ್ಸೂಚನೆ ಜಾಲ ತಿಳಿಸಿದೆ.
ಭೂಕಂಪ ಅಪ್ಪಳಿಸುತ್ತಿದ್ದಂತೆ ಕಟ್ಟಡಗಳು ಅದುರಿದವು. ಜನರು ಭಯಭೀತಿಯಿಂದ ರಸ್ತೆಗಳಿಗೆ ಓಡಿದರು. ಚೆಂಗ್ಡುವಿನ ಕೆಲವು ವಸತಿ ಕಟ್ಟಡಗಳ ಗೋಡೆಗಳಲ್ಲಿ ಬಿರುಕುಬಿಟ್ಟಿದೆ. ಚೆಂಗ್ಡು, ಚಾಂಗ್ಕಿಂಗ್ ನಗರಗಳ ದೂರಸಂಪರ್ಕ ಜಾಲಗಳ ಸಂಪರ್ಕ ಕಡಿದಿವೆ. ಚೀನಾದ ಆರ್ಥಿಕ ನಗರ ಶಾಂಘಾಯ್ನಲ್ಲಿ ಹಾಂಕಿಯಾವೊ ಮತ್ತು ನಾಂಜಿಂಗ್ ಕಚೇರಿ ಕಟ್ಟಡಗಳಿಂದ ಜನರು ಹೊರಗೋಡಿದರು ಎಂದು ಏಜೆನ್ಸಿ ತಿಳಿಸಿದೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಾಟಕರಂಗದಲ್ಲಿ ಹೆಸರು ಗಳಿಸಿದ ಸರದೇಶ್ಪಾಂಡೆ ಈಗ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಹುಡುಕಲು ಬಂದಿದ್ದಾರೆ. 'ಐಡಿಯಾ ಮಾಡ್ಯಾರ' ಎಂಬ ಚಿತ್ರವನ್ನು ಇವರು ನಿರ್ದೇಶಿಸುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ಚಿತ್ರ ಮುಹೂರ್ತ ಕಾಣಲಿದೆ. |
| |
|
|
|
|
|
|
|